ಪುಟ:ಕಥಾಸಂಗ್ರಹ ಸಂಪುಟ ೨.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಯನ್ನಿತ್ತು ತಾನು ಅಂತರಿಕ್ಷ ಮಾರ್ಗದಲ್ಲಿ ಹೊರಟುಹೋದನು. ಅನಂತರದಲ್ಲಿ ದಶ ಗ್ರೀವನು ಪತ್ನಿ ಯಾದ ಮಂಡೋದರಿಯೊಡನೆ ಲಂಕಾನಗರವನ್ನು ಪ್ರವೇಶಿಸಿ ತನ್ನ ಹಿರಿಯ ತಮ್ಮ ನಾದ ಕುಂಭಕರ್ಣನಿಗೆ ಪೌರೋಚನನ ಮಗಳ ಮಗಳಾದ ವಜಾಲೆ ಎಂಬವಳನ್ನೂ ಕಿರಿಯ ತಮ್ಮನಾದ ವಿಭೀಷಣನಿಗೆ ಶೈಲುಷನೆಂಬ ಗಂಧರ್ವನ ಮಗಳಾದ ಸರಮೆ ಎಂಬವಳನ್ನೂ ತಂದು ಅತಿ ಸಂಭ್ರಮದಿಂದ ಮದುವೆ ಮಾಡಿ ಸಿದನು. ಅನಂತರದಲ್ಲಿ ಕೆಲವು ದಿನಗಳು ಕಳೆದ ಮೇಲೆ ಮಂಡೋದರಿಯು ಗರ್ಭವನ್ನು ಧರಿಸಿ ಒಂದು ಗಂಡು ಮಗುವನ್ನು ಹೆತ್ತಳು. ಆ ಕೂಸಿನ ರೋದನಧ್ವನಿಯು ಘನಗ ರ್ಜಿತದಂತೆ ಗಂಭೀರವಾಗಿಯ ಭಯಂಕರವಾಗಿಯೂ ಇದ್ದುದರಿಂದ ದಶವದನನು ಆ ಶಿಶುವಿಗೆ ಮೇಘನಾದನೆಂಬ ಅನ್ವರ್ಥ ನಾಮವನ್ನಿಟ್ಟನು. ಕುಂಭಕರ್ಣನಿಗೆ ಬ್ರಹ್ಮ ದತ್ತವರ ಪ್ರಭಾವದಿಂದ ನಿದ್ರಾಭಾರವು ಅಧಿಕವಾಗಲು ಒಂದು ದಿನ ಅವನು ದಶಕಂಧ ರನ ಬಳಿಗೆ ಬಂದು-ನಿದ್ರೆಯು ನನ್ನನ್ನು ಸಂಪೂರ್ಣವಾಗಿ ಬಾಧಿಸುತ್ತದೆ. ಒಂದು ಶಯ್ಯಾಗೃಹವನ್ನು ಮಾಡಿಸಿಕೊಡು ಎಂದು ಕೇಳಲು ಅವನು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು ಕರಿಸಿ ಸುವರ್ಣಸ್ತಂಭಗಳಿಂದ ಕೂಡಿಯ ನವರತ್ನ ಖಚಿತವಾಗಿಯ ಶಯನೋಚಿತ ಸಾಮಗ್ರಿ ಸಮೇತವಾಗಿ ಇರುವ ಒಂದು ಮನೆಯನ್ನು ಮಾಡಿಸಿ ಕೋಟ್ರನು, ಕುಂಭಕರ್ಣನು ಆ ಮನೆಯನ್ನು ನೋಡಿ ಸಂತುಷ್ಟನಾಗಿ ಅಲ್ಲಿ ಬಹಳ ಕಾಲದ ವರೆಗೂ ಮಲಗಿಕೊಂಡು ನಿರ್ಬಾಧಕವಾದ ನಿದ್ರಾಸುಖವನ್ನನುಭವಿಸು ತ್ತಿದ್ದನು. ಇತ್ಯಲಾ ದಶಕಂಧರನು ಶೌರ್ಯಾಧಿಕ್ಯದಿಂದುಂಟಾದ ಗರ್ವವುಳ್ಳವನಾಗಿ ಮುನಿಜನಗಳನ್ನು ಬಾಧಿಸಿ ಕೊಲ್ಕು ತ ದಾನವ ದೈತ್ಯ ಸುರ ನರ ನಾಗ ಕಿನ್ನರಾದಿಗಳ ಸಂದಣಿಗಳನ್ನು ಸವರುತ್ತ ಕೆರೆ ತೊರೆ ಕುಂಟೆ ಕಾಲುವೆ ಮೊದಲಾದ ಜಲಾಶಯ ಗಳನ್ನು ಧ್ವಂಸಮಾಡುತ್ತ ಮದಿಸಿ ಸೊಕ್ಕಿದಾನೆಯ ಚ೦ದದಿಂದ ಹೊರಟು ಪರ್ವತ ಶಿಖರಗಳನ್ನು ಕಿತ್ತುರುಳಿಸು ವುರಗೋಪುರಗಳನ್ನು ತುಳಿದು ಹಾಳುಮಾಡುತ್ತ ಯಾರೂ ಎದುರಾಳಿಲ್ಲದೆ ಮದೋನ್ಮತ್ತತೆಯಿಂದ ನಿರರ್ಗಳವಾಗಿ ತಿರುಗುತ್ತಿದ್ದನು. ಹೀಗಿರುವಲ್ಲಿ ಉತ್ತರ ದಿಗೀಶನಾದ ಕುಬೇರನು ಒಂದು ದಿವಸ ತನ್ನ ತಮ್ಮ ನಾದ ದಶಮುಖನು ದುರ್ಮಾರ್ಗಿಯಾಗಿರುವುದನ್ನು ಕೇಳಿ-ಅಯ್ಯೋ ಶ್ರೇಷ್ಠವಾದ ನಮ್ಮ ಕುಲದಲ್ಲಿ ಇಂಥ ದುಷ್ಟನು ಹುಟ್ಟಿದನಲ್ಲಾ ! ಎಂದು ಬಹಳವಾಗಿ ವ್ಯಸನ ಪಡುತ್ತ ಒಬ್ಬ ಚಾರನನ್ನು ಕರೆದು-ಎಲೈ ನೀನು ದಶಾನನನ ಬಳಿಗೆ ಹೋಗಿ-ಇಂಥ ದುಷ್ಟ ತ್ರವನ್ನು ಬಿಟ್ಟು ಸುಖಿಯಾಗಿರು ಎಂದು ನಾನು ಹೇಳಿದೆನೆಂಬುದಾಗಿ ತಿಳಿಸು ಎಂದು ಹೇಳಿ ಕಳುಹಿಸಿದನು. ಅವನು ಬಂದು ದಶವದನನಿಗೆ ನಮಸ್ಕರಿಸಿ-ಎಲೆ ರಾಕ್ಷಸೇಂದ್ರನೇ ! ನಿಮ್ಮಣ್ಣನಾದ ಕುಬೇರನು ಕೈಲಾಸಪರ್ವತದಲ್ಲಿ ಅಲಕಾವತಿ ಯೆಂಬೊಂದು ಪಟ್ಟಣವನ್ನು ಮಾಡಿಕೊಂಡು ಹರನೊಡನೆ ಸ್ನೇಹವನ್ನು ಸಂಪಾದಿಸಿ ಕೊಂಡು ಸುಖಿಯಾಗಿದ್ದಾನೆ. ಆತನು ನಿನಗೋಸ್ಕರ, ನನ್ನೊಡನೆ ಹೇಳಿಕಳುಹಿಸಿರುವ