ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 127 ಲದ ವರೆಗೂ ಕಾದಾಡಿದರು. ಆ ಮೇಲೆ ಕಪಿನಾಯಕನು ರಾಕ್ಷಸ ವೀರರನ್ನು ಹಿಡಿ ದೆತ್ತಿ ಕುಕ್ಕುತ್ತ ಚೆನ್ನಾಗಿ ತದುಕಿ ಕೊಂದು ಕಾಲನಪುರಿಗೋಡಿಸಿದನು. ಆಮೇಲೆ ಅಧರ್ಮವೆಂಬ ರಥದ ಗಾಲಿಯು ಮುರಿದು ಬಿದ್ದಂತೆ ಅವನೊಡನೆ ಬಂದಿದ್ದ ರಾಕ್ಷಸ ಚತುರ್ಬಲವು ಕಣ್ಣಿಟ್ಟು ನಿಂತಿತು. ನೀಲನ ಲೀಲೆಯನ್ನು ಬಣ್ಣಿಪರಾರು ? ಗಿರಿತರು ಗಳನ್ನು ತರುವುದರಿಂದ ಸಾವಕಾಶವಾಗುವುದೆಂದು ರಥದಿಂದ ರಥವನ್ನೂ ಆನೆಯಿಂದ ಆನೆಯನ್ನೂ ರಕ್ಕಸರಿಂದ ರಕ್ಕಸರನ್ನೂ ಬಡಿದೊರಗಿಸಿ ಆ ರಣರಂಗದಲ್ಲಿ ಸಂಹಾರರು ನಂತೆ ಆರ್ಭಟಿಸುತ್ತ ವಿರೋಧಿಗಳನ್ನು ಹುಡುಕಿಕೊಂಡು ತಿರುಗಿದನು.

  • ಅನಂತರದಲ್ಲಿ ರಾವಣನು ಮಹಾ ಕೋಪಸಂತಾಪವಿಷ್ಟನಾಗಿ ದೇವಾಂತಕ ನರಾಂತಕ ತ್ರಿಶಿರ ಅತಿಕಾಯರೆಂಬವರೇ ಮೊದಲಾದ ತನ್ನ ಮಕ್ಕಳೊಡನೆಯ ಶೌರ್ಯಧುರಂಧರರಾದ ಅನೇಕ ಸೇನಾಪತಿಗಳೊಡನೆಯೂ ಬಹು ಭಯಂಕರಾಕಾರದ ರರಾದ ಕುಂಭನಿಕುಂಭರೆಂಬ ಕುಂಭಕರ್ಣನ ಪುತ್ರರೊಡನೆಯೂ ಕೂಡಿ ರಥಾರೂಢ ನಾಗಿ ಹೊರಟು ಯುದ್ಧ ಭೂಮಿಗೆ ಬರಲು ಆಗ ರಾಮಲಕ್ಷ್ಮಣರು ಸುಗ್ರೀವಾ೦ಗದ ರೊಡನೆಯ ನಳನೀಲಾದ್ಯನೇಕ ವಾನರ ಸೇನಾಪತಿಗಳೊಡನೆಯ ಸಮಸ್ಯೆ ಕಪಿಬಲ ದೊಡನೆಯೂ ಕೂಡಿ ಬಂದು ಯುದ್ದಕ್ಕೆ ಆರಂಭಿಸಿ ರಾವಣನೊಡನೆ ಬಂದಿದ್ದ ಸರ್ವ ರಾಕ್ಷಸ ಬಲವನ್ನೂ ಸಂಹರಿಸಿ ರಾಮನು ರಾವಣನೆದುರಿಗೆ ಬಂದು ಅವನು ಪ್ರಯೋ ಗಿಸಿದ ಬಾಣಗಳನ್ನೆಲ್ಲಾ ಇಕ್ಕಡಿಗೆಯು ಅವನ ರಥವನ್ನು ಕಡಿದು ಕವಚ ಕಿರೀಟ ಬಿಟ್ಟು ಇವುಗಳನ್ನು ಕತ್ತರಿಸಿ ಬಲಹೀನನಾಗಿರುವ ರಾವಣನನ್ನು ನೋಡಿ-ಎಲೆ ಚೋರನೇ ! ಈವರೆಗೂ ನೀನು ನಮ್ಮೊಡನೆ ಹೆಣಗಿ ಬಹಳವಾಗಿ ನೊಂದಿರುವಿ. ಅದು ಕಾರಣ ಈಗ ಹಿಂದಿರುಗಿ ಲಂಕೆಗೆ ಹೋಗು. ಆಯಾಸ ವಿಶ್ರಾಂತಿಯನ್ನು ಮಾಡಿ ಕೊಂಡು ಭೂಲೋಕದ ಆಶೆಯನ್ನೆಲ್ಲಾ ಮುಗಿಸಿಕೊಂಡು ಬರುವವನಾಗು. ಈಗ ನಿನ್ನನ್ನು ಕೊಲ್ಲುವುದಿಲ್ಲ. ಹೆದರಬೇಡ ಎಂದು ಹೇಳಲು ಆಗ ರಾವಣನು ಘೋರ ಕೋಪಕ೦ಪಿತಾಧರನಾದರೂ ಕಾರ್ಯಶೇಷವಿರುವುದೆಂದು ಹಿಂದಿರುಗಿ ಲಂಕೆಗೆ ಬಂದು ತನ್ನ ಮನಸ್ಸಿನಲ್ಲಿ ನನ್ನ ತಮ್ಮನಾದ ಕುಂಭಕರ್ಣನನ್ನು ಎಬ್ಬಿಸಿ ಈ ಅಲ್ಪ ಮನುಜ ರಾದ ರಾಮಲಕ್ಷ್ಮಣರಿಬ್ಬರನ್ನೂ ತುಳಿಸಿ ಉಳಿದ ಮರ್ಕಟಸಂಕುಲವನ್ನು ಕೊಲ್ಲಿಸಿ ಭೂತ ಪ್ರೇತಾದಿಗಳಿಗೆ ಹಬ್ಬವನ್ನು ಮಾಡಿಸುವೆನೆಂದು ಯೋಚಿಸಿ ಕೂಡಲೆ ಶೂರರಾದ ರಕ್ಕಸರನ್ನು ಕರಿಸಿ ನಿದ್ರಿಸುತ್ತಿರುವ ಕುಂಭಕರ್ಣನನ್ನು ತ್ವರಿತವಾಗಿ ಎಬ್ಬಿಸತಕ್ಕು ದೆಂದು ಅಪ್ಪಣೆಯನ್ನಿತ್ತನು.

ಆಗ ಅನೇಕ ಸಹಸ್ರ ಜನ ರಾಕ್ಷಸರನ್ನು ಕೂಡಿಸಿಕೊಂಡು ಮಹಾ ಪ್ರಧಾನಿಗಳು ಕುಂಭಕರ್ಣನ ನಿದ್ರಾಲಯಕ್ಕೆ ಬಂದು ಮುರಜ ಡಿಂಡಿಮ ಪಟಹ ಕಂಸಲೆ ಕರಡೆ ಕೊಂಬು ರಣಮೌರಿ ಭೇರಿ ಕಹಳೆ ಇವು ಮೊದಲಾದ ನಾನಾ ಮಹಾ ವಾದ್ಯಗಳನ್ನು ಏಕಕಾಲದಲ್ಲಿ ಬಾರಿಸಲು ಆ ಶಬ್ದದಿಂದ ವಿಧ್ಯಂಡಮಂಡಲವು ಬೆಚ್ಚಿತು. ಕಡಲುಗಳು ಜರಿದುವು. ದಿಗ್ಗಜಗಳ ಕಿವಿಗಳು ಕಿವುಡಾದವು. ಇಷ್ಟಾದರೂ ಆ ಕುಂಭಕರ್ಣನಿಗೆ ಎಚ್ಚರ ತೋರದಿರಲು ಕೆಲವರು ಉಕ್ಕಿನ ದಡಿಗಳನ್ನು ತೆಗೆದುಕೊಂಡು ಅವುಗಳಿಂದ