ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 177 ವನ್ನು ಮಾಡುತ್ತಿದ್ದ ಹುಲಕ್ಕಸರನ್ನು ಯುದ್ಧಕ್ಕೆ ಕಳುಹಿಸಿ ಕೊಲ್ಲಿಸಿ ಪ್ರಾಣಗಳನ್ನು ಉಳಿಸಿಕೊಂಡ ಗಟ್ಟಿಗನಲ್ಲವೇ ನೀನು ? ಆದರೇನಾಯಿತು ? ಆಗ ನೀನು ಜೀವವನ್ನು ಉಳಿಸಿಕೊಂಡು ದರಿಂದ ಈಗ ನನಗೂ ನಿನಗೂ ದ್ವಂದ್ವ ಯುದ್ಧ ವು ಸಂಭವಿಸಿತು. ಆಗಲೇ ನೀನು ಮಡಿದು ಹೋಗಿದ್ದರೆ ನಿನ್ನನ್ನು ಕೇಳುತ್ತಿದ್ದವರಾರು?? ಈಗ ನನ್ನೊಡನೆ ಬಾಹುಯುದ್ದ ಕ್ಕೆ ಶೀಘ್ರತೆಯಿಂದ ಸನ್ನದ ನಾಗು ಕಾದಾಡಿ ನೋಡುವಣ ಈ ಯುದ್ಧರಂಗಸ್ಥಳವು ನಮ್ಮಿಬ್ಬರ ಪರಾಕ್ರಮವನ್ನು ತೂಗುವ ತಕ್ಕಡಿಯಂತಿದೆ ಎಂದು ಹೇಳಿ ಮುಂದೈತಂದು ರಾವಣನ ಹೆಗ್ಡೆ ತನ್ನ ಹಿಡಿದೆತ್ತಿ ಮೊಗಮೇಲಾಗಿ ಬೀಳುವಂತೆ ನೆಲಕ್ಕೊಗೆದನು, ಮತ್ತು ಅವನ ಸಾರಥಿಯನ್ನು ನೋಡಿ-ಎಲವೋ, ಬಂಡನ ಬಂಡಿ ಯಾಳೇ, ನಮ್ಮ ಮಲ್ಲಯುದ್ದ ದಲ್ಲಿ ನಿನ್ನೊಡೆಯನು ಬದುಕಿ ಬಂದರೆ ನೀನು ಅವನಿಗೆ ಇವುಗಳನ್ನು ಕೊಡು ಎಂದು ರಾವಣನ ಕೈಗಳಲ್ಲಿದ್ದ ಧನುರಾದ್ಯಾಯುಧಗಳನ್ನೆಲ್ಲಾ ಸೆಳೆದು ಕೊಂಡು ಅವನ ಬಳಿಗೆ ಬಿಸುಟನು. ಅನಂತರದಲ್ಲಿ ನಿರಾಯುಧನಾದ ರಾವಣ ನನ್ನು ಕುರಿತು--ಎಲೋ, ಹತ್ತು ತಲೆಗಳ ವಿಕಾರರೂಪಿಯೇ, ಕೈದುಗಳನ್ನು ಕಿತ್ತು ಬಿಸುಟನೆಂದು ಭಯಪಟ್ಟು ಬಲಹೀನನಾಗಬೇಡ, ನಿನಗೆ ಮುಷ್ಟಿಯುದ್ದವನ್ನು ಮಾಡುವುದಕ್ಕೆ ಬಲವಿದೆಯೋ ಇಲ್ಲವೋ ? ತಡಮಾಡದೆ ಹೇಳು.” ನಮೀರ್ವರ ಮಲ್ಲ ಯುದ್ಧದ ವಿಚಿತ್ರ ಕ್ರಮವನ್ನು ಉಭಯ ಕಟಕದವರೂ ಗಗನಮಂಡಲದಲ್ಲಿ ದೇವಸಮೂಹವೂ ನೋಡಿ ಸಂತೋಷಿಸಲಿ ಎಂದು