ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಕಥಾಸಂಗ್ರಹ-೪ ನೆಯ ಭಾಗ ನೋಡಿದರೂ-ಹಾ! ಮಗನೇ, ಹಾ ! ತಂದೆಯೇ, ಅಯ್ಯೋ ! ಅತ್ತಿಗೆಯೇ, ಇಂದಿಗೆ ಭೂಲೋಕದ ಹಂಗು ಹರಿಯಿತೇ ? ಅಗ್ನಿ ಯಲ್ಲಿ ಸಿಕ್ಕಿ ನಿಮೇಷಮಾತ್ರದಲ್ಲಿ ಮಾಯ ವಾದಿರಲ್ಲಾ ! ಮಹಾಜ್ವಾಲೆಯಲ್ಲಿ ಅವನು ಬಿದ್ದನು; ಇವಳು ಸಿಕ್ಕಿದಳು; ಅವನ ಕಾಲು ಸೀದುಹೋಯಿತು; ಅವ : ಬೆನ್ನು ಬೆಂದಿತು; ಹಾ ! ಅವನು ಓಡುತ್ತ ಬಂದು ಬೆಂಕಿಗೆ ಸಿಕ್ಕಿ ಸತ್ತನು ಎಂದು ಲಂಕಾನಗರದಲ್ಲಿ ಕೂಗುತ್ತಿದ್ದರು. ಲಂಕಾನಗರವು ದುಃಖಧ್ವನಿಮಯವಾಯಿತು. ವೀರರೆಲ್ಲರೂ ತಮ್ಮ ತಮ್ಮ ಶರರಕ್ಷಣೆಯಲ್ಲೇ ಆಸಕ್ತರಾದರು. ಹೇಳತಕ್ಕುದೇನು ? ಓಡುತ್ತಿರುವ ಜನರಿಗೆ ಲಂಕಾದುರ್ಗದ ಹೆಬ್ಬಾ ಗಿಲುಗಳು ಇಕ್ಕಟ್ಟಾದುವು, ವಿರೋಧಿಗಳನ್ನು ತಡೆಯುವುದಕ್ಕಾಗಿ ಕಟ್ಟಿದ್ದ ಕೋಟೆ ಗಳು ತಮ್ಮ ವಿಪತ್ತಿಗೇ ಕಾರಣವಾದುವು. ತೇರು ಆನೆ ಕುದುರೆ ಮಂದಿ ಒಂಟಿ ಎತ್ತು ಹಸು ಮೊದಲಾದುವುಗಳೂ ಅಸಂಖ್ಯಾತ ರಾಕ್ಷಸರೂ ಬೆಂಕಿಯಲ್ಲಿ ಸುಟ್ಟು ಬೂದಿ ಯಾಗಿಹೋದರು. ಪಾಪಿಯಾದ ಈ ರಾವಣನು ಮಳೆಯಾದ ಶೂರ್ಪನಖಿಯ ದುರ್ಬೋಧೆಯನ್ನು ಕೇಳಿ ಮಹಾರಾಜನಾದ ರಾಮನ ಧರ್ಮಪತ್ನಿಯನ್ನು ತಂದು ನಮ್ಮನ್ನು ಈ ಪಾಡಿಗೆ ಗುರಿಮಾಡಿದನು. ತಾನಾದರೂ ಬದುಕುವನೇ ? ಅದೂ ಇಲ್ಲ, ಮಕ್ಕಳು ಮರಿಗಳೊಡನೆ ನಿರ್ಮಲವಾಗಿಹೋಗುವನು. ಲೋಕದಲ್ಲಿ ಪರ ನಾರಿಯರಿಗೆ ಆಶೆಪಟ್ಟವರು ಎಂದಿಗೂ ಬಾಳು ವುದಿಲ್ಲ, ಕ್ರೋರಾತ್ಕಳಾದ ಶೂರ್ಪ ನಖಿಯ: ಈ ನಗರವನ್ನು ತನ್ನ ಮುಖದಂತೆ ಅಮಂಗಲಕೆ ಗುರಿಮಾಡಿದಳು