ಪುಟ:ಕಥಾಸಂಗ್ರಹ ಸಂಪುಟ ೨.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ನರಾಂತಕ ಸೂರ್ಯರಿಪು ವಿಕಟ ಸುಪ್ತಪ್ಪ ದುರ್ಥರ ಸುಮಾಲಿ ಇವರೇ ಮೊದಲಾದ ರಾಕ್ಷಸವೀರಾಗ್ರೇಸರರನ್ನು ಯುದ್ಧಕ್ಕೆ ನೇಮಿಸಲು ಆಗ ಸುಮಾಲಿ ಎಂಬುವನು ಬಹು ರಾಕ್ಷಸಸೇನೆಗಳನ್ನು ಕರೆದುಕೊಂಡು ಒಂದು ಸರಳು ಮಳೆಯನ್ನು ಸುರಿಸುತ್ತ ತಿರುಗಿದ ಕಡೆ ಬಡಿದು ದೇವತೆಗಳನ್ನು ದಿಕ್ಕು ದಿಕ್ಕಿಗೆ ಓಡಿಸುತ್ತಿರಲು ವಸುಗಳಲ್ಲಿ ಎಂಟನೆಯವನಾದ ಸಾವಿತ್ರನೆಂಬವನು ಅದನ್ನು ನೋಡಿ ರಥವನ್ನು ಹತ್ತಿ ಸುಮಾಲಿಯ ಎದುರಿಗೆ ಬಂದು ನಿಂತು ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕರಿಸಿ ಅನೇಕ ಬಾಣಗಳನ್ನು ಹೂಡಿ ಸುಮಾಲಿಯ ಮೇಲೆ ಬಿಡಲು ಅವನು ಆ ಬಾಣಗಳನ್ನೆಲ್ಲಾ ನಡುದಾರಿಯಲ್ಲೇ ಕತ್ತರಿಸಿ ಪ್ರತಿಯಾಗಿ ಸಾವಿತ್ರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿ ಆತನ ತೇಲನಚನ್ನು ಕಡಿದನು. ಆಗ ವಿರಥನಾದ ಸಾವಿತ್ರನು ರೋಪಾರುಣ ನೇತ್ರಗಳುಳ್ಳ ವನಾಗಿ ಮತ್ತೊಂದು ತೇರನ್ನೇರಿ ಬಂದು ಹತ್ತು ಬಾಣಗಳಿಂದ ಸುಮಾಲಿಯ ಸಾರ ಥಿಯ ತಲೆಯನ್ನೂ ಇಪ್ಪತ್ತು ಬಾಣಗಳಿಂದ ರಥಾಶ್ವಗಳನ್ನೂ ನಾಲ್ಕು ಬಾಣಗಳಿಂದ ಧ್ವಜಸ್ಥಂಭವನ್ನೂ ಐವತ್ತು ಬಾಣಗಳಿಂದ ತೇರನ್ನೂ ನೂರು ಬಾಣಗಳಿಂದ ಸುಮಾ ಲಿಯ ಕರಗತ ಕೋದಂಡವನ್ನೂ ಕತ್ತರಿಸಿ ಬೊಬ್ಬಿರಿದನು. ಆಗ ಸುಮಾಲಿಯು ಎರೆಥನಾದಾಗೂ ಧೈರ್ಯಹೀನನಾಗದೆ ರಥದಿಂದ ಭೂಮಿಗೆ ಧುಮುಕಿ ತೋರವಾದ ಗದೆಯನ್ನು ತೆಗೆದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ಆಗ ಪರಾಕ್ರಮಶಾಲಿಗಳಾದ ಅವರಿಬ್ಬರೂ ಭಯಂಕರವಾದ "ಗದಾ ಯುದ್ಧವನ್ನು ಮಾಡುತ್ತಿರುವಲ್ಲಿ ಶೂರನಾದ ಸಾವಿತ್ರನು ಸುಮಾಲಿಯು ಹೊಡೆದ ಗದೆಯ ಮಹಾಘಾತವನ್ನು ತಪ್ಪಿಸಿಕೊಂಡು ಅವನು ಮೇಲಕ್ಕೆ ಹಾರಿಬಂದು ತನ್ನನ್ನು ಹೊಡೆಯುವ ಸಮಯದಲ್ಲಿ ಮರ್ಮವನ್ನ ರಿತು ತನ್ನ ಗದೆಯಿಂದ ಸುಮಾಲಿಯ ಸೊಂಟ ನನ್ನ ಪ್ಪಳಿಸಲು ಅವನು ನಡು ಮುರಿದು ಭೂಮಿಯಲ್ಲಿ ಬಿದ್ದು ಸತ್ತನು. • ಅದನ್ನು ಕಂಡು ರಾಕ್ಷಸಸೇನಾಪತಿಗಳೆಲ್ಲರೂ ಬಂದು ನಾಲ್ಕು ಕಡೆಗಳಲ್ಲಿಯ ಸಾವಿತ್ರನನ್ನು ಮುಸುಕಿಕೊಂಡು ಆತನ ಮೇಲೆ ಬಾಣವೃಷ್ಟಿಯನ್ನು ಕರೆಯುತ್ತಿರಲು ಉಳಿದೇಳು ಮಂದಿ ವಸುಗಳೂ ಸಾವಿತ್ರನಿಗೆ ಸಹಾಯಕರಾಗಿ ಬಂದು ತೀವ್ರ ಬಾಣ ಪ್ರಯೋಗಗಳಿಂದ ರಾವಣನ ಸೇನಾಧಿಪತಿಗಳನ್ನು ಮರ್ಛಾಗತರನ್ನಾಗಿ ಮಾಡಿದರು. ಅದನ್ನು ನೋಡಿ ರಾವಣನು ತಾನೇ ಯುದ್ಧ ಸನ್ನದ್ದನಾಗಿ ಹೊರಡುತ್ತಿರಲು ಅವನ ಕುಮಾರನಾದ ಮೇಘನಾದನು ಅದನ್ನು ಕಂಡು ರಾವಣನನ್ನು ನಿಲ್ಲಿಸಿ ತಾನು ಧನು ರ್ಬಾಣಗಳನ್ನು ತೆಗೆದುಕೊಂಡು ಪ್ರಳಯ ಕಾಲದ ಯಮನಂತೆ ದೇವಸಮೂಹವನ್ನು ಹೊಕ್ಕು ಬಾಣಗಳನ್ನು ಪ್ರಯೋಗಿಸುತ್ತ ಅಷ್ಟವಸುಗಳನ್ನೂ ದ್ವಾದಶಾದಿತ್ಯರನ್ನೂ ಏಕಾದಶರುದ್ರರನ್ನೂ ಸಪ್ತಮರುತ್ತುಗಳನ್ನೂ ಮರ್ಧೆಗೊಳಿಸುತ್ತ ದೇವಬಲವನ್ನು ಪಲಾಯನಗೊಳಿಸುತ್ತಿರಲು ಅದನ್ನು ಕಂಡು ದೇವೇಂದ್ರನು ಐರಾವತವನ್ನು ಏರಿ ವಜ್ರಾಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗುತ್ತಿರಲು ಅಷ್ಟರಲ್ಲಿಯೇ ಅವನ ಕುಮಾರನಾದ ಜಯಂತನು ತಂದೆಯನ್ನು ಕುರಿತು ಅಲ್ಪನಾದ ಈ ರಾವಣಿಯ ಯುದ್ದಕ್ಕೆ ನೀನೂ ಹೋಗಬೇಕೇ ? ನಾನು ಹೋಗಿ ಇವನನ್ನು ಕೊಲ್ಲುವೆನೆಂದು ಹೇಳಿ