ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಕಥಾಸಂಗ್ರಹ-೪ ನೆಯ ಭಾಗ ಹೋಗಲು ಆಗ ರಾಕ್ಷಸರು ಎಲೋ ! ಕಪಿಯು ಭಯದಿಂದೋಡುತ್ತಿದೆ. ಬೇಗ ಬನ್ನಿರಿ ಹಿಡಿಯಿರಿ ಬಡಿಯಿರಿ ಕಡಿಯಿರಿ ಎನ್ನುತ್ತ ಮುತ್ತಿ ಕೊಳ್ಳುವುದಕ್ಕೆ ಬರಲು ಹನುಮಂತನು ಹಿಂದಿರುಗಿ ಬಾಹುವನ್ನು ಅಪ್ಪಳಿಸಿ ತೋರಣಸ್ತಂಭಗಳನ್ನು ಕಿತ್ತು ಕೊಂಡು ಸಂಹಾರರುದ್ರನಿಗೆಂಟುಮಡಿಯಾಗಿ ನಿಮೇಷಮಾತ್ರದಲ್ಲಿ ಎಂಭತ್ತು ಸಾವಿರ ಮಂದಿ ರಕ್ಷಸರನ್ನು ಬಡಿದುರುಳಸಿ ಭೂದೇವತೆಗೆ ಬಲಿಗೊಟು ತೇರಾನೆಕುದುರೆ ಕಾಲಾಳುಗಳನ್ನು ನಿರ್ನಾಮಮಾಡಿ ಆರ್ಭಟಿಸಲು ಆಗ ಜಂಬುವಾಲಿಯು ರೋವಾ ವೇಶವುಳ್ಳವನಾಗಿ ಪ್ರಳಯಕಾಲದ ಭರಸಿಡಿಲುದೃವಿಸಿತೋ ಎಂಬಹಾಗೆ ಬೊಬ್ಬಿ ರಿದು ಕು೦ತದಿಂದ ಆಂಜನೇಯನನ್ನು ಹೊಡೆಯಲು ಆ ಹನುಮಂತನು ಹರಿದು ಮೈಮರೆತು ಪರ್ವತವು ಬಿದ್ದಂತೆ ಬಿದ್ದು ಎರಡು ಗಳಿಗೆಗಳ ಮೇಲೆ ಎದ್ದು ಒಂದು ಹೆಮ್ಮರದಿಂದ ಜಂಬುವಾಲಿಯನ್ನು ಹೊಡೆಯಲು ಅವನಾಸೆಟ್ಟನ್ನು ತಪ್ಪಿಸಿಕೊಂಡು ಆಂಜನೇಯನನ್ನು ಶೂಲದಿಂದ ತಿವಿಯಲು ಹನುಮಂತನು ಅತಿ ಕೋಪಾಕಾಂತನಾಗಿ, ಆ ದುಷ್ಟ ರಾಕ್ಷಸನ ಮುಂದಲೆಯನ್ನು ಹಿಡಿದು ಮೇಲೆತ್ತಿ ನೆಲಕ್ಕೆ ಅಪ್ಪಳಿಸಿ ಕಾಲಲ್ಲಿ ಮೆಟ್ಟಿ ಕೊಂಡು ಜೀರ್ಣವಸ್ತ್ರವನ್ನು ಸೀಳಿದಂತೆ ಸೀಳಿ ಬಿಸುಟನು. ಅನಂತರದಲ್ಲಿ ಕೋಪತಾಪಿತನಾದ ಅಕ್ಷಕುಮಾರನು ಶರವರ್ಷಗಳಿಂದ ಆಂಜನೇಯನನ್ನು ಮುಚ್ಚಿ ಸಲು ಹನುಮಂತನು ಹೆದರದೆ ತನ್ನ ಮುಷ್ಟಿಯಿಂದ ಅಕ್ಷ ಕುಮಾರನ ಮಸ್ತಕದ ಮೇಲೆ ಹೊಡೆಯಲು