ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 261 ಸವನ್ನೂ ತೆಗೆದುಕೊಂಡು ಆಶ್ರಮಕ್ಕೆ ಬಂದು ದರ್ಭೆ ಸಮಿತ್ತು ಇವುಗಳನ್ನು ಯಾಗ ಶಾಲೆಯಲ್ಲಿಟ್ಟು ಗೋಗ್ರಾಸವನ್ನು ತೆಗೆದು ಕೊಂಡು ಎಂದಿನಂತೆ ಗೋವು ಇರುವ ಸ್ಥಳಕ್ಕೆ ಹೋಗಿ ನೋಡಲು ; ಅಲ್ಲಿ ಗೋವು ಇಲ್ಲದಿದ್ದುದರಿಂದ ಆಶ್ಚರ್ಯಾವಿಷ್ಯ ನಾಗಿ ಶೀಘ್ರದಿಂದ ತಂದೆಯಾದ ಜಮದಗ್ನಿಯ ಬಳಿಗೆ ಬಂದು--ಎಲೆ ತಂದೆಯೇ, ಈಗ ನಾನು ಧೇನುವಿಗೋಸ್ಕರ ಎಳೆ ಹುಲ್ಲನ್ನು ಬಹಳವಾಗಿ ತಂದಿದ್ದೇನೆ. ಗೋವು ಎಲ್ಲಿರುವುದು ? ಕಾಣುವುದಿಲ್ಲವಲ್ಲಾ ಎಂದು ಕೇಳಲು ; ಆಗ ಜಮದಗ್ನಿ ಯುಗೋವಿನ ವಿಷಯದಲ್ಲಿ ಕಾರ್ತವೀರ್ಯಾರ್ಜುನನು ಮಾಡಿದ ಬಲಾತ್ಕಾರದ ಸಂಗತಿ ಯನ್ನು ಯಥಾವತ್ತಾಗಿ ತಿಳಿಸಿದನು. ಅದನ್ನು ಕೇಳಿ ಪರಶುರಾಮನು ಮಹಾ ಕೊಪಸಂತಾಪಾವಿಷ್ಟ ನಾಗಿ-ಅಕಟಕಟಾ ! ನೀಚರಾದ ಅರಸುಗಳಿಗೆ ಮುನಿಜನಗಳ ವಸ್ತುವನ್ನು ಬಲಾತ್ಕಾರದಿಂದ ಅಪಹರಿಸಿಕೊಂಡು ಹೋಗುವ ಶಕ್ತಿಯುಂಟಾಯಿತೇ ? ಕ೦ದಮಲಾದ್ಯಾಹಾರಗಳನ್ನು ಮಾಡಿಕೊಂಡು ಕೃಶಾಂಗಿಗಳಾಗಿ ಅರಣ್ಯ ವಾಸಿಗ ಳಾಗಿರುವವರು ಏನು ಮಾಡಬಲ್ಲರೆಂದು ಯೋಚಿಸಿದನೇ ? ಮಢನಾದ ಅವನು ತನ್ನ ಚಕ್ರವರ್ತಿತ್ವದ ಹೆಮ್ಮೆಯನ್ನು ನಮ್ಮಲ್ಲಿ ತೋರಿಸಿದನೇ ? ಯಾವ ಪ್ರಾಣಿಗಾದರೂ ಉಪದ್ರವವನ್ನುಂಟುಮಾಡದೆ ಕಾಡಿನಲ್ಲಿ ಎಲೆಮನೆಯೊಳಗೆ ಪಾಸಮಾಡಿಕೊಂಡಿರುವ ಮಹಾತ್ಮರಾದ ತಪಸ್ವಿಗಳನ್ನು ಸಾಧಾರಣರೆಂದು ಬಗೆದನೇ ? ಒಳ್ಳೆಯದು ! ಆಗಲಿ ! ಅವನ ಪರಾಕ್ರಮವನ್ನು ನೋಡುವೆನೆಂದು ಹೇಳಿ ಅಮೋಘವಾದ ಕವಚವನು. ತೊಟ್ಟು