ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 257 ದುಕೋ ಎಂದು ಹೇಳಲು ತಾಯಿಯು ಪುತ್ರಿಯ ಮೇಲಣ ವ್ಯಾಮೋಹದಿಂದ ಹಾಗೇ ಆಗಲಿ ಎಂದು ಹೇಳಿ ಆ ಪಾತ್ರೆಯನ್ನು ಅವಳಿಗೆ ಕೊಟ್ಟು ಬಿಟ್ಟಳು. ಆ ಮೇಲೆ ಇಬ್ಬರೂ ಆ ಉದಕವನ್ನು ಕುಡಿದರು. ಅನಂತರದಲ್ಲಿ ಆ ಮುನಿಪತಿಯ ಮಂತ್ರ ದಕಪ್ರಭಾವದಿಂದ ಅವರಿಬ್ಬರೂ ದಿವ್ಯ ತೇಜಃಪುಂಜರಂಜಿತರಾದ ಗಂಡುಮಕ್ಕಳುಗಳನ್ನು ಹೆತ್ತರು. ಈ ವರ್ತಮಾನವನ್ನು ಕೇಳಿದ ಜಮದಗ್ನಿ ಮುನಿಯು ಪರಮ ಸಂತೋಷ ಯುಕ್ತನಾಗಿ ಜಾತಕರ್ಮವನ್ನು ನೆರವೇರಿಸಿ ಹನ್ನೆರಡನೆಯ ದಿವಸದಲ್ಲಿ ತನ್ನ ಮೊಮ್ಮ ಗನೂ ಕ್ಷತ್ರಿಯೋಮನೂ ಆದ ಗಾಧಿರಾಜನ ಕುಮಾರನಿಗೆ ವಿಶ್ವಾಮಿತ್ರನೆಂದೂ ತನ್ನ ಧರ್ಮಪತ್ನಿಯ ಗರ್ಭದಲ್ಲಿ ಭೂಭಾರವಿವಾರಣಾರ್ಥವಾಗಿ ಮಹಾವಿಷ್ಣುವಿನ ಅ೦ಶದಿಂದ ಅವತರಿಸಿದ ಮಗನಿಗೆ ರಾಮನೆಂದೂ ನಾಮಕರಣವನ್ನು ಮಾಡಿದನು. ಅನಂತರದಲ್ಲಿ ಗಾಧಿರಾಜನು ಪುತ್ರೋತ್ಸವವಾದ ವರ್ತಮಾನವನ್ನು ಕೇಳಿ ಅಮ೦ದಾನಂದಭರಿತಾ೦ತರ೦ಗನಾಗಿ ಕೂಡಲೆ ಮಾವನ ಮನೆಗೆ ಬಂದು ಅತ್ತೆ ಮಾ ವಂದಿಗೆ ನಮಸ್ಕರಿಸಿ ಕೆಲವು ದಿನಗಳವರೆಗೂ ಸಂತೋಷದಿಂದಿದ್ದು ಆ ಮೇಲೆ ತನ್ನ ಹೆಂಡತಿಯನ್ನೂ ಮಗನನ್ನೂ ತನ್ನ ಪಟ್ಟಣಕ್ಕೆ ಕರೆದು ಕೊಂಡು ಹೋಗಿ ಸಕಲವಿದ್ಯಾ ಪಾರಂಗತನಾಗಿ ಯೌವನವಂತನಾದ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿ ತಾನು ಧರ್ಮಸಂಪಾದನಾರ್ಥವಾಗಿ ಮುನಿವನವನ್ನು ಕುರಿತು ತಪಸ್ಸಿಗೆ ಹೊರಟುಹೋದನು. ಆ ಮೇಲೆ ವಿಶ್ವಾಮಿತ್ರ ರಾಜನು ಅನೇಕ ಸಹಸ್ರ ಸಂವತ್ಸರಗಳವರೆಗೂ ಧರ್ಮದಿಂದ ರಾಜ್ಯಭಾರವನ್ನು