ಪುಟ:ಕಥಾಸಂಗ್ರಹ ಸಂಪುಟ ೨.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ ದಿಂದ ಅವಳಿಮಕ್ಕಳಾಗಿ ಲಕ್ಷ್ಮಣ ಶತ್ರುಘ್ನರೆಂದೂ ಕಿರಿಯ ಹೆಂಡತಿಯಾದ ಕೈಕೇಯಿ ಯ ಗರ್ಭದಲ್ಲಿ ಪಾದಾಂಶದಿಂದ ಭರತನೆಂದೂ ಅವತರಿಸಲು ಆಗ ದಿಕ್ಕುಗಳೆಲ್ಲವೂ ಶೋಭಿಸಿದುವು. ಕೆರೆ ತೊರೆ ಮೊದಲಾದವುಗಳ ಜಲಗಳು ತಿಳಿಯಾದುವು. ಮಂದ ಮಾರುತವು ತೀಡಿತು. ಇತ್ಯಾದಿಶುಭಶಕುನಗಳು ಭೂಲೋಕದಲ್ಲಿ ಉಂಟಾದುವು. ಅನಂತರದಲ್ಲಿ ದಶರಥಮಹಾರಾಜನು ಪುತ್ರ ಸಂಪತ್ತನ್ನು ಹೊಂದಿ ಅಮಂದಾನಂದ ಸಂದೋಹಭರಿತನಾಗಿ ಮಕ್ಕಳಿಗೆ ಜಾತಕರ್ಮಾದಿಗಳನ್ನು ಮಾಡಿಸಿ ಕ್ರಮೇಣ ವೃದ್ಧಿ ಹೊಂದುತ್ತಿರುವ ಮಕ್ಕಳಿಗೆ ಚೌಲೋಪನಯನಗಳನ್ನು ಮಾಡಿಸಿ ವಿವಿಧ ವಿದ್ಯಾಭ್ಯಾಸ ಗಳನ್ನು ಮಾಡಿಸುತ್ತಿದ್ದನು. ಆ ಮೇಲೆ ಕೆಲದಿನಗಳೊಳಗೆ ನಾಲ್ಕು ಜನ ಕುಮಾರರೂ ಎಲ್ಲಾ ವಿದ್ಯೆಗಳಲ್ಲಿಯ ಪೂರ್ಣಪಾಂಡಿತ್ಯವನ್ನು ಹೊಂದಿ ಶೋಭಿಸುತ್ತಿರಲು ವಿಶ್ವಾ ಮಿತ್ರ ಮಹಾಮುನಿಯು ಯಜ್ಞವನ್ನು ಮಾಡುವುದಕ್ಕೆ ಮನಸ್ಸುಳ್ಳವನಾಗಿದ್ದರೂ ವಿಘ್ನಕಾರಿಗಳಾದ ರಾಕ್ಷಸರ ಭಯ ಶಂಕಿತನಾಗಿ ದಶರಥನ ಬಳಿಗೆ ಬಂದು ಸತ್ತ ನಾಗಿ ತಾನು ಮಾಡುವ ಯಜ್ಞವನ್ನೂ ಅದಕ್ಕಿರುವ ರಾಕ್ಷಸರ ವಿಘ್ನ ವನ್ನೂ ನಿಶಾ ಚರಭಯನಿವಾರಣಾರ್ಥವಾಗಿ ಶ್ರೀರಾಮನನ್ನು ಕಳುಹಿಸಿಕೊಡಬೇಕೆಂದು ಹೇಳಿದನು. ಆಗ ದಶರಥನು ಪುತ್ರನನ್ನು ಅಗಲಿರಲಾರದುದರಿಂದಲೂ ಇನ್ನೂ ಬಾಲಕನಾದುದರಿಂದ ಈರರಾದ ರಾಕ್ಷಸರೊಡನೆ ಯುದ್ಧ ಮಾಡಲಾರನೆಂಬ ಯೋಚನೆಯಿಂದಲೂ ಕಳುಹಿ ಸುವುದಕ್ಕೆ ಭಯಪಟ್ಟು ಒಪ್ಪದಿರಲು ಆಗ ತನ್ನ ಮಂತ್ರಿಯೇ ಮೊದಲಾದವರಿಂದ ಹೇಳಲ್ಪಟ್ಟವನಾಗಿ ರಾಮನನ್ನೂ ಲಕ್ಷ್ಮಣನನ್ನೂ ವಿಶ್ವಾಮಿತ್ರರ್ಷಿಯ ಸಂಗಡ ಕಳು ಹಿಸಿಕೊಟ್ಟನು. ಈಗ ಪರಮಸಂತೋಷಭರಿತನಾದ ವಿಶ್ವಾಮಿತ್ರ ಮುನಿಯು ರಾಮನನ್ನೂ ಲಕ್ಷ್ಮಣನನ್ನೂ ಜತೆಯಲ್ಲಿ ಕರೆದುಕೊಂಡು ಬರುತ್ತ ಮಾರ್ಗದಲ್ಲಿ ವಿವಿಧ ದೇಶಗಳನ್ನೂ ವನಗಳನ್ನೂ ತೋರಿಸಿ ಅವುಗಳ ಚರಿತ್ರೆಗಳನ್ನು ಹೇಳುತ್ತ ಮಾರ್ಗಾಯಾಸವಿಲ್ಲದಂತೆ ಬರುತ್ತಿದ್ದನು. ಮತ್ತು ಶ್ರೀ ರಾಮನು ಮಾರ್ಗದಲ್ಲಿ ಬರುವ ರಾಕ್ಷಸರನ್ನು ಕೊಲ್ಲುತ್ತ ಕಡೆಗೆ ಮುನಿಯ ಅಪ್ಪಣೆಯಿಂದ ತಾಟಕೆ ಎಂಬ ನಿಶಾಚರಿಯನ್ನು ಕೊಂದು ಲೋಕೋ ಪಕಾರವನ್ನು ಮಾಡಿದನು. ಅನಂತರದಲ್ಲಿ ವಿಶ್ವಾಮಿತ್ರಮುನಿಯು ಕ್ಷತ್ರಿಯಬಾಲಕ ರೊಡನೆ ತನ್ನ ಆಶ್ರಮಕ್ಕೆ ಬಂದು ಅವರನ್ನು ಉಪಚರಿಸಿ ಕೂಡಲೆ ಯಜ್ಞಾರಂಭವನ್ನು ಮಾಡಲು ಅದನ್ನು ಕೆಡಿಸುವುದಕ್ಕಾಗಿ ರಾಕ್ಷಸರು ಬರಲು ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲರನ್ನು ಕೊಂದು ಕೆಲರನ್ನು ಹೆದರಿಸಿ ಕೆಲರನ್ನು ಓಡಿಸಿದರು. ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮ ಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನಕೆಯರೆಲ್ಲಿರುವರೆಂದು ಯೋಚಿಸು ತ್ತಿದ್ದನು. M &