ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾಹಾವತಾರದ ಕಥೆ 225 ಷ್ಟು ವನ್ನು ಕಂಡು ನಮಸ್ಕರಿಸಿ ಸ್ತೋತ್ರವನ್ನು ಮಾಡಿ-ಎಲೆ ಜಗನ್ನಾಥನೇ, ಸರ್ವ ಜಗದ್ರಕ್ಷಕನೇ, ದುಷ್ಟನಾದ ಹಿರಣ್ಯಾಕ್ಷನೆಂಬ ದೈತ್ಯನು ಭೂಮಿಯನ್ನು ತೆಗೆದು ಕೊಂಡು ಹೋಗಿ ರಸಾತಲದಲ್ಲಿ ಹಾಕಿರುವುದರಿಂದ ದೇವಯಜ್ಞ ಪಿತೃಯಜ್ಞ ಮೊದ ಲಾದುವುಗಳೆಲ್ಲಾ ನಡೆಯದೆ ಸಂಪೂರ್ಣವಾಗಿ ನಿಂತುಹೋಗಿರುವುದರಿಂದ ನಾವೆಲ್ಲರೂ ಆಹಾರಶೂನರಾಗಿ ಮತಪಾಯರಾಗಿದೆ ವೆ, ಮಹಾತ ನಾದ ನೀನು ಅನಾಥರಾದ ನಮ್ಮಲ್ಲಿ ಕರುಣೆಯನ್ನಿಟ್ಟು ಆ ದೈತ್ಯನನ್ನು ಕೊಂದು ಭೂಮಿಯನ್ನು ರಸಾತಲದಿಂದ ಮೇಲಕ್ಕೆತ್ತಿ ಯಥಾಪ್ರಕಾರವಾಗಿಟ್ಟು ನಮ್ಮನ್ನು ಕಾಪಾಡಬೇಕೆಂದು ಬಹುತರವಾಗಿ ಬೇಡಿಕೊಳ್ಳಲು ; ಆಗ ದಯಾದ್ರ್ರಹೃದಯನಾದ ವಿಷ್ಣು ವು-ಒಳ್ಳೆಯದೆಂದು ಹೇಳಿ ಅವರಿಗೆ ಅಭಯವನ್ನಿತ್ತು ಅವರೆಲ್ಲರನ್ನೂ ಅವರವರ ಲೋಕಗಳಿಗೆ ಕಳುಹಿಸಿದನು. ಹೀಗಿರುವಲ್ಲಿ ಒಂದು ದಿವಸ ಸತ್ಯಲೋಕದಲ್ಲಿ ಸರೋಜಸಂಭವನು-ಪುರುಷೋ ತಮನ್ನು ಭೂಮಿಯನ್ನು ರಸಾತಲದಿಂದ ಮೇಲಕ್ಕೆತ್ತಿ ಯಥಾಪ್ರಕಾರವಾಗಿ ನಿಲ್ಲಿಸಿ ಹವ್ಯಕನ್ಯಗಳು ನಿರ್ವಿಘ್ನತೆಯಿಂದ ನಡೆಯುವ ಹಾಗೆ ಎಂದಿಗೆ ಮಾಡುವನೋ ? ಎಂದು ಚಿಂತಿಸುತ್ತ ಆತನನ್ನು ಧ್ಯಾನಿಸುತ್ತಿರುವಲ್ಲಿ ಆತನ ಮೂಗಿನ ರಂಧ್ರದ ದೆಸೆ ಯಿಂದ ಅಂಗುಷ್ಠ ಮಾತ್ರ ಪ್ರಮಾಣವುಳ್ಳ ಒಂದು ವರಾಹವು ಸಿಡಿದು ಕೆಳಗೆ ಬಿದ್ದು ಒಡನೆ ಮುಗಿಲನ್ನು ಮುಟ್ಟುವ ಹಾಗೆ ರೌದ್ರಾಕಾರವಾಗಿ ಬೆಳೆದು ದಶದಿಕ್ಕುಗಳು ಒಡೆಯುವ ಹಾಗೆ ಗರ್ಜಿಸುತ್ತಿದ್ದಿತು. ಆ ಮಹಾ ವರಾಹಕ್ಕೆ ನಾಲ್ಕು ವೇದಗಳು ನಾಲ್ಕು