ಪುಟ:ರಾಣಾ ರಾಜಾಸಿಂಹ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ರಾಣಾ ರಾಜಸಿಂಹ [ಪ್ರಕರಣ s vvv • vvvv /wv v Nvv Iw vvv » ೨v\ Y\ \ ರೆಯಬಹುದೆಂದು ಆತುರಮಾಡುತ್ತಿದ್ದರು, ಅದರಿಂದ ಸೇನೆಯವರು ಸಲುಬಿಟ್ಟು ಹೊರಬೀಳುವ ಗೊಂದಲವಬ್ಬಿಸಿದರು. ಉದೇಪ್ರರದ ಬೇಗ ಮೃಳನ್ನೂ ಜೇಬಉಸಳನ್ನೂ ಬಿಡಿಸಿಕೊಂಡು ಉದೇಪುರವನ್ನು ನೆಲಸಮ ಮಾಡುವ ವಿಚಾರದಲ್ಲಿ ಬಾದಶಹನು ಮಗ್ಗ ನಾಗಿದ್ದನು, ಕ್ಷಣವು ತಾಸಿ ನಂತಾಗಿತ್ತು ಕಡೆಗೆ ಮೊಗಲಸೇನೆಯು ಬಿಂಡಿಯ ಬಾಯಿಗೆ ಬಂತು. ಬಂದು ನೋಡುತ್ತಾರೆ ಇದೇನು ? ಮುಸಲ್ಮಾನರ ಸರ್ವನಾಶದ ಸಾಧ ನವು ಎದುರಿಗೆ ನಿಂತುಕೊಂಡಿದೆ. ರಜಪೂತರು ರಾತ್ರಿಯ ಹೊತ್ತಿನಲ್ಲಿ ದೊಡ್ಡ ದೊಡ್ಡ ಮರಗಳನ್ನು ಕಡಿದು ಮೇಲಿನಿಂದ ಕೆಳಕ್ಕೆ ಉರುಳಿಸಿ ಬಿಂಡಿಯ ಬಾಯಿಯನ್ನು ಮುಚ್ಚಿಬಿಟ್ಟಿದ್ದರು. ದೊಡ್ಡದೊಡ್ಡ ಮರಗಳ ಬೊಡ್ಡ ಟೊಂಗೆ ಎಲೆಗಳಿಂದ ಕಾಲಿಕ್ಕ ದಂತಾಗಿತ್ತು, ಅದರೊಳಗಿಂದ ಒಂದು ಸಂಣನಾಯಿಯು ಹಾಯ್ದು ಹೋಗುವದು ಪ್ರಯಾಸ ವಾಗಿತ್ತು ಆನೆಗಳ ಗತಿ ಏನು ? ಕುದುರೆಗಳಿಗೆ ವರ್ಗವೆಲ್ಲಿ? ಇದನ್ನು ನೋಡಿ ಮುಸಲ್ಮಾನರ ಸೇನೆಯಲ್ಲಿ ಕೋಲಾಹಲವೆ ದ್ವಿತು ಸ್ತ್ರೀಯರು ಆಕ್ರೋಶ ಮಾಡ ತೊಡಗಿದರು ಕರೋರಮನಸಿನ ಬಾದಿಶಹನ ಹೃದಯವು ನೀರುನೀರಾಯಿತು ಹಾದಿಯನ್ನು ದುರಸ್ತಿ ಮಾಡುವ ಜನರ ಗು೦ವ್ರ ಈ ಕಾಲಕ್ಕೆ ಸೇನೆಯ ಅವ್ಯವಸ್ಥೆಯಿಂದ ಹಿಂಭಾಗದಲ್ಲಿ ಉಳಿದಿತ್ತು ಅವರು ಮಾರ್ಗ ವನ್ನು ಸರಿಗೊಳಿಸುವದರೊಳಗಾಗಿ ಈ ದಿವಸವೂ ಉಪವಾಸ ಬೀಳ ಬೇಕಾಗುವದೆಂದು ತೋರಿತು ಬಾದಶಹನು ಅವರು ಒರುವರೆಗೆ ಕಾಲಾಳುಗಳಿಗೂ ಉಳಿದ ಕೆಲವು ಜನರಿಗೂ ಮರದ ತುಂಡುಗಳನ್ನು ತೆಗೆದು ಹಾಕಲಿಕ್ಕೆ ಆಜ್ಞಾಪಿಸಿದನು ಅಪ್ಪಣೆಯಂತೆ ಸಾವಿರಾರು ಜನರು ಆ ಉದ್ಯೋಗಕ್ಕೆ ತೊಡಗಿದರು. ಅವರ ಸಹಾಯಕ್ಕೆ ಆನೆಗಳನ್ನು ಕೊಟ್ಟರು ಆದರೆ ಆ ಜನರು ಅಲ್ಲಿಗೆ ಬಂದ ಕೂಡಲೆ ಮೇಲಿನಿಂದ ಕೆಳಗೆ ಕಲ್ಲಿನ ಮಳೆ ಸುರಿಯಲಾರಂಭಿಸಿತು, ಕಾಲಾಳುಗಳಲ್ಲಿ ಕೆಲವರ ಕೈಯ್ಯು ಕೆಲವರ ಕಾಲು ಬೇರೆ ಕೆಲವರ ತಲೆ ಮತ್ತೆ ಕೆಲವರ ಶರೀರಗಳು ತುಂಡಾಗ