ಆಗ ಅವನ ತಲೆಯೊಡೆದು ಮೂರ್ಛ ಯುಂಟಾಯಿತು. ರಾವಣನು ಟ್ರೈಲೋಕ್ಯ ಭೀಕರನೆಂಬ ಬಿರುದುಳ್ಳವನಲ್ಲವೇ ? ಅಂಥ ವನ ಮಗನು ಸಾಮಾನ್ಯನೇ ? ಆ ಅಕ್ಷ ಕುಮಾರನು ತಿರಿಗೆದ್ದು ಆರ್ಭಟಿಸಿ ಗದೆಯನ್ನು ತೆಗೆದುಕೊಂಡು ರಾಮದೂತನನ್ನು ಹೊಡೆಯಲು ಆಂಜನೇಯನು ಸಿಡಿದು ಬಿದ್ದೂ ರಲಿ ಆರೆಗಳಿಗೆಗಿಂತಲೂ ಸ್ವಲ್ಪ ಹೆಚ್ಚಾಗಿ ಮೂರ್ಛಹೊಂದಲು ಅಕ್ಷ ಕುಮಾರನು ಎಲೋ ಕಪಿಯು ಬಿದ್ದಿತು. ಬಲೆಯನ್ನು ಹಾಕಿರಿ ಎನಲು ಕೂಡಲೆ ಮಾರುತಿಯು ಆರ್ಭಟಿಸಿಕೊಂಡದ್ದು ಅಕ್ಷಕುಮಾರಕನ ರಥವನ್ನು ತೆಗೆದು ಕೊಂಡು ಗರಗರನೆ ತಿರು ಗಿಸಿ ರವಿಮಂಡಲಕ್ಕೆಸೆಯಲು ಅಕ್ಕ ಕುಮಾರನು ಸಮುದ್ರವನ್ನು ಲಂಘಿಸಿ ಬಂದು ಪರಿಘದಿಂದ ಅನಿಲಜನನ್ನು ಹೊಡೆಯಲು ವೀರಹನುಮಂತನು ತೋರಣಸ್ತ೦ಭದಿಂದ ಹೊಡೆದು ಅಕ್ಷ ಕುಮಾರನ ಶಿರಸ್ಸನ್ನಿಳುಹಿ ಅದನ್ನು ರಾವಣನ ಮುಂದೆ ಬೀಳುವ ಹಾಗೆ ಎಸೆದನು. . ಆಗ ರಾಕ್ಷಸೇಶ್ವರನು ತನ್ನ ಮುದ್ದು ಮಗನ ತಲೆಯನ್ನು ಕಂಡು ಮನಸ್ಸಿನಲ್ಲಿ ಮಹಾತಂಕಯುಕ್ತನಾಗಿ ತನ್ನ ಮಗನಾಗಿಯೂ ಅಪ್ರತಿಮ ವೀರನಾಗಿಯ ಇರುವ ಇಂದ್ರಜಿತನ್ನು ನೋಡಿ-ಇದು ಲೋಕದಲ್ಲಿರುವ ಕಪಿಗಳಂತಲ್ಲ, ಏನೋ ಆಶ್ಚರ್ಯ ವಾಗಿ ತೋರುತ್ತದೆ. ಈ ಕೂಡಲೆ ನೀನು ವೀರಸೇನೆಯೊಡನೆ ಹೋಗಿ ಆ ಕಪಿಯನು ಕೊಲ್ಲದೆ ಪ್ರಾಣಸಹಿತವಾಗಿ ಹಿಡಿದು ನನ್ನ ಬಳಿಗೆ ತೆಗೆದುಕೊಂಡು ಬರುವವನಾಗು ಎಂದು ಹೇಳಿ ಕಳುಹಿಸಲು ಆತನು ಚತುರಿಂಗಬಲಪರಿವೃತನಾಗಿ ಹೊರಟುಬಂದು ಅಶೋಕವನದ ಹೆಬ್ಬಾಗಿಲ ಮೇಲೆ ಅಣಕಿಸುತ್ತ ಕೂತಿರುವ ಆಂಜನೆಯ ಮಗನನ್ನು