ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 261 ಹುಟ್ಟಿದ ಪರಶುರಾಮನಾಮಕನಾದ ನಾನು ಬಂದಿದ್ದೇನೆ. ನಿನಗೆ ಪುತ್ರ ಮಿತ್ರ ಕಳತ್ರಾ ದಿಗಳೊಡನೆ ಕೂಡಿ ಇನ್ನೂ ಭೂಲೋಕದಲ್ಲಿ ಬಾಳಬೇಕೆಂಬ ಅಪೇಕ್ಷೆಯಿದ್ದರೆ ಬೇಗದಿಂದ ನಮ್ಮ ಧೇನುವನ್ನು ತೆಗೆದು ಕೊಂಡು ಬಂದು ಒಪ್ಪಿಸಿ ಶರಣಾಗತನಾದರೆ ಮನ್ನಿಸಿಬಿಡುವೆನು. ಅದು ನಿನ್ನ ಮನಸ್ಸಿಗೆ ಸರಿಬಾರದೆ ಸಾಯುವುದಕ್ಕೆ ಆಶೆಯಿದ್ದರೆ ನಿನ್ನ ಚತುರಂಗಬಲದೊಡನೆ ಕೂಡಿ ನಮ್ಮೊಡನೆ ಯುದ್ಧಕ್ಕೆ ಬರಬೇಕು ಎಂಬುದೇ ಎಂದು ಹೇಳಿ ಕಳುಹಿಸಲು ಅವರು ಶೀಘ್ರವಾಗಿ ಕಾರ್ತವೀರ್ಯಾರ್ಜುನನ ಬಳಿಗೆ ಬಂದು ಅವನೊಡನೆ ಪರಶುರಾಮನು ಹೇಳಿದ ಮಾತುಗಳಲ್ಲಿ ಸ್ವಲ್ಪವಾದರೂ ಹೆಚ್ಚು ಕಡಮೆ ಯಾಗದಂತೆ ಹೇಳಿದರು. ಆ ಮಾತುಗಳನ್ನು ಕೇಳಿ ಕಾರ್ತವೀರ್ಯಾರ್ಜುನನು ನಸುನಕ್ಕು-ಅಹಹ ! ತಿಥಿಕಾಲಗಳಲ್ಲಿ ಅಂದವಾಗಿ ಕುಳಿತುಕೊಂಡು ಪರಾನ್ನವನ್ನು ಮಿತಿಮೀರಿ ತಿಂದು ಹೊಟ್ಟೆ ಹೊರೆಯುವ ಹಾರವರಿಗೆ ಪರಮತೇಜಸ್ವಿಗಳಾಗಿ ಚಕ್ರವರ್ತಿಗಳಾದ ನಮ್ಮಂಥ ಕ್ಷತ್ರಿಯೋತ್ತಮರೊಡನೆ ಸೆಣಸುವ ಶಕ್ತಿಯುಂಟಾದುದಲ್ಲಾ ! ಇದೇನೊ ಕಾಲ ಗತಿಯೇ ಸರಿ. ಈ ದುಷನೂ ಅವಿವೇಕಿಯ ಆದ ಮುನಿವಟುವಿನ ಕೆಟ್ಟ ಮಾತುಗ ಳಿಂದ ಕೋಪವುಳ್ಳವನಾಗಿ ನಾನು ಯುದ್ದ ಹೋದರೆ ಆ ಯುದ್ಧದಲ್ಲಿ ಮಹಾ ಕೊಪಪರವಶನಾದ ನನ್ನಿ೦ದ ಅವನು ಹತನಾದರೆ ನನಗೆ ಬ್ರಹ್ಮ ಹತ್ಯೆಯು ಸಂಘ ಟಿಸುವುದು. ಅದಲ್ಲದೆ ಬ್ರಾಹ್ಮಣನ ಪದಾರ್ಥವು ನಮಗೇಕೆ ? ಆ ಧೇನುವನ್ನು ಹಿಂದಕ್ಕೆ ಕೊಟ್ಟು ಬಿಟ್ಟರೆ ಚಕ್ರವರ್ತಿಯಾದ ಕಾರ್ತವೀರ್ಯಾರ್ಜುನನು ಬಾಹಣವ ಟುವಿನೊಡನೆ ಯುದ್ಧ ಮಾಡುವುದಕ್ಕೆ ಕೈಲಾಗದೆ ಹೆದರಿ ಹಿಡಿದು ತಂದ ಧೇನುವನ್ನು ತಿರಿಗಿ ಅವನಿಗೆ ಕೊಟ್ಟು ಬಿಟ್ಟನು ಎಂದು ಲೋಕದಲ್ಲಿ ಅಪಕೀರ್ತಿಯುಂಟಾಗುವುದು. ಈ ಅಸಂಗತವಾದ ಕಾರ್ಯಕ್ಕೆ ಏನು ಮಾಡಬೇಕು ಎಂದು ಒಂದು ಗಳಿಗೆಯ ವರೆಗೂ ಯೋಚಿಸಿ ಆ ಹುಡುಗನನ್ನು ಕೊಂದುಹಾಕದೆ ಅವನ ಅವಿವೇಕ ಜನವಾದ ಕೊಬ್ಬನ್ನು ಮುರಿದು ಅವನನ್ನು ಹಿಡಿದುತಂದು ಸೆರೆಯಲ್ಲಿಟ್ಟು ಬಿಡಬೇಕು. ತರು ವಾಯ ಅವನ ತಂದೆಯಾದ ಜಮದಗ್ನಿಯು ಬಂದು ಬೇಡಿಕೊಂಡರೆ ಬಿಟ್ಟು ಬಿಡೋಣ ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ತನ್ನ ದಳಪತಿಗಳನ್ನು ಕರೆದು ನೀವು ನಿಮ್ಮ ಸೇನೆಗಳೊಡನೆ ಕೂಡಿ ಆ ಮುನಿಪುತ್ರನ ಬಳಿಗೆ ಹೋಗಿ ಅವನೊಡನೆ ಜಗಳವಾಡಿ ಅವ ನನ್ನು ಕೈಸೆರೆಯಾಗಿ ಹಿಡಿದು ಕೊಂಡು ಬನ್ನಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. ಅವರು ಕೂಡಲೆ ಚತುರಂಗಬಲಸಮೇತರಾಗಿ ಬಂದು ಪರಶುರಾಮನನ್ನು ಮುತ್ತಿಕೊಳ್ಳಲು ಆಗ ಆತನು ಮಹೋಗ್ರಕೋಪಕಷಾ ಯಿತಾಕ್ಷನಾಗಿ ಬಂದ ಶತ್ರು ಸೇನೆಯಲ್ಲಿ ಹಿಂದಿರುಗಿ ಹೋಗಿ ಸುದ್ದಿಯನ್ನು ಹೇಳುವುದಕ್ಕೆ ಒಬ್ಬನಾದರೂ ಉಳಿಯದಂತೆ ಎಲ್ಲರನ್ನೂ ತನ್ನ ಕೈ ಕೊಡಲಿಯಿಂದ ಕಡಿದು ಮಲಗಿಸಿದನು. ಕಾರ್ತವೀರ್ಯಾರ್ಜುನನು ಆ ಸುದ್ದಿಯನ್ನು ಕೇಳಿ ಪ್ರಳಯಾಗ್ನಿಗೆ ಸಮಾನವಾದ ಕೋಪವುಳ್ಳವನಾಗಿ ಸಮಸ್ಕಾಯುಧಗಳನ್ನೂ ಧರಿಸಿ ಬಂದು ಪರಶುರಾಮನೊಡನೆ ಯುದ್ದಕ್ಕೆ ನಿಂತು ಅಹೋರಾತ್ರಿಗಳಲ್ಲೂ ಎಡೆಬಿಡದೆ ಇಪ್ಪತ್ತೇಳು ದಿನಗಳ ವರೆಗೂ