ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ಕಥಾಸಂಗ್ರಹ-೪ ನೆಯ ಭಾಗೆ ದರೆ ದಶವದನನು ತಂದ ಹೆಣ್ಣಿನ ಮುಂದಣ ಮದುವೆಯು ನಿನಗೆ, ಮತ್ತು ತ್ರಿಲೋಕ ಗಳಲ್ಲೂ ನಿನ್ನನ್ನು ಹೋಲುವ ಸುಭಟರಿಲ್ಲ ಎಂದನು. ಆಗ ವಿಭೀಷಣನು ಮನಸ್ಸಿ ನಲ್ಲಿ-ಆಹಾ ! ರಾಮಚ೦ದ್ರನ ಕೀರ್ತಿಲತೆಯು ಕೀಳಲ್ಪಡುವದೇ ! ಪಾಪವೆಂಬ ಮುಳ್ಳುಗಿಡವು ಬೆಳೆಯುವುದಕ್ಕೆ ಅವಕಾಶವುಂಟಾಗಿರುವುದೇ ? ಮುಂದೇನುಗತಿ ? ಈ ಪ್ರಳಯದ ಮಹಾ ಶಕ್ತಿಯನ್ನು ತಡೆಯುವವರಾರು ಎಂದು ಯೋಚಿಸಿ ಗಡಗ ಡನೆ ನಡಗುತ್ತ ಶ್ರೀರಾಮನ ಬಳಿಗೆ ಓಡಿಬರುತ್ತಿರಲು ರಾಮನು ವಿಭೀಷಣನೈತರು ವುದಕ್ಕೆ ಕಾರಣವನ್ನು ತಿಳಿದು ಕೂಡಲೆ ಮನಸ್ಸಿನಲ್ಲಿ ಬ್ರಹ್ಮನನ್ನು ಧ್ಯಾನಿಸುತ್ತ ಅತಿ ಶೀಘ್ರದಿಂದ ಬತ್ತಳಿಕೆಯಲ್ಲಿದ್ದ ವಾಯವ್ಯಾಸ್ತ್ರವನ್ನು ತೆಗೆದು ಬಿಲ್ಲಿನಲ್ಲಿ ಹೂಡಿ ಕುಂಭಕ ರ್ಇನ ಕೈಯಲ್ಲಿರುವ ಶಕ್ತಾಯುಧದ ಮೇಲೆ ಪ್ರಯೋಗಿಸಲು ಅದು ನಿರ್ಭರ ಗಮ ನದಿಂದ ಹೋಗಿ ಆ ದನುಜನ ಶಕ್ರಾಯುಧದ ಮೇಲೆ ಬಿದ್ದು ತಾಗಿ ಅದನ್ನು ಆಕಾ ಶಮಾರ್ಗಕ್ಕೆ ಹಾರಿಸಿತು. ಆ ಶಕ್ತಿ ಯು ಲಘುಗತಿಯಿಂದ ಹೋಗಿ ಆಕಾಶಗಂಗೆಯ ನೀರುಗಳನ್ನೆಲ್ಲಾ ಹೀರಿ ಅಲ್ಲಿಂದ ಹೊರಟು ಇಂದ್ರನೇ ಮೊದಲಾದ ಮಹಾ ದೇವತೆಗಳ ನೈಲ್ಲಾ ಮಹಾಜ್ವಾಲೆಯಿಂದ ಸುಟ್ಟು ಕಳವಳಪಡಿಸಿ ಬಾಯಿಡಿಸಿ ಮುಂದೆ ಹೊರಟು ಮಹಾ ವೇಗದಿಂದ ಬರುತ್ತ ಸತ್ಯಲೋಕವನ್ನು ಪ್ರವೇಶಿಸಿ ಬ್ರಹ್ಮನ ಮಡಿಗೆಯನ್ನು ಹೊಕ್ಕು ಅಲ್ಲಿ ನಿಂತಿತು. ಆಗ ಕುಂಭಕರ್ಣನು ಆ ಬಿದು ಕೈಮೀರಿಹೋದುದನ್ನು ಕಂಡು ಮನಸ್ಸಿನಲ್ಲಿ ರಾಮನ ಸುಕೃತವನ್ನು ಹೊಗಳಿ ತಾನು ಸ್ವಲ್ಪವಾದರೂ ಕಂಗೆ ಡದೆ ಪರಿಘಾಯುಧವನ್ನು ತೆಗೆದು ಕೊಂಡು ಅದರಿಂದ ರಾಮನನ್ನು ಹೊಡೆಯಲು ಆತನು ಹರಿತವಳ ಐದಂಬುಗಳನ್ನು ಪ್ರಯೋಗಿಸಿ ಅದನ್ನು ಕಕ್ಕರಿಸಿ ಕೆಡಹಿ ದನು. ಮತ್ತೆ ಕುಂಭಕರ್ಣನು ಕ್ರುದ್ಧನಾಗಿ ಮೇರುಪರ್ವತದಂತೆ ತೋರವಾದ ಗದಾ ಯುಧವನ್ನು ತೆಗೆದುಕೊಂಡು ಬೀಸಿ ರಾಮನ ಮೇಲೆ ಹಾಕಲು ಅದು ಲೋಕಗಳ ನ್ನೆಲ್ಲಾ ಬೆದರಿಸುತ್ತ ಬರುತ್ತಿರುವುದನ್ನು ನೋಡಿ ಬಿಲ್ಲಾಳುಗಳ ಕಲ್ಲಾಯ್ತನಾದ ಶ್ರೀರಾಮನು ಈ ಮಹಾಗದೆಯು ಈ ನಮ್ಮ ಯುದ್ಧ ಭೂಮಿಯಲ್ಲಿ ಬಿದ್ದರೆ ಕಪಿಕ ಟಕಕ್ಕೆಲ್ಲಾ ಸಂಪೂರ್ಣ ಹಾನಿಯುಂಟಾಗುವುದೆಂದು ಭಾವಿಸಿ ವಿರಾಮವಿಲ್ಲದೆ ಐವ ತ್ತು ಬಾಣಗಳನ್ನು ಪ್ರಯೋಗಿಸಿ ಅದನ್ನು ಕಡಿದು ಹಾರಿಸಿ ಲಂಕೆಯಲ್ಲಿ ಬೀಳುವಂತೆ ಮಾಡಲು ಆ ತುಂಡುಗಳು ಮಹಾ ತ್ವರಿತಗತಿಯಿಂದ ಹೋಗಿ ಲಂಕಾದುರ್ಗಮಧ್ಯ ದಲ್ಲಿ ಬಿದ್ದು ರಾಕ್ಷಸರ ಹಸ್ಯ ಶರಥಪದಾತಿರೂಪವಾದ ಚತುರಂಗಬಲವನ್ನು ಬಹಳ ವಾಗಿ ಕೊಂದು ಹಾಹಾಕಾರವನ್ನು ಂಟುಮಾಡಿದುವು. ಆನಂತರದಲ್ಲಿ ಮೊಬ್ಬಿಗರೊಡೆಯನ ತಮ್ಮನಾದ ಕುಂಭಕರ್ಣನು ರಾಮನ ಸವಿಾಪಕ್ಕೆ ತನ್ನ ತೇರನ್ನು ನೂಕಲು ಶ್ರೀರಾಮನು ಕುಪಿತನಾಗಿ ಬಾಣಪ್ರಯೋಗ ವನ್ನು ಮಾಡಿ ಆ ತೇರನ್ನೆಳೆಯುವ ಮದಗಜಗಳನ್ನೆಲ್ಲಾ ಸವರಿ ಸಾರಥಿಯ ತಲೆಗಡಿ ದನು. ಅಷ್ಟಾದಾಗ ಖಳನು ಸ್ವಲ್ಪವಾದರೂ ಕಂಗೆಡದೆ ಕೈಯಲ್ಲಿ ಖಡ್ಡಾಯುಧ ವನ್ನು ತೆಗೆದು ಕೊಂಡು ಬೊಬ್ಬಿರಿಯು ರಾಮನ ಮೇಲೆ ಬಿದ್ದು ಹೊಡೆಯುವುದಕ್ಕೆ ಬರುತ್ತಿರಲು ಆತನು ಶೀಘ್ರದಿಂದ ದಿವ್ಯಾಸ್ತ್ರವನ್ನು ತೊಟ್ಟು ಪ್ರಯೋಗಿಸಿ ಅವನ