ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಕಥಾಸಂಗ್ರಹ-೪ ನೆಯ ಭಾಗ ಶೈತ್ಯೋಪಚಾರಗಳನ್ನು ಮಾಡಿ ಎಬ್ಬಿಸಿ ಅಸ್ಥಿರವಾದ ಭೌತಿಕ ವಸ್ತುಗಳಲ್ಲಿ ಮಮತೆ ಯನ್ನು ಸಂಪಾದಿಸಿಕೊಳ್ಳುವುದರಿಂದುಂಟಾಗುವ ಹಾನಿಯ ವಿಷಯವಾಗಿ ಬೋಧಿಸಿ ಸಮಾಧಾನಪಡಿಸಿ ಅಲ್ಲಿಂದ ಸರ್ವರೂ ಹೊರಟು ಶ್ರೀರಾಮನ ಬಳಿಗೆ ಬಂದು ವಿದ್ಯಮಾ ನವನ್ನೆಲ್ಲಾ ತಿಳಿಸಿದರು. ಆಗ ಶ್ರೀರಾಮನು ಸಂತುಷ್ಟಾ೦ತರ೦ಗನಾಗಿ ಲಕ್ಷ್ಮಣನನ್ನು ಆಲಿಂಗಿಸಿ ಮುದ್ದಿಸಿ ವಿಭೀಷಣನನ್ನೂ ಕಪಿವೀರರನ್ನೂ ವಿಶೇಷವಾಗಿ ಸನ್ಮಾನಿಸಿದನು. 9, THE BATTLE OF LANKA-DEATH OF RAVANA, ೯. ರಾವಣನ ಮರಣವು. ಇತ್ತ ಲ೦ಕಾ ರಾಜಧಾನಿಯಲ್ಲಿ ರಾವಣನು ತನ್ನ ಪ್ರೇಮಪುತ್ರನಾದ ಇಂದ್ರ ಜಿನ ದಾರುಣವಾದ ಮರಣವಾರ್ತೆಯನ್ನು ಕೇಳಿ ತತ್‌ಕ್ಷಣದಲ್ಲೇ ಎದೆಯಲ್ಲಿ ನೆಟ್ಟ ಅಗು ಬೆನ್ನಿನಲ್ಲಿ ಹೊರಟಂತೆಯ ಕೆಂಪಗೆ ಕಾಯ್ದುಕಿನ ಶಲಾಕೆಗಳಿಂದ ಕಿವಿಯಲ್ಲಿರಿ ಯಲ್ಪಟ್ಟಂತೆಯೂ ಆಗಿ-ಹಾ ! ಯುವರಾಜರತ್ನ ವೇ ಎಂದು ಕಳವಳಿಸಿ ನೆಲದಲ್ಲಿ ಬಿದ್ದು ಮೂರ್ಛಹೊಂದಿದನು. ಆಮೇಲೆ ಪುಜನರು ಮಾಡಿದ ಶೈ ತೊಪಚಾರಗ ಳಿಂದ ಚೇತರಿಸಿಕೊಂಡು ಮೆಲ್ಲನೆದ್ದು ಕುಳಿತು-ಓ ಮಗನೇ ! ನಿನ್ನಿಂದ ಸುರನಗರವು ನನಗೆ ಸುಲಭವಾಗಿ ಕೈ ಸೇರಿತು. ದೇವತೆಗಳೆಲ್ಲಾ ಸೇವಕರಾದರು. ನೀನು ಬಾಲ್ಯ ದಲ್ಲೇ ಇಂದ್ರಾದ್ಯಾದಿತೇಯರ ಗಂಡನೆಂಬ ಅಸದೃಶವಾದ ಬಿರುದನ್ನು ಸಂಪಾದಿಸಿದಿ! ದುರ್ನಿವಾರ್ಯವಾದ ನಿನ್ನ ಭುಜವಿಕ್ರಮಾತಿಶಯದಿಂದ ನನ್ನ ಕೀರ್ತಿ ಪ್ರತಾಪಗಳ ಹೊಗ ಳಿಕೆಯೆಂಬ ಲತೆಯು ನಿರರ್ಗಳವಾಗಿ ಬೆಳೆದು ಮೂರು ಲೋಕಗಳಲ್ಲೂ ಹರಹಿಕೊ೦ ಡಿತು. ನಿನ್ನ ವಿಕ್ರಮಾಗ್ನಿ ತಪ್ತರಾದ ಮುನಿಜನಗಳು ಬಂದು ಭಯಭಕ್ತಿಯಿಂದ ನನ್ನನ್ನು ಪೂಜಿಸುತ್ತಿದ್ದರು. ಅರಿರಾಜರೆಲ್ಲರೂ ಭಯಭರಿತ ಭಕ್ತಿಯುಕ್ತರಾಗಿ ಅಹೋ ರಾತ್ರಿಗಳಲ್ಲೂ ನನ್ನ ಯಶಃ ಪ್ರತಾಪಗಳನ್ನು ಹೊಗಳಿ ನನ್ನನ್ನು ಮೆಚ್ಚಿಸುತ್ತಿದ್ದರು. ಹಾ ! ಕುಮಾರ ಕಂಠೀರವನೇ ! ನೀನು ಮಡಿದುದರಿಂದ ನನ್ನ ವಂಶವೃಕ್ಷದ ಬೇರು ಕೀಳಲ್ಪಟ್ಟಂತಾಯಿತು. ಲಂಕಾ ರಾಜ್ಯಲಕ್ಷ್ಮಿಯು ತಲೆಯಿಲ್ಲದ ಮುಂಡದಂತಾದಳು. ಲಂಕಾ ರಾಜಧಾನಿಯು ವಿಷವಿಲ್ಲದ ಘಟಸರ್ಪದಂತೆ ಅರಿತಿರಸ್ಕಾರಕ್ಕೆ ಗುರಿಯಾ ಯಿತು. ಅಸುರಕುಲ ವಿರೋಧಿಗಳಾದ ದೇವತೆಗಳ ಹರ್ಷಲತೆಯು ಬೆಳೆಯುವ ಕಾಲವು ಕಾಲಿಟ್ಟಿತು. ನೀನಿಲ್ಲದ ಮೇಲೆ ನನಗೆ ಜಯವೂ ಉಲ್ಲಾಸವೂ ಎತ್ತಣಿಂದ ಬರುವುವು ? ನನಗಿರುವ ಆಧಿಪತ್ಯವೂ ಅತುಲಸಂಪತ್ತೂ ನನಗೇ ವಿರೋಧವಾಗಿ ದುಷ್ಟ ಲಗಳನ್ನು ಕೊಡುವ ವಿಷಮ ಕಾಲವು ಬಂದೊದಗಿತು. ಬಲಹೀನನಾದ ನನಗೆ ಈ ಸಿರಿಯೇಕೆ ? ಇನ್ನಿಲೋಕತ್ರಯದ ಅರಸುತನದ ದಂದುಗವೇಕೆ ? ಎಲೈ ತಂದೆಯೇ ! ಇಂದ್ರಜಿತೇ ! ನೀನಿಲ್ಲದ ಮೇಲೆ ಈ ನನ್ನ ಪ್ರಾಣಗಳಿಂದ ಪ್ರಯೋಜನವೇನು ? ಬಂದು ಮಾತಾಡ್ಯ ಮಗನೇ ! ಶೂರನಾದ ನಿನ್ನನ್ನು ಕಳೆದು ಕೊಂಡು ೬ನನಾದ ನನ್ನ ಪರಾಕ್ರಮವು