ಪುಟ:ಕಥಾಸಂಗ್ರಹ ಸಂಪುಟ ೨.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36. ಕಥಾಸಂಗ್ರಹ-೪ ನೆಯ ಭಾಗ ಈ ರಾತ್ರಿ ಉಪವಾಸವ್ರತವನ್ನು ನಡಿಸುವಂತೆ ನೇಮಿಸಿ ಬರಬೇಕೆಂದು ಹೇಳಲು ವಸಿ ಷ್ಟರು ಹೋಗಿ ಅದೇ ರೀತಿಯಾಗಿ ಮಾಡಿಸಿದರು. ಮಂತ್ರಿಗಳು ರಾಜಾಜ್ಞೆಯಂತೆ ಆ ದಿವಸವೇ ನಗರಾಲಂಕಾರಾದಿ ಸರ್ವ ಸಂವಿಧಾನಗಳನ್ನು ಮಾಡಿ ಅಭಿಷೇಕ ಕಾರ್ಯಕ್ಕೆ ಬೇಕಾದ ಸೋಪಸ್ಕರಗಳನ್ನು ಸಿದ್ಧ ಮಾಡಿದರು. ಆಗ ಕುಬೈಯ ದುರ್ವೃತ್ರ ಆಗಿ ಕೈಕೇಯಿಯ ಸೈರೇನಿಯಾದ ಮಂಧರೆ ಎಂಬವಳು ರಾಮಪಟ್ಟಾಭಿಷೇಕದ ವರ್ತಮಾನವನ್ನೂ ಪ್ರಯತ್ನವನ್ನೂ ತಿಳಿದು ಅಸೂಯೆಯಿಂದ ಕೂಡಿದವಳಾಗಿ ತನ್ನ ಒಡತಿಯಾದ ಕೈಕೇಯಿಯ ಬಳಿಗೆ ಹೋಗಿ ರಾಮಪಟ್ಟಾಭಿಷೇಕಕ್ಕೆ ವಿಘ್ನಕಾರಿಗಳಾದ ಅನೇಕ ದುರ್ಬೋಧನೆಗಳನ್ನು ಬೋಧಿಸಿ ಆಕೆಯ ಮನಸ್ಸನ್ನು ಕೆಡಿಸಿ ನಿನ್ನ ಗಂಡನಾದ ದಶರಥರಾಜನು ಮೊದಲು ದೇವಾಸುರ ಯುದ್ಧ ಕಾಲದಲ್ಲಿ ನಿನಗೆ ಎರಡು ವರಗಳನ್ನು ಕೊಟ್ಟಿರುವನಷ್ಟೆ, ನೀನು ಅವುಗಳನ್ನು ಸಮಯಬಂದಾಗ ಹೇಳುವೆನೆಂದು ಆಗಲೇ ಹೇಳಿದ್ದೀಯೆ, ನಾನು ಈ ವರ್ತಮಾನವನ್ನು ನಿನ್ನಿಂದಲೇ ಕೇಳಿದ್ದೇನೆ. ಈಗ ಆ ಎರಡು ವರಗಳಲ್ಲಿ ಒಂದಕ್ಕೆ ಫಲರೂಪವಾಗಿ ರಾಮನು ಜಟಾಧಾರಿಯಾಗಿ ನಾರ್ಮಡಿಯನ್ನುಟ್ಟು ಪಟ್ಟಣವನ್ನು ಬಿಟ್ಟು ಹದಿನಾಲ್ಕು ಸಂವತ್ಸರಗಳವರೆಗೂ ವನವಾಸಮಾಡುವುದನ್ನೂ ಮತ್ತೊಂದು ವರಕ್ಕೆ ಭರತನಿಗೆ ಈ ಕೋಸಂರಾಜ್ಯಾಭಿಷೇಕ ಮಾಡುವುದನ್ನೂ ಕೇಳಿಕೊಳ್ಳುವವ ಳಾಗು. ಸತ್ಯ ವಚನವುಳ್ಳವನಾದ ಅರಸು ತಪ್ಪದೆ ಈ ರೀತಿಯಾಗಿಯೇ ನಡಿಸುವನು