ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 163 ಅಷ್ಟರಲ್ಲಿಯೇ ಧೀರನಾದ ಸುಮಿತ್ರಾತನಯನು ಜಾಗರತೆಯನ್ನು ಹೊಂದಿದವ ನಾಗಿ ಬ್ರಹ್ಮಾಂಡಮಂಡಲವು ಜಡೀಭಾವವನ್ನು ಹೊಂದುವ ಹಾಗೆ ತನ್ನ ಬಿಲ್ಲೆಬ್ಬಿನ ಬಲ್ಬನಿಯನ್ನು ಮಾಡಿದನು. ಆಗ ಅ೦ಜನೆಯ ಮಗನು ಬೊಬ್ಬಿರಿದನು. ನೀಲಾಂಗದಾದಿ ಕಪಿ ಸೇನಾನಾಯಕರು ಮಹಾ ಗಿರಿತರುಗಳನ್ನು ತೆಗೆದು ಕೊಂಡು ಬಂದು ಇಂದ್ರ ವಿರೋಧಿಯನ್ನು ಸಂಹರಿಸುವುದಕ್ಕೆ ನಾನು ಮುಂದು ತಾನು ಮುಂದೆಂದು ಮೊನೆಗಾ ರಿಕೆಯಿಂದ ನಿಂತರು, ತಿರಿಗಿ ಇಂದ್ರಜಿತ್ತೂ ಲಕ್ಷ್ಮಣನೂ ಮಹಾರಣ್ಯ ಮಧ್ಯದಲ್ಲಿ ಮುನಿದು ಮಲತು ನಿಲ್ಲುವ ಮದಗಜಗಳಂತೆ ನಿಂತು ಸುರರು ಹೊಗಳುವ ಹಾಗೆ ವಿವಿಧಾಸ್ತ್ರಗಳಿಂದೆಚಾ ಡುತ್ತಿದ್ದರು. ಆಗ ಇಂದ್ರಜಿತ್ತಿನ ಧನುರ್ವಿದ್ಯಾ ಪಾಂಡಿತ್ಯವನ್ನು ರಾಕ್ಷಸ ಕಟಕವೂ ಸುಮಿತ್ರಾಪುತ್ರನ ಕೋದಂಡಾಗಮ ಪಾರಗತೆಯನ್ನು ಕಪಿಕಟಕವೂ ಹೊಗಳುತ್ತಿದ್ದಿತು. ಸುರಪಥದಲ್ಲಿ ಶುಕ್ರಾಚಾರ್ಯನೆಂದುಸಾರಿ-ಭಲರೇ ! ರಾಕ್ಷಸ ರಾಜಕುಮಾರಾ ಎನ್ನುತ್ತಿದ್ದನು. ಬೃಹಸ್ಪತ್ಯಾಚಾರ್ಯನೊಂದು ಸಾರಿ-ಮಜ ಭಾಪು ! ದಶರಥನಂದನಾ ! ಜಾಗು ! ಜಾಗು ! ಎನ್ನು ತ್ತಿದ್ದನು. ಆ ಕದನದ ಭಯಾ ದ್ಭುತಸ್ಥಿತಿಯನ್ನು ಬಣ್ಣಿಸುವವರಾರು ? ಸೋರಿ ನಿಂತಿರುವ ನೆತ್ತರಿನಲ್ಲಿ ಜೋಡುಗಳು ಮುಣುಗಿದುವು. ಇಬ್ಬರ ಮೈಗಳಲ್ಲೂ ಸರಳುಗಳು ನೆಟ್ಟು ವು. ಒಬ್ಬರನ್ನೊಬ್ಬರು ತಿರಸ್ಕರಿಸಿ ನುಡಿಯುತ್ತಿದ್ದ ಪಂಥದ ಮೋಡಿಯು ಮುರಿದಿತು. ಭುವನದಲ್ಲಿ ರಾಕ್ಷ ಸರು ನಿಜವಾಗಿಯೂ ತಾಮಸರು. ಕ್ಷಾತ್ರ ತಾಮಸವು ಸಮರಕಾಲದಲ್ಲಲ್ಲದೆ ಇತರ ಕಾಲಗಳಲ್ಲಿ ವಿವೇಕಕ್ಕೆ ಸ್ಥಳವನ್ನು ಕೊಡತಕ್ಕುದು. ಆದುದರಿಂದ ಅದರ ಬಲವೇ ಹೆಚ್ಚು ಎಂದು ಹಿರಿಯರಾಡುವ ನುಡಿಯ ನಿಜಾಂಶವು ಸ್ಥಿರಪಡುವುದಕ್ಕೆ ಈ ಮಹಾ ವೀರರ ಯುದ್ಧಾ೦ತ್ಯ ಫಲವೇ ತ್ರಿಲೋಕಗಳಿಗೂ ಆಧಾರಭೂತವಾಗಿರುವುದು ಎಂದು ಕೊಳ್ಳುತ್ತಾ ಸುರರು ಓರೆಯಾಗದೆ ಈಕಿಸುತ್ತಿದ್ದರು. ಅನಂತರದಲ್ಲಿ ಉಭಯ ವೀರರೂ ಮರವೆಯಿಂದ ಭೂಮಿಯಲ್ಲಿ ಮಲಗಿದರು. ಆಗ ಅವರಿಬ್ಬರ ಪಕ್ಷ ದ ಆಪ್ತರು ಸಮೀಪಕ್ಕೆ ಬಂದು ಮೈ ಮರೆಯುವಿಕೆಯನ್ನು ಶೈತ್ಯೋಪಚಾರಗಳಿಂದ ತಪ್ಪಿಸಿ ರಕ್ತದ ಳನ್ನು ತೊಳೆದು ಗಾಯಗಳಲ್ಲಿ ಮದ್ದುಗಳನ್ನು ಮೆತ್ತಿ ದಿವ್ಯ ವಸ್ತ್ರಗಳನ್ನು ಡಿಸಿ ಕಸ್ತೂರಿ, ಕರ್ಪೂರ ಕೇಸರಿಗಳಿಂದ ಮಿಶ್ರವಾದ ಸುಗಂಧಗಳನ್ನು ಮೈಗೆ ಲೇಪಿಸಿ ಕಬಳಗಳನ್ನು ತಿನ್ನಿಸಿ ಕರ್ಪೂರ ತಾಂಬೂಲವನ್ನು ಕೊಟ್ಟು ಮತ್ತೆ ಹುರಿಗೊಳಿಸಿ ಕಲಿಮಾಡಿದರು. ಅನಂತರದಲ್ಲಿ ಅವರೀರ್ವರೂ ಬೊಬ್ಬಿರಿದೆದ್ದು ವೀರಪಳಿಗಳನ್ನು ಬಿಗಿದುಟ್ಟು ಬಿಲ್ಲು ಗಳ ಕೊಪ್ಪುಗಳನ್ನಾರೈಯ್ದು ತೆಬ್ಬಗಳನ್ನು ಕಟ್ಟಿ ಕೂರ ವಿಷಮಬಾಣಗಳನ್ನು ಸಂಧಾನಿಸಿ ಒಬ್ಬನನ್ನೊಬ್ಬನು ಹೊಡೆದನು ಆಗ ಅವರೆಸೆದ ಬಾಣಗಳು ಅಂಬರತ ದಲ್ಲೆಲ್ಲಾ ತುಂಬಿಕೊಂಡುವು. ಆಗ ಕೆಮ್ಮುಗಿಲತಿಂತಿಣಿಗೆ ಉಬ್ಬುವ ಮಹಾಂಬುಧಿ ಯಂತೆ ಕದನದ ಕೊಬ್ಬಿನಿಂದ ಕಲಿಯೇರಿದ ಇಂಧಾರಿಯು ರಾಮಾನುಜನನ್ನು ಕುರಿತು --ಎಲೈ ಮಢನಾದ ಲಕ್ಷ್ಮಣನೇ ! ಶೀಘ್ರವಾಗಿ ನಿಮ್ಮಣ್ಣನನ್ನು ಕರಿಸಿಕೋ. ಅವನು ಈ ಸಮಯದಲ್ಲಿ ನಿನ್ನ ಹತ್ತಿರದಲ್ಲಿಯೇ ಇರಲಿ. ನೀನು ಬದುಕಿರುವಾಗಲೇ ಭರತಶತ್ರುಘ್ನರಿಗೆ ಓಲೆಯನ್ನು ಬರೆಯುವಂತೆ ನಿಮ್ಮಣ್ಣನಿಗೆ ಹೇಳು. ನಮ್ಮೆಲ್ಲರನ್ನು