ಎಂದು ಆ ಪಟ್ಟಣದವರೆಲ್ಲಾ ಮೊರೆಯಿಡುತ್ತಿದ್ದರು. ಅನಂತರದಲ್ಲಿ ಧೀರನಾದ ಆಂಜನೇಯನು ಈ ರೀತಿಯಾಗಿ ಲಂಕಾನಗರವನ್ನೆಲ್ಲಾ ದಹಿಸಿ ಸರ್ವರಾಕ್ಷ ಸಪ್ರಜೆಯನ್ನೂ ಕಂಗೆಡಿಸಿ ಪ್ರನಃ ಸೀತೆಯ ಬಳಿಗೆ ಬಂದು ವೃತ್ತಾಂತವನ್ನೆಲ್ಲಾ ತಿಳಿಸಿ ಆಕೆಗೆ ಧೈರ್ಯವಚನವನ್ನು ಹೇಳಿ ಅಪ್ಪಣೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಒಂದೇ ಲಂಘನದಿಂದ ಸಮುದ್ರವನ್ನು ದಾಟಿ ಜಾಂಬವತಾದಿ ಕಪಿವೀರರಿರುವಲ್ಲಿಗೆ ಬಂದು ವೃದ್ಧನಾದ ಜಾಂಬವಂತನ ಪಾದಗಳಿಗೆರಗಲು; ಆಗ ಆತನು ಹನುಮಂತನನ್ನು ಅಪ್ಪಿಕೊಂಡುಎಲೈ ಬಾಲಕನೇ, ಸೌಖ್ಯದಿಂದ ಬಂದೆಯಾ ? ಅವನಿಜಾತೆಯನ್ನು ನೋಡಿದೆಯಾ ? ನೀನು ಹೋದಂದಿನಿಂದ ಈ ವರೆಗೂ ನಡೆದ ಸಂಗತಿಯನ್ನೆಲ್ಲಾ ಸಂಪೂರ್ಣವಾಗಿ ಹೇಳು ಎನ್ನಲು; ಹನುಮಂತನು ತಾನು ನಡಿಸಿದ ಕೃತ್ಯಗಳನ್ನೆಲ್ಲಾ ಕ್ರಮವಾಗಿ ವಿವರಿಸಿದನು. ಆಗ ಜಾಂಬವಂತನು ಕಪಿವೀರರೊಡನೆ ಆಂಜನೇಯನನ್ನು ಶ್ಲಾಘಿಸಿ ಅಲ್ಲಿಂದ ಹೊರಟು, ಸುಗ್ರೀವನಿದ್ದ ಮಧುವನಕ್ಕೆ ಬಂದು ಅವನಿಗೆ ಸಂಗತಿಯನ್ನೆಲ್ಲಾ ಸಾಂಗ ವಾಗಿ ತಿಳಿಸಿ ಯಥೇಚ್ಛವಾಗಿ ಮಧುಪಾನವನ್ನು ಮಾಡಿ ಆನಂದಿಸಿ ನೆಗೆಯುತ್ತ ಕುಣಿ ಯುತ್ತ ಕುಪ್ಪಳಿಸುತ್ತ ಕಿರುಚುತ್ತ ಆರ್ಭಟಿಸುತ್ತ ಶ್ರೀರಾಮನಿರುವ ಋಷ್ಯಮುಕಾ ದ್ರಿಗೆ ಬಂದನು. ಅನಂತರದಲ್ಲಿ ಶ್ರೀರಾಮನು ನಗೆಮೊಗಗಳಿಂದ ಕೂಡಿ ತನ್ನ ಬಳಿಗೆ ಬಂದ ಕಪಿವೀರರನ್ನು ನೋಡಿ-ಎಲೈ ಕಪಿನಾಯಕರೇ, ನೀವು ಹೋಗಿದ್ದ ಕಾರ್ಯವು ಜಯ ವಾಯಿತೇ ? ನೀವೆಲ್ಲರೂ ಕ್ಷೇಮದಿಂದ ಬಂದಿರಾ ? ಎಂದು ಕೇಳಲು; ಆಗ ಜಾಂಬ