ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈepರ್ಳಚಂಹಾರ 133 ಕೊಂಡು ಹೋಗಿ ರಾಮನಿಗೊಪ್ಪಿಸಿಬಿಡು ಎಂದು ಹೇಳಿದನು, ಅದನ್ನು ಕೇಳಿ ರಾವ ಣನು ಕೋಪಸಂತಾಪಯುಕ್ತನಾಗಿ ಹಗಲಿರುಳುಗಳಲ್ಲೂ ಹಗೆಯನ್ನು ಹೊಗಳಿ ಕೊಂಡು ಅವನ ಬಾಯಂಬುಲಕ್ಕೆ ಕೈಯಾತುಕೊಂಡಿರುವುದಕ್ಕೆ ಅಧಮನಾದ ಒಬ್ಬ ತಮ್ಮನು ಸಾಲದೆ ಮಿಕ್ಕ ರಾಗಿಯನ್ನು ಬೀಸುವುದಕ್ಕೆ ನೀನೊಬ್ಬ ತಮ್ಮನು ಬಂದಿಯಾ ? ಬಲು ಚೆನ್ನಾಯಿತು ? ನೀನು ತಿರುಕನಂತೆ ವೈರಿಯ ಬಿರುದಾವಳಿ ಯನ್ನು ಹೊಗಳಿಕೊಂಡು ಅವನ ಪಾಳಯವನ್ನು ಕುರಿತು ಹೋಗುವವನೋ ? ಕತ್ತಿಯ ಮೊನೆಯಲ್ಲಿ ಹೋಗತಕ್ಕವನೋ ? ಎದುರಾಳಿನೊಡನೆ ಕಾಳೆಗಕ್ರಂಜಿ ನುಸು ಳುಗಂಡಿಯಲ್ಲಿ ತೂರುವವನೋ ? ನಿನ್ನ ಬಗೆಯಾವುದು ? ಅದನ್ನು ಬೇಗ ತಿಳಿಸು ಅಂದನು. ಅದಕ್ಕೆ ಕುಂಭಕರ್ಣನು--ಎಲೈ ಅಣ್ಣಾ, ನಾನು ಎಂದಿಗೂ ಕಾದಲಂಜುವ ವನಲ್ಲ, ನಾನು ಕಾಳೆಗಕ್ಕೆ ಹಿಂದೆಗೆದರೆ ಕೀರ್ತಿಲತೆಯು ಬಾಡೀತು, ಮುಕ್ತಿಯ ದಾರಿಯು ಮಾಸೀತ, ನೀನು ಸೀತೆಯನ್ನು ತಂದಾಗಲೇ ನಮ್ಮ ಆಯುಷ್ಯದ ಅವಧಿಯು ತೀರಿತು, ಹಗೆಯೊಡನೆ ಕಾದಿ ಗೆಲ್ಲುವುದು ಅಸಾಧ್ಯವು, ಈ ವಿಷಯವನ್ನು ನೀನೇ ನಿನ್ನಲ್ಲಿ ಯೋಚಿಸಿ ನೋಡು ಎನ್ನಲು ; ರಾವಣನು-ಎಲವೋ ! ನೀನು ಈ ಸಂಗ್ರಾ ಮವನ್ನು ಜಯಿಸುವಿ ಎಂದು ತಿಳಿದು ಎಬ್ಬಿಸಿದರೆ ಹೆದರಿ ಕಲಹಕ್ಕೆ ಹೋಗದೆ ನನ್ನೆ ದುರಿನಲ್ಲಿ ಶುಷ್ಕ ನೀತಿಗಳನ್ನು ಓದುತ್ತ ಕಾಲಹರಣವನ್ನು ಮಾಡುತ್ತಿರುವ, ಹೇಡಿಯ ನಿದ್ರಾಜಾಡ್ಯನಿಗೃಹೀತನೂ ಆದ ನಿನ್ನನ್ನು ತಿಳಿಯದೆ ಮಹಾವೀರನೆಂದು ಭಾವಿಸಿ ಎದು ರಿನಲ್ಲಿ ನಿಲ್ಲಿಸಿಕೊಂಡು ನುಡಿದುದೇ ತಪ್ಪು ! ಮೊದಲಂತೆಯೇ ನಿದ್ದೆಯಲ್ಲಿ ಬಿದ್ದು ಸಾಯಿ ! ಹೋಗು ! ಎಂದು ಕೋಪದಿಂದ ನುಡಿದನು. ಆಗ ಕುಂಭಕರ್ಣನು--ಎಲಾ ಅಣ್ಣಾ, ವೀಳಯವನ್ನು ತಾ! ನನ್ನ ಕಾಳೆಗದ ಹೊಸದಾದ ಪರಿಯನ್ನು ನೋಡು ! ನನ್ನೆದುರಿನಲ್ಲಿ ಕೂಲಿಯು ಅಡ್ಡ ಗಿಸಿ ಬಂದರೂ ಬಿಡದೆ ಕೊಲ್ಲುವೆನು, ಮಿಕ್ಕ ಜಾಳುಗಳ ಬಡಗೊಬ್ಬಿನ ಬಿಂಕವನ್ನು ಹೇಳದಿರು. ಲೋಕದಲ್ಲಿ ಮದನನಿಗೆ ಮನಸ್ಸನ್ನು ಮಾರಿದವರು ಬಯಲಾಗುವರು ಎಂದು ನಾನು ಹೇಳಿದರೆ ನಿನಗೆ ಇಷ್ಟು ಕೋಪವುಂಟಾಗಬಹುದೇ ? ಎಂದನು. ಆಗ ರಾವಣನು-ಎಲೇ ತಮ್ಮಾ, ನಾವಂತು ಕುಡುವಿಲ್ಲನ ಸರಳುರಿಗೆ ಸಿಕ್ಕಿ ಮೂರ್ಖರಾದವರು. ಆಗಲಿ, ಲೋಕವಿಖ್ಯಾತರಾದ ಶೂರರು ಮೂಢರಂತೆ ಮರಣ ಕಂಜಿ ಹಿಂದೆಗೆದರೆ ಜಗತ್ತಿನಲ್ಲಿರುವ ಸಮಸ್ತ ಜನರೂ ಕೈಹೊಯ್ತು ನಗದಿರುವರೇ ? ನಿಜಭುಜಾರ್ಜಿತನಾದ ನಿನ್ನ ಯಶಶ್ಚಂದ್ರನು ಪ್ರಸಿದ್ದ ಚಂದ್ರನನ್ನೂ ಕೂಡ ತಿರಸ್ಕರಿಸು ತಿರುವನಲ್ಲಾ ! ನಿನ್ನ ಅತುಲಪ್ರತಾಪಾದಿತ್ಯನು ಈ ಸೂರ್ಯನನ್ನು ಅಲ್ಲಗಳೆಯತ್ತಿ ರುವನಲ್ಲಾ!” ಅಣುಪ್ರಾಯರಾದ ಅಲ್ಪಮನುಜರ ಕೊಬ್ಬನ್ನು ಗಣಿಸದೆ ನಿರ್ನಾಮ ಮಾಡಬಲ್ಲ ವನಾದ ನೀನು ವಿರೋಧಿಗೆದುರಾಗಿ ನಿಂತರೆ ಪ್ರತಿಭಟಿಸಿ ನಿಲ್ಲುವವರು ಲೋಕತ್ರಯದಲ್ಲುಂಟೇ ? ಇಲ್ಲವು, ಅದು ಕಾರಣ ಇಂಥಾ ನೀನು ಪ್ರಾಣಗಳ ಮೇಲ ಣ ಆಶೆಯನ್ನು ಬಿಟ್ಟು ವಿರೋಧಿವಕ್ಷಃಕಂಪನದಾಯಕವಾದ ಜಗಳವನ್ನು ಅಂಗೀ