ನಿಶಾಚರ ಪತಾಕಿನಿಯು ಬೆದರಿ ಬೀಳುವಂತೆ ಗರ್ಜಿಸಿದನು. - ಆಗ ನಿಶಾಚರ ಚಕ್ರೇಶ್ವರನು--ಎಲಾ, ದುಷ್ಟ ಮರ್ಕಟವೇ, ಎಳೆಯದಾದ ಬಳ್ಳಿಯ ಕುಡಿಯನ್ನು ಚಿವುಟುವುದಕ್ಕೆ ಉಕ್ಕಿನ ದೊಡ್ಡ ಕೊಡಲಿಯನ್ನು ತೊಳಿಸಿ ಕೊಂಡು ಬರಬೇಕೇ ? ಮಾರಿಯ ಪೂಜೆಗೆ ಅಶ್ವಮೇಧಯಾಗದ ಸಾಮಗ್ರಿಗಳನ್ನು ಒದಗಿಸಬೇಕೇ ? ಕೋಳಿ ಪಿಳ್ಳೆಯನ್ನು ಕೊಲ್ಲುವುದಕ್ಕೆ ಚತುರಂಗಬಲವನ್ನು ತರಬೇಕೇ? ನಾನು ನಿನ್ನೊಡನೆ ಕಾದುವುದಕ್ಕೆ ಮಹಾಸ್ತ್ರ ಪರ್ಯ೦ತರವೂ ಯೋಚಿಸಬೇಕೇ ? ಶಸ್ತ್ರವಿಲ್ಲ ದಿರುವ ನಿನಗೆ ನನ್ನ ಕರತಲದ ಸೆಟ್ಟೇ ಮಹಾಸ್ಯಹತಿಯಲ್ಲವೇ ? ಎಂದು ಹೇಳಲು; ಆಗ ಮರುನ್ನಂದನನು ಗಹಗಹಿಸಿ ನಕ್ಕು ರಾವಣನನ್ನು ಕುರಿತು-ಎಲಾ, ಖಳರಲ್ಲಿ ನೀನು ಗಟ್ಟಿಗನೇ ಸರಿ. ನಿನ್ನ ಕೊಬ್ಬಿನ ಮಾತುಗಳನ್ನು ನಾನು ಚೆನ್ನಾಗಿ ಮೆಚ್ಚಿದೆನು, ನಿನ್ನನ್ನು ಬಿಟ್ಟು ಹುಡುಕಿದರೆ ಮೂಢರು ಎಲ್ಲಿ ಸಿಕ್ಕುವರು ? ಹಾಗೇ ಆಗಲಿ; ನಾವಿಬ್ಬರೂ ಮತವುದರಿಂದಲೂ ಯುದ್ಧಕ್ಕೆ ತೊಡಗಬಾರದು, ಒಬೌ. ಬ್ಬರು ಒಂದೊಂದು ಗುದ್ದನ್ನು ಹೊಡೆಯುತ್ತ ಹೀಗೆ ಮರು ಗುದ್ದುಗಳಾಗುವದ ರಲ್ಲಿ ಮೊದಲು ಯಾರು ಸಾಯುವರೋ, ಯಾರು ಬದುಕುವರೋ ?” ನೋಡೋಣ ಎನ್ನಲು ; ಆಗ ರಾವಣನು ಒಪ್ಪಿ-ಆದರೆಲವೋ, ಕಪಿಯೇ, ಮೊದಲು ನೀನು ನನ್ನನ್ನು ಗುದ್ದು, ನಿನ್ನೇಟಿನಿಂದ ನಾನು ಸಾಯದೆ ಬದುಕಿದರೆ ಆ ಮೇಲೆ ನಿನ್ನನ್ನು ಗುದ್ದು ವೆನು ಎಂದು ಹಾಸ್ಯಮಾಡಿ ನುಡಿಯಲು ; ಆಗ ಮಾರುತಿಯು ಗರ್ಜಿಸುತ್ತ ಕೋಪೋದ್ರೇಕದಿಂದ ಕಿಡಿಗೆದರಿ ತನ್ನ ಬಾಹುವನ್ನು ಅತ್ಯುನ್ನತವಾಗಿ ಎತ್ತಿ 12