ಪುಟ:ಕಥಾಸಂಗ್ರಹ ಸಂಪುಟ ೨.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಕಥಾಸಂಗ್ರಹ-೪ ನೆಯ ಭಾಗೆ ಮಾತ್ರವಿರುವ ದೀವಿಗೆಯ ಬೆಳಕನ್ನು ತೆಗೆದುಕೊಂಡು ಮಂಡೋದರಿಯ ಸರ್ವಾ೦ಗ ವನ್ನೂ ನೋಡಿ ರಾಮನು ಹೇಳಿದ ಗುರುತುಗಳನ್ನೆಲ್ಲಾ ಕಂಡು ಕಾಲಿನಲ್ಲಿ ಮಾತ್ರ ಕಾಕರೇಖೆಯಿರಲು ಇದು ವೈಧವ್ಯಲಕ್ಷಣವೆಂದು ತಿಳಿದು ಅರ್ಧಸಂಶಯವನ್ನು ಬಿಟ್ಟು ನವವ್ಯಾಕರಣಪಂಡಿತನಾದ ಆಂಜನೇಯನು ಅವಳ ಮುಖದಲ್ಲಿ ಸುಧಾಂಶು ರೇಖೆಯಿಲ್ಲದಿರುವುದನ್ನು ಕಂಡು ಇವಳು ಸೀತೆಯಲ್ಲ ಎಂದು ತಿಳಿದು ಅಲ್ಲಿ ಸ್ವಲ್ಪ ಸ್ಥಳವನ್ನೂ ಬಿಡದೆ ಚೆನ್ನಾಗಿ ಹುಡುಕಿ ಸೀತೆಯನ್ನು ಕಾಣದೆ ಹೊರಗೆ ಬಂದು ಕುಬೇ ರನ ಪ್ರಷ್ಟಕದಲ್ಲಿ ನೋಡಿ ಅಲ್ಲಿಯ ಸೀತೆಯಿಲ್ಲದುದರಿಂದ ಚಿಂತೆಯನ್ನು ಹೊಂದಿ ಕ೦ದಿದ ಮುಖವುಳ್ಳವನಾಗಿ ಕಣ್ಣೀರನ್ನು ಸುರಿಸುತ್ತ-ಸೀತೆಯು ಏನಾದಳೋ ಹಾ ! ಎಂದು ಹಂಬಲಿಸಿ ಹಲುಬುತ್ತ ಅಲ್ಲಿಂದ ಹೊರಟು ಹುಡುಕುತ್ತ ಬರುತ್ತಿರಲು ಆ ಪುರದ ಮಧ್ಯದಲ್ಲಿ ನಾನಾವಿಧವಾದ ಪತಾಕೆಗಳಿಂದಲೂ ಸುರುಚಿರಕಲಶಾಳಿ ಗಳಿಂದಲೂ ಕೂಡಿ ಹದಿನಾರು ಯೋಜನವುಳುದಾಗಿ ಶೋಭಿಸುತ್ತ ಮೇರು ಶಿಖರ ದಂತಿರುವ ಉಪ್ಪರಿಗೆಯನ್ನು ಕಂಡು ಬೆರಗಾಗಿ ಉದಯಾಚಲವನ್ನೇರುವ ಸೂರ್ಯ ನಂತೆ ಅದರ ಮೇಲೆ ಹಾರಿ ಕುಳಿತುಕೊಂಡು ಎಲ್ಲಿ ನೋಡಿದರೂ ಸೀತೆಯು ಸಿಕ್ಕಲಿಲ್ಲ ವಲ್ಲಾ ಎಂದು ಯೋಚಿಸುತ್ತ-ಘೋರಕರ್ಮಿಯಾದ ರಕ್ಕಸನು ಸೀತೆಯನ್ನು ಏನು ಮಾಡಿದನೋ ? ನಾನು ಬ್ರಹ್ಮನಂದನನಿಗೂ ರವಿನಂದನನಿಗೂ ರಘುನಂದನನಿಗೂ ಏನು ಹೇಳಲಿ ? ಎಲ್ಲರೂ ನನ್ನ ಬರುವಿಕೆಯನ್ನೇ ನಿರೀಕ್ಷಿಸಿ ಕೊಂಡಿದ್ದಾರಲ್ಲಾ? ನಾನು ಹೋಗಿ ಸೀತೆಯು ಸಿಕ್ಕಲಿಲ್ಲವೆಂದು ಹೇಳಿದಕೂಡಲೇ ರಾಮನು ಪ್ರಾಣಬಿಡುವನು. ಅಗ್ರಜಮ್ಮತಿ ವ್ಯಸನದಿಂದ ಲಕ್ಷ್ಮಣನೂ ಆತನ ಗತಿಯನ್ನೇ ಹೊಂದುವನು. ಅವರಿ ಬರೂ ಸತ್ತ ಮೇಲೆ ಮಹಾವ್ಯಸನವನ್ನು ಸಹಿಸಲಾರದೆ ಸುಗ್ರೀವನೂ ಸಾಯುವನು. ಈತನ ಮರಣವಾರ್ತೆಯನ್ನು ಕೇಳಿದರೆ ಆತನ ಪತ್ನಿ ಯರೂ ಆತನ ಮಾರ್ಗವನ್ನೇ ಹಿಡಿಯುವರು. ಈ ಕಾರಣದಿಂದ ಅಂಗದನೂ ಪ್ರಾಣಗಳನ್ನು ತೊರೆದು ಕೊಳ್ಳುವನು. ಈ ಸಂಗತಿಯನ್ನು ಭರತಶತ್ರುಘ್ನರು ಕೇಳಿದರೆ ಆಕ್ಷಣದಲ್ಲಿಯೇ ಅಸುವನ್ನು ನೀಗುವರು. ತದನಂತರದಲ್ಲಿ ಕೌಸಲ್ಯಾ ಕೈಕೇಯಿ ಸುಮಿತ್ರೆಯರು ಜೀವವನ್ನು ಕಳಕೊಳ್ಳುವರು. ಇಂಥವರೆಲ್ಲರೂ ಸತ್ತು ಹೋದ ಮೇಲೆ ನಾವಿದ್ದು ಫಲವೇನೆಂದು ಸಾಕೇತನಗರದ ಪ್ರಧಾನಿಗಳೂ ಪುರನಿವಾಸಿಗಳೂ ಮರಣವನ್ನು ಹೊಂದುವರು. ಈ ಮಹಾ ವಿಪತ್ತಿಗೆ ಏನು ಮಾಡಬೇಕು ? ನನ್ನೊಬ್ಬನಿಂದ ಇಷ್ಟು ಪ್ರಳಯವಾಗು ವುದಲ್ಲಾ! ಇಂಥ ಭಯಂಕರಕೃತ್ಯಗಳನ್ನು ನೋಡುವುದಕ್ಕಿಂತ ಮೊದಲು ನಾನೇ ಜೀವ ಹತ್ಯವನ್ನು ಮಾಡಿಕೊಳ್ಳುವುದು ಉತ್ತಮವೆಂದು ಯೋಚಿಸಿ ಪುನಃ ಧೈರ್ಯ ವನ್ನು ತಂದುಕೊಂಡು ನಾನು ಇಷ್ಟು ಮಾತ್ರಕ್ಕೆ ಪ್ರಾಣಗಳನ್ನು ತೊರೆದು ಕೊಳ್ಳು ವುದರಿಂದ ಸ್ವಾಮಿ ಕಾರ್ಯವನ್ನು ನಿರ್ವಂಚನೆಯಿಂದ ಮಾಡಿದಂತಾಗುವುದಿಲ್ಲ ಈಗ ನಾನು ಯಮನ ಪಟ್ಟಣಕ್ಕೆ ಹೋಗಿ ಆ ಯಮನನ್ನೇ ಹಿಡಿದು ಶಿಕ್ಷಿಸಿದರೆ ಆತ ನಾದರೂ ಸೀತೆಯನ್ನು ತೋರಿಸುವನು. ಹಾಗಿಲ್ಲದಿದ್ದರೆ ಬ್ರಹ್ಮ ಲೋಕಕ್ಕೆ ಹೋಗಿ ಬ್ರಹ್ಮನನ್ನು ಹಿಡಿದು ಶಿಕ್ಷಿಸಿದರೆ ಆತನಾದರೂ ಸೀತೆಯನ್ನು ತೋರಿಸುವನು.