ಪುಟ:ಕಥಾಸಂಗ್ರಹ ಸಂಪುಟ ೨.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯ ಸುತ್ತಿರಲು ಇಂದ್ರನು ವಿರೋಧಿಯನ್ನು ಕಾಣದೆ ಮಹಾಸ್ತ್ರಗಳ ಪೆಟ್ಟನ್ನು ಸಹಿಸ ಲಾರದೆ ಹಿಂದು ಮುಂದು ತೋರದೆ ಕಂಗೆಟ್ಟಿರುವದನ್ನು ನೋಡಿ ರಾವಣಿಯು ಶೀಘ್ರವಾಗಿ ಬಂದು ಸುರರಾಜನ ಮೇಲೆ ಬಿದ್ದು ತನ್ನ ಬಾಹುಗಳಿಂದ ಬಿಗಿದು ಕಟ್ಟಿ ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಜಯಭೇರಿಯನ್ನು ಹೊಡಿಸುತ್ತ ಬರುತ್ತಿ ರಲು ಮೂರ್ಛಿತನಾಗಿದ್ದ ರಾವಣನು ಅಷ್ಟರಲ್ಲಿ ಬ್ರಹ್ಮ ವರಪ್ರಭಾವದಿಂದ ಚೇತರಿಸಿ ಕೊಂಡು ಪುನಃ ಇಂದ್ರನೊಡನೆ ಯುದ್ಧ ಮಾಡಬೇಕೆಂದು ಹೊರಟು ಬರುತ್ತ ಇಂದ್ರ ನನ್ನು ಜಯಿಸಿ ಹಿಡಿದುಕೊಂಡು ಬರುತ್ತಿರುವ ಮಗನನ್ನು ಕಂಡು ಸಂತೋಷಸಮು ದ್ರದಲ್ಲಿ ಮುಳುಗಿ ಅವನನ್ನು ಬಾಚಿ ತಬ್ಬಿ ಮುದ್ದಿಸಿ ಆ ಮೇಲೆ ಇ೦ದ್ರಲೋಕವನ್ನು ಸೂರೆಮಾಡಿಕೊಂಡು ಸಕಲರಾಕ್ಷಸಸೇನಾಸಮೇತನಾಗಿ ಅ೦ಕಾಪಟ್ಟಣಕ್ಕೆ ಬಂದು ಇ೦ದ್ರನನ್ನು ಕಾರಾಗೃಹದಲ್ಲಿ ಡಿಸಿ ತಾನು ಸುಖದಿಂದಿರುತ್ತಿದ್ದನು. ಅನಂತರದಲ್ಲಿ ಚತುರ್ಮುಖ ಬ್ರಹ್ಮನು ಈ ವರ್ತಮಾನವನ್ನು ಕೇಳಿ ಲಂಕಾ ಪಟ್ಟಣಕ್ಕೆ ಬಂದು - ಎಲೈ ಮಗನಾದ ದಶಕಂಧರನೇ ! ನೀನು ಮರು ಲೋಕಗ ಳನ್ನು ಗೆದ್ದವನಾದುದರಿಂದ ಲೋಕೈಕವೀರನೆಂದು ಪ್ರಖ್ಯಾತಿಯನ್ನು ಹೊಂದಿದವ ನಾದೆ. ನಿನ್ನ ಮಗನು ಶೌರ್ಯದಲ್ಲಿ ನಿನಗಿಂತಲೂ ಹೆಚ್ಚಿದವನು. ನಾನು ಅವನ ಪರಾಕ್ರಮವನ್ನು ಮೆಚ್ಚಿದೆನು. ಇಂದು ಮೊದಲು ಲೋಕದಲ್ಲಿ ಮೇಘನಾದನಿಗೆ ಇಂದ್ರಜಿತ್ತೆಂದು ಹೆಸರು ಪ್ರಖ್ಯಾತಿಯಾಗಲಿ. ಈ ದೇವೇಂದ್ರನು ನನ್ನ ಅಪ್ಪಣೆಯಿಂದ ದೇವಲೋಕವನ್ನು ಸಲಹುತ್ತಿರುವನು. ಇಷ್ಟು