36 ಲೇಬೇಬೋಧಿಸಿ ರು, ಕೆಲವರು ಒರಟುಜನರು ಸಮಾಧಾನವನ್ನು ಹೇಳಬೇಕೆಂದು ಹೋಗಿ ಘಾಯದ ಮೇಲೆ ಸೂಜಿಯನ್ನು ಚುಚ್ಚಿದಂತೆ ದುಃಖವನ್ನು ಉಕ್ಕಿಸುತ್ತಾರೆ, ಹೆಂಡತಿಯು ಸತ್ತಿರುವಾಗ ಆಕೆಯ ಗುಣವನ್ನು ನೆನದುಕೊಂಡು ಅಳುತ್ತಿರುವ ಗಂಡನಿಗೆ ಹಳೇ ಜೋಡು ಹೋದರೆ ಹೊಸಜೋಡನ್ನು ನೆಟ್ಟು ಕೊಳ್ಳಬಹುದೆಂದು ಹೇಳುವ ನರಮೃಗ ಗಳೂ ಕೂಡಾ ಈ ಪ್ರಪಂಚದಲ್ಲಿ ಕೆಲವರು ಇರುತ್ತಾರೆ. ಲೇವಾದೇವಿಯ ಸಂಬಂಧದ ಕಾಗದಗಳು. ಸಾಲವನ್ನು ಕೇಳುವುದು. ರಾಜಮಾನ್ಯರಾಜಶ್ರೀ ಸುಬ್ಬಶೆಟ್ಟರವರ ಸಗಿ ಕೈ. ಗೋವಿಂದಯ್ಯನ ವಿಜ್ಞಾಪನೆ-ಈ ವರೆಗೆ ಉಭಯ ಕ್ಷೇಮೋಪರಿ. ನಾನು ಈ ಊರಿನ ಸವಿಾಪದಲ್ಲಿ ಒಂದು ಜವಿಾನನ್ನು ತೆಗೆದು ಕೊಳ್ಳಬೇಕೆಂದಿದ್ದೇನೆ, ನನ್ನಲ್ಲಿ ನಗದಾಗಿರುವ ಹಣ ಸಾಲದೆ ಇರುವುದ ರಿಂದ, ತಮಗೆ ಅನಾನುಕೂಲ ಉಂಟಾಗದೆ ನನಗೆ ಒಂದು ಸಾವಿರ ರ ಪಾಯನ್ನು ಒಂದು ತಿಂಗಳವರೆಗೆ ಸಾಲವಾಗಿ ಕೊಟ್ಟಿದ್ದರೆ ತಮ್ಮ ಉಪ ಕಾರವನ್ನು ಬಹಳವಾಗಿ ಸ್ಮರಿಸಿಕೊಳ್ಳುತೇನೆ. ತಮ್ಮ ಹಣವನ್ನು ಸರಿ ಯಾಗಿ ಪಾವತಿ ಮಾಡುವುದಲ್ಲದೆ ವಾಡಿಕೆಯ ಪ್ರಕಾರ ಕೊಡತಕ್ಕೆ ಬಡ್ಡಿ ಯನ್ನು ಕೊಡುತೇನೆ. ಈ ವಿವರ ತಮ್ಮ ಅಂತಃಕರಣಕ್ಕೆ ಸರಿತಂದು ನನ್ನ ಸಮಯಕ್ಕೆ ತಕ್ಕ ಸಹಾಯವನ್ನು ಮಾಡಬೇಕೆಂಬುವುದು, ತಮ್ಮ ವಿಧೇಯನಾದ ಗೋವಿಂದಯ್ಯನ ವಿಜ್ಞಾಪನೆ ತಿರಸೂರು, ೧೧ನೇ ೫೯, ೧vr