ಪುಟ:ಕಥಾಸಂಗ್ರಹ ಸಂಪುಟ ೨.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಕಥಾಸಂಗ್ರಹ-೪ ನೆಯ ಭಾಗ ಸ್ವಲ್ಪ ನಿದ್ರಿಸುತ್ತಿರುವನು. ನೀನು ಈಗಲೇ ಶೀಘ್ರವಾಗಿ ಹೋಗಿ ಸರ್ವರ ಸಂತೋ ಷಕ್ಕೂ ಪಾತ್ರನಾದ ರಾಮನನ್ನು ಕರೆದುಕೊಂಡು ಬಾ, ನೀನು ಈ ಭಾಗದಲ್ಲಿ ಸ್ವಲ್ಪವೂ ಯೋಚಿಸಬೇಡ, ಹೋಗು ಎಂದು ಹೇಳಲು ಆಗ ಸುಮಂತ್ರನು-ರಾಮನ ಪಟ್ಟಾ ಭಿಷೇಕಕ್ಕೊಸ್ಕರ ಕೈಕೇಯಿದೇವಿಯು ನಿಶ್ಚಯವಾಗಿ ತ್ವರೆಪಡಿಸುತ್ತಿರುವಳೆಂದು ಭಾವಿಸಿ ಸಂತೋಷಪಟ್ಟುಕೊಂಡು ಅಲ್ಲಿಂದ ಹೊರಟು ಶೀಘ್ರವಾಗಿ ರಾಮನ ಬಳಿಗೆ ಬಂದು ಅವನಿಗೆ ಈ ಮಾತುಗಳನ್ನು ತಿಳಿಸಲು ರಾಮನು ಶೀಘ್ರವಾಗಿ ಅಲ್ಲಿಂದ ಹೊರ ಟುಬರುತ್ತ ತನ್ನ ಹಿಂದೆ ತರುತ್ತಿರುವ ಸೀತೆಯನ್ನು ನೋಡಿ ನನ್ನ ತಂದೆಯ ನನ್ನ ಕಿರಿಯ ತಾಯಿಯಾದ ಕೈಕೇಯಿಾದೇವಿಯ ನನಗೆ ಪಟ್ಟಾಭಿಷೇಕವನ್ನು ಮಾಡುವು ದಕ್ಕೋಸ್ಕರ ನನ್ನನ್ನು ಕರಸಿರುವರು. ಅದು ಕಾರಣ ನಾನು ಹೋಗುವೆನು. ನೀನು ನಿನ್ನ ಪರಿವಾರದೊಡನೆ ಕೂಡಿ ಇಲ್ಲಿ ಸುಖವಾಗಿರೆಂದು ಹೇಳಿ ದಿವ್ಯವಾದ ರಥವನ್ನೇರಿ ಹೊರಡಲು ಕೂಡಲೆ ಲಕ್ಷ್ಮಣನು ಧನುರ್ಬಾಣಗಳನ್ನು ತೆಗೆದುಕೊಂಡು ಅಣ್ಣನ ಮೈಗಾವಲಿಗಾಗಿ ಹಿಂದೆಯೇ ಬಂದನು. ಮತ್ತು ಖಡ್ಡ ಖೇ ಕು೦ತಾದ್ಯಾಯುಧ ಗಳನ್ನು ಧರಿಸಿದವರಾಗಿ ಅಶ್ವಾರೂಢರಾದ ಅಸಂಖ್ಯಾತವೀರರು ಹಿಂದೆ ಬಂದರು. ಆಗ ಕೆಲರು ದಿವ್ಯವಾದ ಶ್ವೇತಛತ್ರವನ್ನು ಹಿಡಿದರು. ಕೆಲರು ಬಿಳಿಯ ಚೌರಿಗಳನ್ನು ಬೀಸಿದರು ಸ್ತುತಿಪಾಠಕರು ಮುಂಗಡೆಯಲ್ಲಿ ಹೊಗಳುತ್ತ ಬಂದರು. ಅಪರಿಮಿತ ರಾದ ಕಟ್ಟಿಗೆಯವರು ಮುಂದೆ ನೆರೆದಿರುವ ಜನಗಳ ಗುಂಪುಗಳನ್ನು ಚದರಿಸಿ ರಾಮನ ರಥವು ಬರುವುದಕ್ಕೆ ಅನುಕೂಲವಾಗಿ ಮಾರ್ಗವನ್ನು ಇಂಬುಗೊಳಿಸುತ್ತ ಬಂದರು. ಇಷ್ಟು ಸಂಭ್ರಮದಿಂದ ರಾಮನು ರಾಜವೀಧಿಯಲ್ಲಿ ಬರುತ್ತ-ಚ೦ದ್ರನು ರೋಹಿಣೀ ದೇವಿಯೊಡನೆ ಕೂಡುವಂತೆ ರಾಮನು ರಾಜ್ಯಲಕ್ಷ್ಮಿಯೊಡನೆ ಕೂಡಿ ಇನ್ನು ಮೇಲೆ ತನ್ನ ಮಕ್ಕಳನ್ನೋಪಾದಿಯಲ್ಲಿ ನಮ್ಮೆಲ್ಲರನ್ನೂ ಸುಖದಿಂದ ಸಲಹುವನೆಂದು ಗುಂಪು ಗುಂಪಾಗಿ ಕೂಡಿ ಮಾತಾಡಿಕೊಳ್ಳುತ್ತಿರುವ ಜನರ ಮಾತುಗಳನ್ನು ಕೇಳುವವನಾಗಿ ದಶರಥರಾಜನ ಅರಮನೆಯ ಬಾಗಿಲ ಬಳಿಗೆ ತಂದು ರಥದಿಂದಿಳಿದು ಸಕಲವಿಧಸರಿ ವಾರದವರನ್ನೂ ಅಲ್ಲೇ ನಿಲ್ಲಿಸಿ ತಾನೊಬ್ಬನೇ ಒಳಹೊಕ್ಕು ರಮೆಯುಳ್ಳ ಕಣ್ಣು ಗಳೂ ವಿವರ್ಣವಾದ ಮುಖವೂ ಒಣಗಿದ ತುಟಿಗಳೂ ಉಳ್ಳವನಾಗಿ ದುಃಖಿಸುತ್ತಿ ರುವ ತನ್ನ ತಂದೆಯನ್ನು ನೋಡಿ ಮೊದಲು ಆತನ ಕಾಲುಗಳಿಗೆ ನಮಸ್ಕರಿಸಿ ಆ ಮೇಲೆ ಕೈಕೇಯಿಗೆ ವಂದಿಸಿ ಜಡೀಭೂತನಾಗಿ ನಿಂತುಕೊಂಡನು. ಆಗ ರಾಮನನ್ನು ನೋಡಿ ಧಾರಾಸಂಪಾತರೂಪವಾಗಿ ಕಣ್ಣೀರುಗಳನ್ನು ಸುರಿಸುತ್ತ ದಶರಥನುಹಾ ರಾಮಾ! ಎಂದು ಗಟ್ಟಿಯಾಗಿ ಕೂಗಿ ಕೆಳಗೆ ಬಿದ್ದು ಮೂರ್ಛಹೊಂದಿದನು. ಆಗ ರಾಮನು ರಾಹುಗ್ರಸ್ತನಾದ ಚಂದ್ರನಂತೆಯ ಮೇಘಮಾಲೆಯಿಂದ ಆಚ್ಛಾದಿಸಲ್ಪಟ್ಟ ಸೂರ್ಯ ನಂತೆಯ ಸುಳ್ಳು ಹೇಳಿದ ಋಷಿಯಂತೆಯೂ ತೇಜೋಹೀನನಾಗಿರುವ ತಂದೆಯನ್ನು ನೋಡಿ ಭಯಭ್ರಾಂತನಾಗಿ ತಿರಿಗಿ ಕೈಕೇಯಿಗೆ ವಂದಿಸಿ -ಎಲೈ ತಾಯೇ ! ನನ್ನ ತಂದೆಯು ಮೊದಲಿನಂತೆ ನನ್ನ ನ್ನು ಏಕೆ ಸಂತೋಷಪಡಿಸುವುದಿಲ್ಲ ? ಪೂರ್ವದಲ್ಲಿ ನನ್ನ ತಂದೆಯು ಯಾವ ಕಾರಣದಿಂದಾದರೂ ಕೋಪವುಳ್ಳವನಾಗಿದ್ದರೆ ನನ್ನನ್ನು ನೋಡಿದ