ಕೊಂಡು ಬಿಟ್ಟು ಬತ್ತಳಿಕೆ ಕೊಡಲಿಗಳನ್ನು ತೆಗೆದುಕೊಂಡು ಮಹಾ ಕೋಪ ದಿಂದ ಪರವಶನಾಗಿ ಆ ಕ್ಷಣದಲ್ಲಿಯೇ ಆಶ್ರಮದಿಂದ ಹೊರಟು ಮಾಹಿಷ್ಮತೀನಗರದ ಬಳಿಗೆ ಬಂದು ಊರು ಬಾಗಿಲನ್ನು ಅತಿಕ್ರಮಿಸಿ ಗೋಪುರದ್ವಾರವನ್ನು ದಾಟಿ ಬಂದು ರಾಜದ್ವಾರದ ಬಳಿಯನ್ನು ಸೇರಿ ಅಲ್ಲಿ ನಿಂತು ಬಾಗಿಲು ಕಾಯುವವರನ್ನು ಕರೆದು-.. ಎಲೈ ದ್ವಾರಪಾಲಕರೇ, ನೀವು ನಿಮ್ಮ ಅರಸನ ಬಳಿಗೆ ಹೋಗಿ ನಾವು ಹೇಳಿದುದಾಗಿ ಹೇಳತಕ್ಕುದೇನೆಂದರೆ, ಲೋಕದಲ್ಲಿ ಜನರಿಗೆ ವಿನಾಶಕಾಲದಲ್ಲಿ ವಿಪರೀತ ಬುದ್ದಿಗಳು ಹುಟ್ಟುವುವೆಂದು ದೊಡ್ಡವರು ಹೇಳುವ ಮಾತು ಈಗ ನಿನ್ನಲ್ಲಿ ಯಥಾರ್ಥವಾಯಿತು. ನಮ, ತಂದೆಯ ಪ್ರೀತಿಯಿಂದ ಕರೆದು ನಿನಗೆ ಸತಾರಮಾಡಿದುದು ಪಥವ೩ ಕಿ. ಉಣ್ಣಿಸಿದವನ ಬೆರಳನ್ನು ಕಚ್ಚಿದನೆಂಬ ಗಾಧೆಗೆ ಸರಿಯಾಗಿ ನಮ್ಮ ಹೋಮಧೇನು ವನ್ನು ಬಲಾತ್ಕಾರದಿಂದ ಅಪಹರಿಸಿಕೊಂಡು ಬಂದೆಯಲ್ಲಾ ! ಇದು ನಿನಗೆ ನ್ಯಾಯವೇ? ಸತ್ತ ದನದ ಚರ್ಮದಲ್ಲಿ ಮಾಡಿದ ತಿದಿಯ ದೆಸೆಯಿಂದ ಹೊರಡುವ ಉಸಿರುಗಳು ಕಠಿಣತರವಾದ ಪಂಚಲೋಪಗಳನ್ನು ಸುಟ್ಟು ಬೂದಿಮಾಡುವುವು ಹೀಗಿರುವಲ್ಲಿ ತಪಸ್ವಿಗಳಾಗಿಯ ತೇಜಸ್ವಿಗಳಾಗಿಯೂ ಇರುವ ಬ್ರಹ್ಮ ಜ್ಞಾನಿಗಳ ಸಂತಾಪದ ನಿಟ್ಟುಸಿರುಗಳು ಅಪರಾಧಿಯ ಕುಲಕೋಟಿಗಳನ್ನು ನಿಮೇಷಮಾತ್ರದಲ್ಲಿ ಸುಟ್ಟು ಭಸ್ಮಿಭೂತಮಾಡದೆ ಇರುವುದೇ ? ಇದೋ, ನೀನು ನಮ್ಮ ತಂದೆಯಾದ ಜಮ ದಗ್ನಿಗೆ ದ್ರೋಹವನ್ನು ಮಾಡಿ ವ್ಯಸನದಿಂದ ಆತನಿಗೆ ನಿಟ್ಟುಸಿರುಗಳು ಹೊರಡುವ ಹಾಗೆ ಮಾಡಿದ ನಿನ್ನ ಪ್ರಾಣಗಳನ್ನು ನಿನ್ನ ಮೂಗಿನ ಮಲಕ ಹೊರಡಿಸುವುದಕ್ಕೆ