ಹೀಗಾಗುವುದರಿಂದ ನಿನ್ನ ಮಗನಾದ ಭರತನು ಆರೂಢಮಲನಾಗಿ ಈ ಕೋಸಲ ರಾಜ್ಯವನ್ನು ಆಳುವನು. ನೀನೂ ನಿನ್ನನ್ನು ನಂಬಿದ ನಾವೂ ಸುಖವಾಗಿರಬಹುದು ಎಂದು ಹೇಳಲು ಆಕೆಯು ಆ ಮಾತಿಗೆ ಒಡಂಬಟ್ಟು ತನ್ನ ತಲೆಯ ಕೂದಲುಗಳನ್ನು ಕೆದರಿಕೊಂಡು ಆಭರಣಗಳನ್ನೂ ಆಮೂಲ್ಯಾಂಬರಗಳನ್ನೂ ತೆಗೆದು ಬಿಸುಟು ಬಿಳಿಯ ಸೀರೆಯನ್ನುಟ್ಟು ಬಿಟ್ಟೋಲೆಗಳನ್ನಿಟ್ಟು ಕೊಂಡು ಭೋಜನೋಪಚಾರಗಳನ್ನು ತ್ಯಜಿಸಿ ದುಸ್ಸಂಕಲ್ಪಮಯವಾದ ಚಿತ್ತವುಳ್ಳವಳಾಗಿ ನೆಲದಮೇಲೆ ಬಿದ್ದು ಕೊಂಡಿದ್ದಳು. ಆಗ ದಶರಥರಾಜನು ರಾಮನಿಗೆ ಪಟ್ಟಾಭಿಷೇಕೋತ್ಸವವಾಗುವ ಸಂತೋಷವಾರ್ತೆಯನ್ನು ತನ್ನ ಪ್ರಿಯ ಪತ್ನಿ ಯಾದ ಕೈಕೇಯಿಗೆ ತಿಳಿಸಬೇಕೆಂದು ಹರ್ಷದಿಂದ ಆಕೆಯ ಮನೆಗೆ ಬಂದು ಅವಳ ದುಸ್ಥಿತಿಯನ್ನು ನೋಡಿ ಪರಿತಪಿತನಾಗಿ ಆಕೆಯನ್ನು ಕುರಿತು-ಇದೇನು ಆಶ್ಚರ್ಯ ? ಹೀಗಿರುವುದಕ್ಕೆ ಕಾರಣವನ್ನು ತಿಳಿಸು ಎಂದು ಕೇಳಿದುದಕ್ಕೆ ನೀನು ಮೊದಲು ನನಗೆ ಕೊಟ್ಟ ಎರಡು ವರಗಳನ್ನು ಈಗ ನಡಿಸಿಕೊಡ ಬೇಕು. ಈ ಭಾಗದಲ್ಲಿ ತಪ್ಪುವುದಿಲ್ಲವೆಂದು ಪ್ರಮಾಣಮಾಡಿದರೆ ನನ್ನ ಇಷ್ಟಾರ್ಥ ವನ್ನು ಕೇಳಿಕೊಳ್ಳುವೆನು ಎನಲು ದಶರಥನು ಹೆಂಡತಿಯ ಮೇಲಣ ಮೋಹದಿಂದ ಸತ್ಯವಾಗಿಯು ನಡೆಸಿಕೊಡುವೆನೆಂದು ರಾಮನ ಮೇಲೆ ಆಣೆಯಿಟ್ಟು ಹೇಳಿದನು. ಆ ಮೇಲೆ ಕೈಕೇಯಿದೇವಿಯು ದಶರಥನನ್ನು ಕುರಿತು-ನೀನು ಮೊದಲು ಕೊಟ್ಟಿದ್ದ ಎರಡು ವರಗಳಲ್ಲಿ ಒಂದು ವರಕ್ಕೆ ರಾಮನು ಜಟಾಚೀರಧಾರಿಯಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಕಾಡಿನಲ್ಲಿರುವ ಹಾಗೆ ಕಟ್ಟು ಮಾಡಿ ಕಳುಹಿಸ