ಪುಟ:ರಾಣಾ ರಾಜಾಸಿಂಹ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪o ರಣ ರಾಜಸಿಂಹ Anownhhhhhhhhhh. NAAAAAAAAAAAAAAAAAA ለለለላላላላላላለለላeላለ ለለለ AAAM [ಪ್ರಕರಣ ಬೇಗಮ್ಮ ರೂ ಸಂಗಡಲೆ ಇದರು, ದಿಲ್ಲಿಯ ರಂಗಮಹಲಿನಲ್ಲಿ ಅವರಿಗೆ ಬೇರೆಬೇರೆ ಸ್ಥಳಗಳನ್ನು ನೇಮಿರೆ ಕೊಟ್ಟಂತೆ ಇಲ್ಲಿಯ ವ್ಯವಸ್ಥೆಯಾ ಗಿತ್ತು. ಪ್ರಾತಃಕಾಲಕ್ಕೆ ಬಾದಶಹನ ಸೇನೆಯು ಮುಂದಕ್ಕೆ ರಟಿತು ಎಲ್ಲ ಮುಂದೆ ಆಯುಧಸಹಿತರಾದ ಕಾಮಾಟಿಮನುಷ್ಯರದೊಂದು ಗುಂಪು ಇತ್ತು ಅವರಲ್ಲಿ ಗುದ್ದಿ, ಸಲಕಿ, ಕೊಹ್ಲಿ, ಕೊಯಿತ, ಇವೇ ಮೊದಲಾದ ಎಲ್ಲ ಆಯುಧಗಳ ಸಂಗ್ರಹವಿತ್ತು, ಅವರು ತಮ್ಮ ಆಯು ಧಗಳಿಂದ ಗಿಡಗಳನ್ನು ಕಡಿದು ದೂರ ಬಿಸಾಡುತ್ತಿದ್ದರು ಹಳ್ಳಗಳನ್ನು ಮಣ್ಣಿನಿಂದ ಮುಚ್ಚುತ್ತಿದ್ದರು, ಹಿಂದೆ ಬರುವ ವಿಸ್ತಾರವಾದ ಸೇನೆಗೆ ಸಾಕಷ್ಟೆ ಮಾರ್ಗವನ್ನು ಸಜ್ಜುಗೊಳಿಸುವದು ಎಂಧ ಕರಿಣ ಕೆಲ ಸವು ! ಆ ದೊಡ್ಡದಾಯಿಂದ ಮೊದಲು ಗಾಡಿಗಳ ಮೇಲೆ ಹೇರಿದ್ದ ತೋಪುಗಳ ಸಾಲು ನಡೆದವು, ಅದರೊಡನೆ ತೂಫಿನ ಅಮಲದಾರರ ಗೋಲಂದಾಜರು, ನಡೆದಿದ್ದರು ಅವರ ಹಿಂದೆ ಬಾದಶಹನ ಖಜಾನೆಯ ಸಂರಕ್ಷಕರಗುಂಪು ನಡೆದಿತ್ತು. ಯಾಕಂದರೆ ಔರಂಗಜೇಬನಿಗೆ ಯಾರ ಮೇಲೂ ವಿಶ್ವಾಸವಿದ್ದಿಲ್ಲ, ಆದ್ದರಿಂದ ಖಜಾನೆಯನ್ನು ತನ್ನ ಸಂಗಡಲೆ ತರುತ್ತಿದ್ದನು. ಆ ಖಜಾನೆಯನ್ನು ಹೊತ್ತ ಆನೆಗಳ ಸಾಲುಗಳ ಹಿಂದೆ ಬಾದಶಹನ ದಸ್ತರಖಾನೆಯು, ಅದರಹಿಂದೆ ನದಿಯ ನೀರನ್ನು ಹೊತ್ತು ಕೊಂಡಿರುವ ಒಂಟೆಗಳ ಸಾಲು, ನೀರಿನ ಹಿಂದೆ ಅನ್ನಸಾಮಗ್ರಿಯು ಅದ ರೊಡನೆ ಸಾವಿರಾರು ಅಡಿಗೆಯವರು ಅವರುಗಳ ಹಿಂದ ಬಾದಶಹನ ಅರಿವಗಳು, ಅವುಗಳ ಹಿಂದೆ ಮೊಗಲರ ಕುದುರೆಸವಾರರ ದಂಡು, ಹೀಗೆ ನಡೆದ ಆ ಫೌಜು ನೋಡತಕ್ಕಂಧಾದ್ದಿತ್ತು. ಈ ಭಾಗದ ಹಿಂದೆ ಸಾವಿರಾರು ಒಂಟಿಗಳಮೇಲೆ ಸುಗಂಧದ್ರವ್ಯ ವನ್ನು ಹೇರಿದ್ದರು. ಇದರ ಹಿಂದೆ ಬಾದಶಹನ ಶರೀರಸಂರಕ್ಷಕರಗುಂಪು ಎರಡುಸಾಲಾಗಿ ನಡೆದಿತ್ತು, ಆದರೆ ಮಧ್ಯದಲ್ಲಿ ರತ್ನ ಖಚಿತವಾದ ಆಲಂ ಉರಗಳಿಂದ ಇ೦ಗರಿಸಿದ ಕುದುರೆಯಮೇಲೆ ಬಾದಶಹನು ಕುಳಿತಿದ್ದನು.