ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 289 ವಿತ್ರಕ್ಕೆ ತಕ್ಕ ವಿಭವ. ವೀರನ ಶೌರ್ಯ ಹಾರುವನ ಮೇಲೆಯೇ ? ವೈರವಿದ್ದವನಿಂದ ಕ್ಷೌರಾ ಮಾಡಿಸಿಕೊಂಡ ಹಾಗೆ. ವೈರಾಗ್ಯವುಳ್ಳವನಾದರೂ ವೈರತ್ವ ಬಿಡಲಿಲ್ಲ. ಶಕುನದ ಹಕ್ಕಿಯು ಗೋಣು ಮುರಿದ ಹಾಗೆ. ಶಕ್ತಿಯಿದ್ದವನಾದರೂ ಯುಕ್ತಿಯಿದ್ದವನ ಕೆಳಗೆ. ಶಾಪಾ ಕೊಡುವವ ಪಾಪಕ್ಕೆ ಹೆದರ. ಶಾಂತಿ ಮಾಡಿದರೂ ಭ್ರಾಂತಿ ಹೋಗಲಿಲ್ಲ. ಭೋಗನ ಸಂಬಳ ಸಂತೆ ಎಂದು ಕೇಳ ಬೇಡ; ಹೆಂಡತೀ ದೆಸೆಯವರು ಉಂಡ ರೋ ಎಂದು ಕೇಳ ಬೇಡ. ಶ್ವಾನನ ಮುಂದೆ ಗಾನಾ ಹಾಡಿದ ಹಾಗೆ. ಶಿವಾ ಅಂದರೆ ಸೆರಗು ಸುತ್ತಿ ಕೊಂಡ; ಭವಾ ಅಂದರೆ ಭೈರವಾಸು ಹರಿದು ಬಿಟ್ಟ. ಸಂಕಟ ಬಂದರೆ ವೆಂಕಟರಮಣ. ಸಂಚು ನಡಿಸಲಿಕ್ಕೆ ಸಂಚಕಾರಾ ಕೊಡಬೇಕೇ ? ಸಂತೇ ನೆರೆಯುವದಕ್ಕಿಂತ ಮುಂಚೆ ಗಂಟು ಕಳ್ಳರು ನೆರೆದ ಹಾಗೆ. ಸಂತೆ ಹೊತ್ತಿಗೆ ಮರು ಮೊಳಾ ನೇದ ಹಾಗೆ. ಸಜ್ಜನನಿಗೂ ಸಜ್ಜನನಿಗೂ ಮರು ದಾರಿ; ಸಜ್ಜನನಿಗೂ ದುರ್ಜನನಿಗೂ ಎರಡು ದಾರಿ;

  • ದುರ್ಜನನಿಗೂ ದುರ್ಜನನಿಗೂ ಒಂದೇ ದಾರಿ. ಸಟೆ ಆಡುವವನಿಗೆ ಮಠದ ಪೂಜೆ ಸಿಕ್ಕೀತೇ ? ಸಣ್ಣ ತಲೆಗೆ ದೊಡ್ಡ ಮುಂಡಾಸು. ಸತ್ತ ಕುರಿ ಕಿಚ್ಚಿಗೆ ಅಂಜೀತೇ ? ಸತ್ಯವಿದ್ದರೆ ಎತ್ತಲೂ ಭಯವಿಲ್ಲ. ಸಮಯಕ್ಕಾಗದ ಅರ್ಥ ಸಹಸ್ರವಿದ್ದರೂ ವ್ಯರ್ಥ.? ಸಮಯಕ್ಕಾದವನೇ ನಂಟ, ಸಾಹಸಕ್ಕೊದಗಿದವನೇ ಭಂಟ. ಸಮುದ್ರದ ನಂಟು, ಉಪ್ಪಿಗೆ ಬಡತನ. ಸಮುದ್ರದ ಮುಂದೆ ಅರವಟಿಗೆ. ಸಮುದ್ರ ದೊಡ್ಡದಾದರೂ ಪಾತ್ರೆ ಇದ್ದಷ್ಟೆ ನೀರು ಸಿಕ್ಕಿತು. ಸಮುದ್ರದ ಮೇರೆ ದಪ್ಪಿದರೆ ಯಾರು ಮಾಡೋದೇನು ? ಸರಕು ಒಪ್ಪಿಸಿದ ಮೇಲೆ ಸುಂಕವೇ ? ಸರ್ಪನ ಕೂಡೆ ಸರಸವೇ ? ಸಾಧು ಎತ್ತಿಗೆ ಎರಡು ಹೇರು. ಸಾಧಿಸಿದರೆ ಸಬಳಾ ನುಂಗಬಹುದು. ಸಾಯುವ ತನಕ ಸಾಮು ಕಲಿತರೆ ಸಾಯುವವನ ಕಣ್ಣಿಗೆ ಸುಳಿದವನೇ ಜವರಾಯ.