ಪುಟ:ಕಥಾಸಂಗ್ರಹ ಸಂಪುಟ ೨.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 15 ನೀನು ಮತಿಹೀನತೆಯನ್ನು ಬಿಟ್ಟು ಜಗದೇಕವೀರನೂ ಸಮಸ್ತ ದೇವತೆಗಳಿಗೂ ಒಡೆ ಯನೂ ಆದ ನನ್ನನ್ನು ಮದುವೆಯಾಗಿ ಸುಖದಲ್ಲಿ ರು ಎಂದು ಎಷ್ಟು ವಿಧವಾಗಿ ಹೇಳಿ ದರೂ ಆಕೆಯು ಒಪ್ಪದಿದ್ದ ಕಾರಣ ರಾವಣನು ಆಕೆಯನ್ನು ಬಲಾತ್ಕರಿಸುವುದಕ್ಕೆ ಯತ್ನಿಸಲು ಆಗ ಆ ವೇದವತಿಯು ಅಗ್ನಿಗೆ ಸಮಾನವಾದ ಕೋಪದಿಂದ ಕಣ್ಣಳು ಕೆಂಪಡರಲು-ಎಲೈ ಮೂಢಾತ್ಮನೇ ! ಇಂಥ ದುರ್ವೃತ್ತಿಯಿಂದ ಬಹು ಪಾಪಿಯಾದ ನಿನ್ನನ್ನು ಕೊಲ್ಲುವುದು ನನಗೆ ಅಗಾಧವಲ್ಲ. ಆದರೆ ನನ್ನ ತಪಃಫಲವು ನಿರರ್ಥಕವಾ ಗುವುದು. ಅಲ್ಲದೆ ಸ್ತ್ರೀಯು ಪುರುಷನನ್ನು ವಧಿಸುವುದು ಧರ್ಮಶಾಸ್ತ್ರದಲ್ಲಿ ನಿಷೇಧಿ ಸಟಿದೆ. ಅದು ಕಾರಣ ನಾನು ಈ ದೇಹವನ್ನು ಬಿಟ್ಟು ಪುನಃ ಸೀತೆಯೆಂಬಭಿಧಾನ ದಿಂದ ತರಿಸಿ ರಾಮನಾಮದಿಂದವತರಿಸುವ ವಿಷ್ಣುವನ್ನು ವರಿಸಿ ಮದುವೆಯಾಗಿ ಆತನ ಕೈಯಿಂದ ನಿನ್ನನ್ನು ಕೊಲ್ಲಿಸುವೆನೆಂದು ಬಿರುನುಡಿಯಂ ನುಡಿದು ಆ ಕ್ಷಣವೇ ಅಗ್ನಿ ಯಲ್ಲಿ ಹೊಕ್ಕು ಶರೀರವನ್ನು ತ್ಯಜಿಸಿದಳು. ಅನಂತರದಲ್ಲಿ ರಾವಣನು ಹತಾಶನಾಗಿ ಪುಷ್ಪ ಕಾರೋಹಣವನ್ನು ಮಾಡಿ ಭೂಮಂಡಲದಲ್ಲಿ ಸಂಚರಿಸುತ್ತ ಮರುತ್ತನೆಂಬ ಮಹಾರಾಜನು ಯಜ್ಞ ಮಾಡುತ್ತಿ ರಲು ಅಲ್ಲಿಗೆ ಬಂದನು. ಆಗ ಯಜ್ಞದಲ್ಲಿ ಹವಿರಾಹರಣಾರ್ಥವಾಗಿ ಬಂದಿದ್ದ ಇಂದ್ರನು ದುಷ್ಟನಾದ ರಾವಣನನ್ನು ನೋಡಿ ಭಯಕ೦ಪಿತನಾಗಿ ಕೂಡಲೆ ನವಿಲಾ ದನು. ಯಮನು ಕಾಗೆಯಾದನು. ವರುಣನು ಹಂಸವಾದನು, ಕುಬೇರನು ಗೋಸುಂ ಬೆಯಾದನು, ಈ ರೀತಿಯಾಗಿ ದೇವತೆಗಳೆಲ್ಲರೂ ಬೇರೆ ಬೇರೆಯಾದ ಪ್ರಾಣಿಗಳಂತಿ ರುವ ರೂಪವನ್ನು ಹೊಂದಿ ನಿಜರೂಪಗಳನ್ನು ಮರೆಮಾಡಿಕೊಂಡರು. ಋಷಿಗಳೆ ಲ್ಲರೂ ತೋರಿದ ಕಡೆಗೆ ಓಡಿಹೋದರು. ರಾವಣನು ಮರುತ್ತರಾಜನೆಡೆಗೆ ತಂದು ಎಲೆ ಅರಸೇ ! ನೀನು ಶೂರನಾಗಿದ್ದರೆ ಈ ಕ್ಷಣವೇ ನನ್ನೊಡನೆ ಯುದ್ಧಕ್ಕೆ ಸನ್ನದ್ಧ ನಾಗು, ಹೇಡಿಯಾದರೆ ಸೋತೆನೆಂದು ಹೇಳಿಬಿಡು, ನಿನ್ನನ್ನು ಕೊಲ್ಲದೆ ಬಿಡುತ್ತೇನೆನಲು ಆಗ ಮರುತ್ತರಾಜನು-ಎಲಾ ಮರ್ಖನಾದ ನೀನಾರು ? ಏಕಿಲ್ಲಿ ಬಂದೆ ? ಎಂದು ಕೇಳಲು ನಾನು ಧನಪತಿಯಾದ ಕುಬೇರನ ತಮ್ಮ ನು. ದಶಾಸ್ಯನೆಂಬ ನನ್ನ ಹೆಸರು ಸರ್ವಲೋಕವಿದಿತವಾಗಿರುವುದು. ಮತ್ತು ನಾನು ಯುದ್ಧರಂಗದಲ್ಲಿ ಕುಬೇರನನ್ನು ಸೋಲಿಸಿ ಆತನ ವಿಮಾನವನ್ನು ಕಿತ್ತು ಕೊಂಡುದರಿಂದ ಶೂರನೆಂದು ಲೋಕದಲ್ಲೆಲ್ಲಾ ಪ್ರಖ್ಯಾತನಾಗಿರುವೆನು. ಹೀಗಿರುವಲ್ಲಿ ನೀನು ಮಾತ್ರ ನನ್ನನ್ನು ತಿಳಿಯದಿರುವುದು ಅತ್ಯಾಶ್ಚರ್ಯವಾಗಿದೆ. ಅಥವಾ ನೀನು ಮೂಢನೂ ಪ್ರಸಿದ್ದ ನೂ ಆಗಿರಬಹುದು ಎಂದು ಹೇಳಲು ಮರುತ್ತರಾಜನು-ಆಹಾ ! ನೀನು ಉತ್ತಮಪುರುಷನು ! ಅಣ್ಣ ನೊಡನೆ ಯುದ್ಧ ಮಾಡಿ ಗೆದ್ದವನು ! ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನು ತಪ್ಪಿ ನಡೆವವನಲ್ಲ ಎಂದು ಸ್ತುತಿನಿಂದಾವಚನಗಳನ್ನಾಡಿ ಒಳ್ಳೆಯದು ಯುದ್ಧಕ್ಕೆ ನಿಲ್ಲೆಂದು ಹೇಳಿ ತಾನು ಸನ್ನದ್ದನಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮನಾದ ಸಂವರ್ತನೆಂಬ ಪುರೋಹಿತನು ಬಂದು ಎಲೈ ರಾಯನೇ ! ಈಗ ನೀನು ಯಜ್ಞ ದೀಕ್ಷಿತನಾಗಿದ್ದೀಯೆ. ಈ ವೇಳೆಯಲ್ಲಿ ಇಂಥ ದುಷ್ಟ ನೊಡನೆ ಯುದ್ಧಕ್ಕೆ