ಕಾಲುಗಳಾದುವು. ಮಹಾವಾಸುಕಿಯು ಬಾಲವಾದನು. ಸ್ಮೃತಿ ಪುರಾಣ ಗಳೆರಡೂ ಎರಡು ಕಿವಿಗಳಾದುವು. ಆದಿತ್ಯಚಂದ್ರರು ಎರಡು ಕಣ್ಣುಗಳಾದರು. ದೇವಪಿತೃಯಜ್ಞಗಳು ಕೋರೆದಾಡೆಗಳಾದುವು. ಸಕಲಮಂತ್ರಗಳು ಸರ್ವಾ೦ಗಗಳಾ ಚುವು. ಇಂಥ ಅದ್ಭುತಾಕಾರಯುಕ್ತವಾದ ಮಹಾಸೂಕರವನ್ನು ನೋಡಿ ಸರೋಜ ಸಂಭವನು-ಸ್ವಾಮಾ, ನಿನ್ನ ಲೋಕಭೀಕರವಾದ ಮಹಾರ್ಭಟವನ್ನು ಸಹಿಸುವವರು ಯಾರು ? ಸರ್ವಶಕ್ತನಾದ ನೀನು ನಮ್ಮಲ್ಲಿ ಕೃಪೆಮಾಡಿ ಆ ಕೇಡಾಳಿಯಾದ ದೈತ್ಯ ನನ್ನು ಕೊಂದು ಭೂಮಿಯನ್ನು ತೆಗೆದುಕೊಂಡು ಬಂದು ಯಥಾರೀತಿಯಾಗಿಟ್ಟು ಲೋಕವನ್ನು ಉದ್ಧರಿಸಿ ಕಾಪಾಡು ಎಂದು ಭಯಭಕ್ತಿಯಿಂದ ಕೂಡಿ ಬೇಡಿಕೆ ಳ್ಳಲು ; ಕೂಡಲೆ ವರಾಹವು ಘುಡಿಘುಡಿಸುತ್ತ ದಾಡೆಯನ್ನು ಮಸೆದು ಎಡಬಲಗ ಳನ್ನು ನೋಡುತ್ತ ಮಗಿನ ರಂಧ್ರದಲ್ಲಿ ಬಿಸಿಯಾದ ಉಸಿರನ್ನು ಭಯಂಕರವಾಗಿ ಬಿಡುತ್ತ ಎರಡು ಕಣ್ಣುಗಳಿಂದ ಕೆಂಗಿಡಿಗಳನ್ನು ದುರಿಸುತ್ತ ಬಾಲವನ್ನು ಆಕಾಶಕ್ಕೆ ರೋಮಗಳನ್ನು ಕೆದರಿ ನಿಗುರಿಸಿಕೊಂಡು ಹೊರಟು ಅತಿರಭಸದಿಂದ ಪಾತಾಳವನ್ನು ಪ್ರವೇಶಿಸಿ ಅಲ್ಲಿ ಬಿದ್ದಿರುವ ಧರಣಿಯನ್ನು ತನ್ನ ಕೋರೆದಾಡೆಗಳಿಂದ ಮೇಲೆತ್ತಿ ಕೊಂಡು ಶೀಘ್ರದಿಂದ ತೆಗೆದು ಕೊಂಡು ಬರುತ್ತಿದ್ದಿತು. ಆಗ ಪಾತಾಳಲೋಕನಿವಾಸಿಗಳಾದ ಪ್ರಾಣಿಗಳೆಲ್ಲವೂ ಅಪೂರ್ವವಾದ ಈ ವರಾಹವನ್ನೂ ಅದರ ಅನ್ಯಾದೃಶವಾದ ಬಲ ವನ್ನೂ ನೋಡಿ ಭಯಾಶ್ಚರ್ಯಗಳ ಸಮುದ್ರಗಳಲ್ಲಿ ಮುಳುಗುತ್ತಿದ್ದುವು.

  • ಇತ್ತಲು ಮೊದಲೇ ಪ್ರಾಯದ ಕೊಬ್ಬಿನಿಂದ ಬಲಿಷ್ಠರಾದ ದೇವತೆಗಳನ್ನು ಜಯಿಸುವುದಕ್ಕೋಸ್ಕರ ಸುರಲೋಕವನ್ನು ಕುರಿತು ಹೊರಟಿದ್ದ ಹಿರಣ್ಯಾಕ್ಷನು

6,