ಜಯಿಸಿದುದೇ ಸಾಕು. ಇನ್ನು ಮೇಲೆ ಆತನನ್ನು ಬಿಟ್ಟು ಬಿಡು. ನನ್ನ ಮಾತನ್ನು ನಡಿಸು ಎನಲು ಆಗ ಇಂದ್ರಜಿತ್ತು ಬ್ರಹ್ಮನಿಗೆ ನಮಸ್ಕರಿಸಿ- ಎಲೈ ಪಿತಾಮಹನೇ ! ನಿಮ್ಮಪ್ಪಣೆಯಂತೆ ದೇವೇಂದ್ರನನ್ನು ಬಿಟ್ಟು ನಿಮ್ಮ ಮಾತನ್ನು ನಡಿಸುವೆನು. ಇಂದ್ರನನ್ನು ಜಯಿಸಿದುದರಿಂದ ನನಗೆ ಇಂದ್ರಜಿತೆ೦ಬ ಹೆಸರು೦ಟಾಯಿತು ಸರಿ, ನೀನು ನನ್ನಲ್ಲಿ ಪ್ರೀತಿ ಮಾಡಿದರೆ ನನಗೆ ಅಮರತ್ವವನ್ನು ಕೊಡು ಎಂದು ಕೇಳಿಕೊಳ್ಳಲು ಆಗ ಬ್ರಹ್ಮನು ಲೋಕದಲ್ಲಿ ಚರಾಚರಗಳಿಗೆಲ್ಲಾ ಅಮರತ್ವದ ಒಳಕೆಯಿಲ್ಲ. ಸುರ ನರೋರಗ ದೈತ್ಯ ಇವರೇ ಮೊದಲಾದವರಿಗೂ ಕೂಡ ಸಾವು ತಪ್ಪದು, ಅದು ಕಾರಣ ಇದನ್ನು ಬಿಟ್ಟು ಸುಲಭ ವಾದ ವರಗಳನ್ನು ಬೇಡಿಕೋ ಕೊಡುವೆನೆಂದನು. ಆಗ ಇಂದ್ರಜಿತ್ತು - ಎಲೈ ಪಿತಾಹಮನೇ ! ನಾನು ಕಾಳಗಕ್ಕೆ ಹೊರಡುವ ಸಮಯದಲ್ಲಿ ಅಗ್ನಿಯನ್ನು ಆರಾಧಿ ಸುವೆನು. ಆ ಅಗ್ನಿ ಕುಂಡದಿಂದ ಒಂದು ಅಪ್ರತಿಹತವಾದ ರಥವು ಉಂಟಾಗಲಿ. ಆ ರಥದ ಮೇಲೆ ಕುಳಿತುಕೊಂಡು ಜಗಳವಾಡುವ ಕಾಲದಲ್ಲಿ ನಾನು ಯಾರಿಂದಲೂ ಸಾಯದಂತೆ ವರವನ್ನು ಕೊಡೆಂದು ಬೇಡಿದುದಕ್ಕೆ ಬ್ರಹ್ಮನು ಆ ಪ್ರಕಾರವೇ ವರವ ೩ ತ್ತು ಇಂದ್ರನನ್ನು ಬಿಡಿಸಿ ಅಮರಾವತಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕುರಿತು ಮೊದಲು ನೀನು ಗೌತಮಪತ್ನಿ ಯಾದ ಅಹಲೈಯನ್ನು ಕಾಮಿಸಿದುದರಿಂದ ನಿನಗೆ ಇಂಥ ಪರಾಜಯವುಂಟಾಯಿತೆಂದು ಹೇಳಿ ಆ ಪಾಪಪರಿಹಾರಕ್ಕಾಗಿ ವೈಷ್ಣವಾ ಧ್ವರವನ್ನು ಮಾಡಿಸಿ ಮನಸ್ಸನ್ನು ಸಂತೋಷಪಡಿಸಿ ಅವನನ್ನು ಸ್ವರ್ಗಲೋಕದಲ್ಲಿ ಬಿಟ್ಟು ತನ್ನ ವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ಹೊರಟುಹೋದನು.