ಪುಟ:ಕಥಾಸಂಗ್ರಹ ಸಂಪುಟ ೨.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 19 ಕೋಣನಿಗೆ ಹೊಡೆದು ಕೊಡಲೆ ಕುಪ್ಪಳಿಸಿ ಮುಂದೆ ಬಂದು ಕೋದಂಡದಿಂದಪ್ಪಳಿಸಿ ಹತ್ತು ತೊಳಳನ್ನೂ ಮೇಲೆತ್ತಿ ದೀವಟಿಗೆಗಳಂತಿರುವ ಕಣ್ಣುಗಳನ್ನು ತಿರುಗಿಸುತ್ತ ಗಿರಿಗುಹೆಗಳಂತಿರುವ ಹತ್ತು ಬಾಯಿಗಳನ್ನೂ ತೆರೆದುಬ್ಬಿಯಬ್ಬರಿಸಿದನು. ಕಾಂತ ಘನಗರ್ಜೆತದ ಒಡನಾಡಿಯಂತಿರುವ ಅತ್ಯುಗ್ರಾರ್ಭಟಧ್ವನಿಯನ್ನು ಕೇಳಿದ ಕೋಣವು ದ್ವಿಗುಣಿತವಾಗ ಭಯಭಾಂತಿಯಿಂದ ಕಂಗೆಟ್ಟು ಹಾರಿಯಾಡುತ್ತಿರಲು ನಿಲ್ಲಿಸಲೆತ್ತಿ ಸತ್ತಿರುವ ಪ್ರೇತನಾಯಕನನ್ನು ಗಣಿಸದೆ ಹೊರಟು ಹರಿದಾರಿಯ ದೂರದಲ್ಲಿ ನೆಗೆದು ಅವನನ್ನು ನೆಲಕ್ಕೊಗೆದು ಓಡಿಹೋಯಿತು. ಆಗ ರಾಕ್ಷಸರ ಗುಂಪಿನಲ್ಲಿ ಅಪಹಾಸ್ಯ ಕರವಾದ ಅಟ್ಟಹಾಸವುಂಟಾಯಿತು. ಏನು ಹೇಳುವುದು ? ಯಮನ ವಿಪತ್ತನ್ನು ನೋಡಿ ಯಮಭಟರೆಲ್ಲರೂ ಬೆಪ್ಪಾಗಿ ನಿಂತರು. ಆ ಮೇಲೆ ಯಮನೆದ್ದು ಬಂದು ನಿಲ್ಲಲು ಕಾಲಮೃತ್ಯು ವೆ ಅವನನ್ನು ನೋಡಿ-ಎಲೈ ಮಹಾನುಭಾವನೇ ! ಶೀಘ್ರ ವಾಗಿ ನನಗಪ್ಪಣೆಯನ್ನು ಕೊಡು. ಇವನಿಗಿಂತಲೂ ಅತಿ ಬಲರನ್ನಾದರೂ ಸ್ವಾಧೀನ ಪಡಿಸಿಕೊಳ್ಳುವಂಥ ನನಗೆ ಈ ಖಳನಾದ ದಶಕಂಠನೆಷ್ಟುಮಾತ್ರದವನು ಎಂದು ಹೇಳಲು ಯಮನು.-ಎಲೈ ಮೃತ್ಯು ವೇ ! ಒ೦ದು :ಮೇಷಮಾತ್ರ ಸಹಿಸಿ ನೋಡು ಎಂದು ಹೇಳಿ ಘೋರಾಕಾರವನ್ನು ಧರಿಸಿ ಈ ಖಳನನ್ನು ಸದೆಯುವೆನೆಂದು ಭಯಂ ಕರವಾದ ಕಾಲದಂಡವನ್ನು ತೆಗೆದುಕೊಳ್ಳಲು ಆಗ ಸ್ವರ್ಗವೇ ಮೊದಲಾದ ಸಮಸ್ತ ಲೋಕಗಳೂ ಭಯ ಕಂಪಿತಗಳಾದುವು. ಆಗ ಇಂದ್ರಾದಿದೇವತೆಗಳೆಲ್ಲಾ ಹಾಹಾಕಾರ ವನ್ನು ಮಾಡುತ್ತ ಬೊಮ್ಮನ ಬಳಿಗೋಡಿಬಂದು ಕೈಮುಗಿದು ಅಕಾಲದಲ್ಲಿ ಮಹಾ ಪ್ರಳಯವುಂಟಾಗುವುದೆಂದು ಮೊರೆಯಿಡಲು ಪದ್ಮಜನು ತ್ವರಿತದಿಂದ ಯಮ ಲೋಕಕ್ಕೆ ತಂದು ಎಲ್ಲರಿಗೂ ಅದೃಶ್ಯನಾಗಿ ಅಂತಕನಿಗೆ ಮಾತ್ರ ದೃಶನಾಗಿ-ಎಲ್ಲೆ ವೈವಸ್ವತನೇ ! ಈಗ ಕಾಲದಂಡವನ್ನು ಕೈಕೊಳ್ಳಬೇಡ. ಯಾಕೆಂದರೆ ಈ ಕಾಲದಂಡ ವನ್ನು ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯಲೇಬೇಕೆಂದು ನಾನು ಮೊದ ಲೇ ವರವನ್ನು ಕೊಟ್ಟಿದ್ದೇನೆ. ಈ ರಾವಣನಿಗೆ ಮನುಷ್ಯರೂ ತಿರ್ಯಗ್ನಂತುಗಳೂ ಹೊರತಾಗಿ ಉಳಿದ ದೇವತೆಗಳೇ ಮೊದಲಾದ ಯಾರಿಂದಲೂ ಮರಣ ಉಂಟಾಗ ಬಾರದೆಂದೂ ನಾನೇ ವರವನ್ನು ಕೊಟ್ಟಿದ್ದೇನೆ. ಆದುದರಿಂದ ಈ ಕಾಲದಂಡವು ರಾವ ಣನನ್ನು ಕೊಲ್ಲದಿದ್ದರೂ ಇದುಂದ ರಾವಣನು ಮೃತನಾದರೂ ನನ್ನ ಮಾತು ಹುಸಿ ಯಾಗುವುದು. ಹಾಗೆ ನನ್ನ ಮಾತು ಅನೃತವಾದರೆ ಸಕಲ ಲೋಕಗಳೂ ವಿನಾಶವಾಗಿ ಹೋಗುವುವು. ಅದು ಕಾರಣ ನೀನು ಈಗ ಯುದ್ದಾ೦ಗಣದಿಂದ ಮರೆಯಾಗಿ ಹೋ ಗೆಂದು ಹೇಳಿ ತನ್ನ ಲೋಕವನ್ನು ಕುರಿತು ತೆರಳಲು ಆ ಮೇಲೆ ಯಮನು ಬ್ರಹ್ಮದೇ ವನ ಮಾತಿನಂತೆ ಅದೃಶ್ಯನಾಗಿ ಹೋಗಲು ಆಗ ರಾವಣನು ಯಮನು ನನಗೆ ಹೆದರಿ ಯುದ ಭೂಮಿಯಿಂದ ತಪ್ಪಿಸಿಕೊಂಡು ಓಡಿಹೋದನೆಂದು ತಿಳಿದುಕೊಂಡು ಸಂತೋ ವಿಸಿ ಜಯಭೇರಿಯನ್ನು ಕೊಡಿಸುತ್ತ ಸಮಸ್ತ ಸೇನಾಪರಿವೃತನಾಗಿ ಅಲ್ಲಿಂದ ಹೊರಟು ರಸಾತಲಕ್ಕೆ ಬಂದು ಅಲ್ಲಿ ನಿವಾತಕವಚರೆಂಬ ದೈತ್ಯರೊಡನೆ ಜಗಳಕ್ಕೆ ತೊಡಗಿ ಒಂದು ಸಂವತ್ಸರಾಂತದ ವರೆಗೂ ಕಾದಾಡಿದಾಗ ಒಬ್ಬರಿಗೂ ಜಯ ಪರಾಜಯಗಳು