ಮಾಡಿ ಮುನಿಮ೦ತ್ರೋದಕ ಮಹಿಮೆಯಿಂದ ತಾನು ಬ್ರಾಹ್ಮಣ ನಾಗಬೇಕೆಂಬ ಬುದ್ದಿ ಹುಟ್ಟಿ ದುದರಿಂದ ಪ್ರಬುದ್ಧ ನಾದ ತನ್ನ ಮಗನಿಗೆ ಪಟ್ಟಾಭಿಷೇ ಕವನ್ನು ಮಾಡಿ ಸಕಲ ರಾಜನೀತಿಗಳನ್ನೂ ಬೋಧಿಸಿ ತಪೋವನಕ್ಕೆ ಹೋಗಿ ಚಿತೆ ಕಾಗ್ರತೆಯನ್ನು ಹೊಂದಿ ಅನೇಕ ಸಂವತ್ಸರಗಳವರೆಗೂ ತಪಸ್ಸನ್ನು ಮಾಡಿ ಬ್ರಹ್ಮದೇವ ನನ್ನು ಮೆಚ್ಚಿಸಿ ಬ್ರಹ್ಮರ್ಷಿತ್ವವನ್ನು ಪಡೆದು ಜಗದ್ವಿಖ್ಯಾತನಾದನು. ಇತಲಾ ಜಮದಗ್ನಿ ಯ ಮಗನಾದ ರಾಮನು ಬ್ರಹ್ಮ ಕ್ಷೇತ್ರದಲ್ಲಿ ಹುಟ್ಟಿದವ ನಾದಾಗ ಕ್ಷತ್ರಿಯ ಮಂತ್ರೋದಕ ಪ್ರಭಾವದಿಂದ ತಾನು ಜಗದೇಕವೀರನೆನ್ನಿಸಿ ಕೊಳ್ಳಬೇಕೆಂಬ ಬುದ್ದಿ ಹುಟ್ಟಿದುದರಿಂದ ಕೈಲಾಸಪರ್ವತಕ್ಕೆ ಹೋಗಿ ಘೋರವಾದ ತಪಸ್ಸನ್ನು ಮಾಡಿ ಪರಮೇಶ್ವರನನ್ನು ಮೆಚ್ಚಿಸಿ ಆತನಿಂದ ಸಕಲ ಧನುರ್ವೇದಗಳನ್ನೂ ಕಲಿತು ಸಕಲವಧ ಮಂತ್ರಾಸ್ತ್ರಗಳ ಪ್ರಯೋಗಸಂಹಾರಕ್ರಮಗಳನ್ನೂ ತಿಳಿದು ಆತನ ಸೇವೆಯನ್ನು ಮಾಡುತ್ತ ಕೆಲವು ದಿನಗಳವರೆಗೂ ಅಲ್ಲೇ ಇದ್ದುಕೊಂಡಿರಲು ಪರಮೇ ಶ್ವರನು ಶಿಷ್ಯನಾದ ರಾಮನ ಸುಗುಣಗಳಿಗೆ ಬಹಳವಾಗಿ ಸಂತೋಷಿಸಿ ಇವನ ಸಾಮ ರ್ಥ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಯೋಚಿಸಿ ಒಂದು ದಿವಸ ಮಹಾ ಶೂರಾ ಗ್ರೇಸರನಾದ ತನ್ನ ಮಗನಾದ ಷಣ್ಮುಖನನ್ನೂ ಮಹಾವೀರಾಗ್ರಗಣ್ಯನಾಗಿ ತನ್ನ ಶಿಷ್ಯನಾದ ರಾಮನನ್ನೂ ಸವಿಾಪಕ್ಕೆ ಕರೆದು ಎಲೈ ಶೂರರೇ ! ನೀವಿಬ್ಬರೂ ಯುದ ವನ್ನು ಮಾಡಿ ನಿಮ್ಮಿಬ್ಬರ ಶಕ್ತಿಯ ಹೆಚ್ಚು ಕುಂದುಗಳನ್ನು ನನಗೂ ಪಾರ್ವ ತಿಗೂ ತೋರಿಸಬೇಕೆಂದು ಹೇಳಲು ಆ ಮಹಾವೀರರಿಬ್ಬರೂ ಸ್ವಾಮಿಯ ಅಪ್ಪಣೆ

  • 17