ಪುಟ:ಕಥಾಸಂಗ್ರಹ ಸಂಪುಟ ೨.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕಥಾಸಂಗ್ರಹ-೪ ನೆಯ ಭಾಗ ತಿದ್ದನು. ಕುಂಭಕರ್ಣನು ನಿದ್ರಿಸುತ್ತಿದ್ದನು. ಮಿಕ್ಕ ರಾಕ್ಷಸಕುಮಾರರು ಏನು ಮಾಡಬಲ್ಲರು ? ಎಂದು ಹೇಳಿದನು. ಆಗ ರಾವಣನು ಆ ಮಾತನ್ನು ಕೇಳಿದ ಮಾತ್ರದಿಂದಲೇ ಕ್ರೋಧಕ೦ಪಿತ ಶರೀರನಾಗಿ ಇಪ್ಪತ್ತು ಕಣ್ಣಳಿಂದಲೂ ರಮೆಯನ್ನು ಗುಳುತ್ತ ಕೂಡಲೇ ಲಂಕಾನಗ ರದ ಸಂರಕ್ಷಣೆಗಾಗಿ ಕೆಲವು ಜನ ರಾಕ್ಷಸ ಸೇನಾಪತಿಗಳೊಡನೆ ವಿಭೀಷಣನನ್ನು ನೇಮಿಸಿ-ಮಧುರೈತನನ್ನು ಮೊದಲು ಯಮಪುರಕ್ಕೆ ಕಳುಹಿಸಿ ಅಲ್ಲಿಂದ ಅಮರಾ ವತಿಗೆ ಹೋಗಿ ಇ೦ದ್ರನ ಗರ್ವವನ್ನು ಮುರಿದು ದೇವತೆಗಳನ್ನು ಹಿಂಡುವೆನು. ಜಗಳ ದಲ್ಲಿ ನನಗೆ ಯಾರಿದಿರು ? ಎಂದು ಔಡುಗಳನ್ನು ಕಚ್ಚುತ್ತ ಹಲ್ಲಡಿದು ತೊರೆದು ಗರ್ಜಿಸುತ್ತ ಅನೇಕ ಸೇನಾಜಾಲದೊಡನೆ ಕೂಡಿ ಹೊರಡಲು ಆಗ ಜೈತ್ರಯಾತ್ರಾ ಸೂಚಕವಾದ ಭೇರೀಧ್ವನಿಯು ನರನಾಗಾಮರಲೋಕಗಳನ್ನು ಬೆದರಿಸಿತು. ಕೂಡಲೆ ಕುಂಭಕರ್ಣ ಮೇಘನಾದಾದಿ ಸಮಸ್ತ ರಾಕ್ಷಸವೀರರೂ ಹೊರಟರು. ಆ ಮಹದಾ ಶ್ವರ್ಯವನ್ನು ಬಣ್ಣಿಪರಾರು ? ಆನೆ ಕುದುರೆ ತೇರು ಕೊಣ ಗೂಳಿ ಸಿಂಹ ಶರಭ ಹುಲಿ ಹಂದಿ ಹೇಸರಗತ್ತೆ ಇವೇ ಮೊದಲಾದ ತಮ್ಮ ತಮ್ಮ ವಾಹನಗಳನ್ನೇರಿ ವಿವಿಧಾ ಯುಧಗಳನ್ನು ಧರಿಸಿ ಕಾಲಭೈರವನ ದಂಡೋ ? ಮೃತ್ಯುವಿನ ಬಳಗವೋ ? ಭೂತ ರಾಜನ ಪಡೆಯೋ ? ಎಂಬಂತೆ ಸಮಸ್ತ ಪ್ರಾಣಿಗಳಲ್ಲೂ ಭೀತಿಯ ಬೀಜವನ್ನು ಬಿತ್ತುತ್ಯ ದಶಮುಖನ ಸೇನೆಯು ಹೊರಟಿತು. ಆಗ ಸೇನಾಗ್ರದಲ್ಲಿ ಮೇಘನಾದನೂ ಹಿಂಗಡೆಯಲ್ಲಿ ಕುಂಭಕರ್ಣನೂ ಮಧ್ಯದಲ್ಲಿ ರಾವಣನೂ ಬರುತ್ತಿದ್ದರು. ಈ ರೀತಿ ಯಾದ ಸಮರಸನ್ನಾಹದಿಂದ ಕೂಡಿದ ರಾಕ್ಷಸಬಲವು ವಿಲಯ ಕಾಲದಲ್ಲಿ ಮೇರೆ ದಪ್ಪಿ ಬಂದ ಮಹಾಸಾಗರವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸುವಂತೆ ಮಧುದನು ಜನ ಪುರವನ್ನು ಮುತ್ತಿತು. ಅಲ್ಲಿ ಗೊಡೆಯನಾದ ಮಧು ದೈತ್ಯನು ಪೂರ್ವದಲ್ಲಿ ಸದ್ದ ಕಿಯಿಂದ ಶಿವನನ್ನು ಮೆಚ್ಚಿಸಿ ಒಂದು ತ್ರಿಶೂಲಾಯುಧವನ್ನು ಪಡೆದಿರುವನು. ಅದನ್ನು ಕೈಯಲ್ಲಿ ಹಿಡಿದು ಕೊಂಡು ಕಾಳಗಕ್ಕೆ ಹೊರಟರೆ ಹರನೊಬ್ಬನು ಹೊರತು ಮತ್ತಾರೂ ಎದುರಿಗೆ ನಿಂತು ತರಹರಿಸಲಾರರು. ಮಧುದೈತ್ಯನು ತನಗೆ ಇಂಥ ಉತ್ಕೃಷ್ಟಾ ಯುಧವಿದೆಯೆಂಬ ಗರ್ವದಿಂದ ರಾವಣನ ಸೈನ್ಯವನ್ನು ಲಕ್ಷ್ಯಕ್ಕೆ ತಾರದೆ ಧೈರ್ಯದಿಂದಿದ್ದನು. ಅಷ್ಟರಲ್ಲಿ ರಾವಣನ ಚಿಕ್ಕಮ್ಮನಾದ ಕುಂಭೀನಸಿಯು ಶೀಘ್ರ ಸೇನಾಮಧ್ಯದಲ್ಲಿರುವ ರಾವಣನ ಬಳಿಗೆ ಬಂದು ನಿಂತು ಅವನನ್ನು ಕುರಿತು ಎಲೈ ಕುಮಾರನಾದ ದಶಕಂಧರನೇ ! ಕೇಳು. ನನ್ನಲ್ಲಿ ಕನಿಕರವನ್ನಿ ಡು, ಕುಲಸ್ತ್ರೀ ಯರಿಗೆ ವೈಧವ್ಯಕ್ಕಿಂತಲೂ ಅತಿಶಯವಾದ ದುಃಖವು ಮತ್ತೊಂದಿಲ್ಲ. ನನ್ನ ಮೇಲೆ ದೃಷ್ಟಿಯಿಟ್ಟು ನನ್ನ ಪತಿಯಾದ ಮಧುದನುಜನನ್ನು ಕಾಪಾಡು. ನನ್ನ ಮಾತನ್ನು ಮೀರದೆ ನಡಿಸೆಂದು ಬಹುವಿಧವಾಗಿ ಬೇಡಿಕೊಳ್ಳಲು ಆಗ ರಾವಣನು ನಿನ್ನ ಗಂಡ ನನ್ನು ಕರೆ ! ಭಯಪಡಬೇಡ ! ಹೋಗೆಂದನು. ಆಗ ಅವಳು ನಿದ್ರಿಸುತ್ತಿರುವ ತನ್ನ ಗಂಡನ ಬಳಿಗೆ ಬಂದು ಎಬ್ಬಿಸಿ ಅವನನ್ನು ಕುರಿತು ನನ್ನ ಮಗನಾದ ದಶಾನನನು ದೇವೇಂದ್ರನನ್ನು ಜಯಿಸುವುದಕ್ಕಾಗಿ ಸೇನೆಯೊಡನೆ ಹೊರಟುಬಂದಿರುವನು. ನೀನು