ಪುಟ:ಕಥಾಸಂಗ್ರಹ ಸಂಪುಟ ೨.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಕಥಾಸಂಗ್ರಹ-೪ ನೆಯ ಭಾಗ ಸೆಂದು ಆಜ್ಞಾಪಿಸಲು ಕೂಡಲೆ/ಯಕ್ಷಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊ ಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. ಆಗ ರಾಕ್ಷಸರ ಬಲವು ಬ೦ದು ಯಕ್ಷರ ಬಲಕ್ಕೆದುರಾಗಿ ನಿಂತು-ದಶಾನನೂ ಧನಪತಿಯ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿ ದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಜಾ ಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀ ರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯಂಕರವಾಗಿದ್ದಿತು. ಯ ಕಾ ನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷ ಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ಆ ಬಾಣ ಹತಿಯಿಂದ ಅನೇಕರು ಕೈ ಕಾಲುರಿದು ಕಿವಿಮಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋ ಗಲು ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು, ಪ್ರಹ ಸ್ತನು ಬಂದು ಮಾಣಿಭದ್ರನನ್ನೆ ದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತ ನೊಡನೆ ಯುದ್ಧಕ್ಕೆ ಆರಂಭಿಸಿ ಅವನ ಗದಾಘಾತದಿಂದ ಕಿವಿ ಕಣಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆ ತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ದಿಶಾಲಿ ಯಾದ ಎಲೈ ಮಾರೀಚನೇ ! ಇದರ ನಿಜಸ್ಥಿತಿಯನ್ನು ಹೇಳೆಂದು ಕೇಳಲು ಆ ಮಾರೀ ಚನು-ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮ೦ದ್ರಾದಿ ದೇವತೆಗ ಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಷಾದಿ ಕಾಮ ಚಾರಿಗಳಿಗೂ ಮಹದೇವಸ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ಹಿಂದಿರುಗು, ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು. ಆಗ ದಶ ಕಂಠನು ಶಂಕರನ ಎರಡನೆಯ ರೂಪಿಯಾದ ನಂದೀಕೇಶ್ವರನ ಮುಖವನ್ನು ನೋಡಿ ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ಧಿ ಶೂನ್ಯನಾಗಿ