ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ಮಾಡಿದ್ದುಣ್ಣೆ ಮಹಾರಾಯ, ದ್ದು ಅವಶ್ಯಕವಾದ್ದರಿಂದ ಎಲ್ಲವನ್ನೂ ನಿಮ್ಮಲ್ಲಿ ತಿಳಿಸಿ ದೇನೆ, ಇನ್ನು ಹೆಚ್ಚಾಗಿ ಮಾತನಾಡಲಾರೆ. ಸದಾಶಿವದೀಕ್ಷಿತ-ಮಾನೈಯ್ಯ, ತಾವು ಅಪ್ಪಣೆ ಕೊಡಿಸಿದ ಸಂ ಗತಿ ಎಲ್ಲವನ್ನೂ ಕೇಳಿದೆ. ಅಷ್ಟು ದೂರ ಯೋಚನೇಮಾ ಡಬೇಕಾದ ಸಂದರ್ಭವೇನೂ ಈಗ ಕಾಣಿಸಲಿಲ್ಲ. ಈಗ ಸುಮಾರು ಸರಿಹೊತ್ತಾಗಿದೆ. ನಿದ್ರೆ ಮಾಡಿದರೆ ಆರೋಗ್ಯ, ಬೆಳಗಾದಮೇಲೆ ಯೋಚಿಸೋಣ. ಚೋಯಿ-ನಿದ್ರೆಯ ಇಲ್ಲ ಗಿದ್ರೆಯೂ ಇಲ್ಲ. ಸುಸ್ತು ಹೆಚ್ಚು ತಾ ಇದೆ, ಮಾತನಾಡಲಾರೆ. ಹೀಗೆನ್ನುತಾ ಜೋಯಿಸನು ಹಾಸಿಗೆಯ ಮೇಲೆ ಮಲಗಿ ಕೊಂಡನು. ಪ್ರಜ್ಞೆ ತಪ್ಪಿ ಹೋದ ಸೂಚನೆ ಕಂಡಿತು. ದೀವಾತಂ ದುನೋಡುವಾಗ್ಗೆ ಕಣ್ಣಗುಡ್ಡೆ ಮೇಲಕ್ಕೆ ಸಿಕ್ಕಿಹೋಗಿತ್ತು, ಗಾಬ ರಿಯಾಯಿತು. ಹುಡುಗರು ಮೊದಲಾಗಿ ಮನೇ ಜನರೆಲ್ಲಾ ಎದ್ದರು. ಕಿವಿಯಲ್ಲಿ ಎಷ್ಟು ಊದಿದರೂ ಪ್ರಜ್ಞೆ ಬರಲಿಲ್ಲ. ಗೊರಗೊರ್ ಎಂದು ಶ್ಲಾಸ ಎಳೆಯುವುದಕ್ಕೆ ಆರಂಭವಾಯಿತು. ಗಾಬರಿ ಹೆಚ್ಚಾಯಿತು, ಬೀದೀಭಾಗಿ ಸಮಾಸದ ಕಿರುಮನೆಗೆ ಹಾಸಿಗೆ ಸಹಿತವಾಗಿ ಎತ್ತಿಕೊಂಡು ಹೋದರು. ಪಂಚಾಂಗ ನೋ ಡಲಾಗಿ ಶ್ರೀವಾದಿ ನಕ್ಷತ್ರವಾಗಿತ್ತು. ಕಿಟ್ಟನು-ಅಪ್ಪ ಗೊರ ಕೇಹೊಡೆಯುತಾನೆ, ನಿದ್ರೆ ಬಂದಿದೆ. ಎಲ್ಲರೂ ಸುಮ್ಮನೇ ಮಠ ಗಿಕೊಳ್ಳೋಣ ಭಾವ. ತಿನ್ನು, ಎದುರುಮನೇ ಪಾಪಯ್ಯನವರ ಪಾತಕ್ಕ ಪುಳ್ಳಂಗಾಯಿ ಉಂಡೇ ತಂದುಕೊಟ್ಟಿದ್ದಳಲ್ಲಾ, ಅದ