ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 179 ಇಂದ್ರಿಯಗಳೆಲ್ಲಾ ವಿಷಯವ್ಯಾಪ್ತಿಯನ್ನು ಬಿಟ್ಟು ಶಾಂತಸ್ಥಿತಿಯನ್ನು ಹೊಂದಿದುವು. ಕೂಡಲೆ ರಾಮದೂತನು ಮೈಮರೆತು ನೆಲದಲ್ಲಿ ಮಲಗಿದನು. ಆಗ ರಾವಣನು ಭಯಾಶ್ಚರ್ಯಭಾವಗ್ರಸ್ತನಾಗಿ--ಈ ನಮ್ಮ ಮುಷ್ಟಿಘಾತಗಳಿಂದ ಮೇರುಮಂದ ರಾದಿ ಕುಲಾಚಲಗಳೂ ಕೂಡ ಪುಡಿಪುಡಿಯಾಗಿ ಹೋಗಬೇಕು, ಅಂಥದರಲ್ಲಿ ಅಪ್ರತಿ ಮಮಲ್ಲನಾದ ಈ ಆಂಜನೇಯನು ಮರ್ಥೆಯನ್ನು ಮಾತ್ರ ಹೊಂದಿದನಲ್ಲಾ! ಇವನು ಪುನಃ ಎಚ್ಚೆತ್ತು ಬಂದು ಕೋಪದಿಂದ ಗುದ್ದು ವನಾದರೆ ಆ ಗುದ್ದಿ ನಿಂದಲೇ ನಮ್ಮ ಆಯುಃಕಾಲವು ಪರಿಪೂರ್ತಿಯನ್ನು ಹೊಂದುವುದು ಎಂದು ಯೋಚಿಸಿ ಸಾರಥಿಯನ್ನು ಕುರಿತು-ಇದೇ ಸಮಯದಲ್ಲಿ ಬೇಗ ಬೇಗ ರಥವನ್ನು ನಡಿಸಿಕೊಂಡು ಹೋಗಿ ರಾಮನೆದುರಿನಲ್ಲಿ ನಿಲ್ಲಿಸು ಎಂದು ಹೇಳಲು ; ಆಗ ಸಾರಥಿಯು ಕುದುರೆಗಳನ್ನು ತೀವ್ರಗೊಳಿಸಿ ಅದೇ ಪ್ರಕಾರ ಮಾಡಲು; ತನ್ನೆದುರಿಗೆ ಅತಿ ಶೀಘ್ರತೆಯಿಂದ ಬರುತ್ತಿರುವ ರಥವನ್ನು ಕಂಡು ಶ್ರೀರಾಮನು ಅಷ್ಟರಲ್ಲಿ ಮರ್ಛ ತಿಳಿದೆದ್ದು ಬಂದಿದ್ದ ಸುಗ್ರೀವನನ್ನು ನೋಡಿ.ಎಲೈ ಪ್ರಿಯನಾದ ಕಪಿರಾಜನೇ, ಇನ್ನು ಮೇಲೆ ಈ ರಾವಣನೊಡನೆ ಯುದ್ಧಕ್ಕೆ ನಿಲ್ಲ ತಕ್ಕವನು ನಾನೇ. ಇವನು ನಮ್ಮ ಬಾಣಹತಿಯಿಂದಲೇ ಸಾಯತಕ್ಕವನು. ಅದು ಕಾರಣ ಈ ಕವಿನಾಯ ಕರನ್ನು ವ್ಯರ್ಥವಾಗಿ ದಣಿಸಬೇಡ. ನೀವೆಲ್ಲರೂ ನಮ್ಮ ಯುದ್ಧವನ್ನು ನೋಡುತ್ತಿರಿ. ಈ ರಾವಣನು ಅಪ್ರತಿಮಪರಾಕ್ರಮವಿಜೃಂಭಿತನಾದುದರಿಂದ ಲೋಕವಿಖ್ಯಾತವೀರ ನೆಂದು ಪ್ರಖ್ಯಾತಿಯನ್ನು ಹೊಂದಿರುವನು. ಆದುದರಿಂದ ಇವನ ಹಮ್ಮನ್ನು ಮುರಿದು ಇವನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಭೂತಗಣಕ್ಕೆ ಔತಣವನ್ನು ಮಾಡಿಸು ವೆನು ಎಂದು ಹೇಳಿ ಕಪಿಸೇನೆಗಳನ್ನು ರಾವಣನೊಡನೆ ಯುದ್ಧಕ್ಕೆ ಹೋಗದಂತೆ ನಿಲ್ಲಿಸಿ ತನ್ನ ಉಟ್ಟ ನಾರ್ಮಡಿಯನ್ನು ತೆಗೆದು ವೀರಪಳಿಯನ್ನು ಬಿಗಿದುಟ್ಟು ಸೊಂಟ ದಲ್ಲಿ ಬಾಕನ್ನು ಸಿಕ್ಕಿಸಿ ಅಕ್ಷಯಬಾಣದ ಬತ್ತಳಿಕೆಗಳನ್ನು ಬೆನ್ನಿ ನಲ್ಲ ಳವಡಿಸಿ ಕೆದರಿ ರುವ ಜಡೆಗಳನ್ನು ಒಂದುಗೂಡಿಸಿ ಸುತ್ತಿ ಬಿಗಿದು ಕರಕೊದಂಡದ ಕೊಪ್ಪನಾರೈ ಯ್ಯು ಶಿಂಜಿನಿಯನ್ನು ಕಟ್ಟಿ ಮಿಡಿದು ಝೇಂಕಾರಧ್ವನಿಯನ್ನು ಟುಮಾಡಲು ; ಆ ರಭಸವನ್ನು ಕೇಳಿ-ಇದು ದುಷ್ಟನಾದ ರಾವಣವಿನಾಶಸೂಚಕವಾದ ರಘುವೀರಾ ಗ್ರಗಣ್ಯನ ಬಿಲ್ಲ ನಿಯು ಎಂದು ತಿಳಿದು ರಾವಣನ ಭಯವನ್ನು ಬಿಟ್ಟು ಅಷ್ಟ ದಿಕ್ಕಾಲ ಕರೂ ಏಕಾದಶರುದ್ರ ರೂ ದ್ವಾದಶಾದಿತ್ಯರೂ ಸಪ್ತಮರುತ್ತುಗಳೂ ಬ್ರಹ್ಮರುದ್ರ ರೂ ಸನಕನಾರದಾದಿ ಮಹರ್ಷಿಗಳೂ ಬಂದು ಆಕಾಶದಲ್ಲಿ ಕೂಡಿ ತಮ್ಮ ತಮ್ಮ ವಿಮಾನ ಗಳ ಮೇಲೆ ಕುಳಿತುಕೊಂಡು ಅತ್ಯಾದರದಿಂದ ನೋಡುತ್ತಿದ್ದರು ಆಗ ರಾವಣನ ತೇರಿನ ಕುದುರೆಗಳು ರಾಮನ ಎದುರಿನಲ್ಲಿ ನಿಂತು ನಲಿದಾಡುತ್ತಿರುವುದನ್ನೂ ರಾಮನು ರಥಹೀನನಾಗಿ ನೆಲದ ಮೇಲೆ ನಿಂತಿರುವುದನ್ನೂ ನೋಡಿ ಲಕ್ಷ್ಮಣನು ಅಸಹ್ಯ ಭಾವವು ಳ್ಳವನಾಗಿ--ಈ ಪಾಪಿಯಾದ ರಾವಣನ ರಥವನ್ನು ಹೊಡೆದು ಚೂರುಚೂರು ಮಾಡಿಬಿಡುವೆನೆಂದು ಧನುಸ್ಸಿನಲ್ಲಿ ಬಾಣವನ್ನು ತೊಟ್ಟನು. ಮತ್ತು ಆಗ ತಾನೇ ಮೂರ್ಛ ತಿಳಿದೆದ್ದು ಬಂದಿದ್ದ ಆಂಜನೇಯನು ಮಹಾ ಕೋಪತಾಪಿತ ಹೃದಯ