ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಮಾಡಿದ್ದು ಕ್ಯೂ ಮಹಾರಾಯ. ಲಕ್ಷಣವಾಗಿ ಈ ಹಳತು ಬೋಳಿಸಿಕೊಂಡು ಅಂಗಾ ರಹಚ್ಚಿ ಕೊಂಡು ಸುಖವಾಗಿ ಇದ್ದೆನು. ಅಷ್ಟಕ್ಕೆ ಮಾರ್ಗ ಇಲ್ಲ ದ ಹೀಂಗೆ ಈತಗಾಗಿ ನಾನು ಹೊರಗೆ ಮುಖಇಡಲಿಕ್ಕಾಗ ದಹಾಂಗಾಯಿತು. ಏನಬಡಿ ಕೊಳ್ಳಿ ? ಎಂದು ನೆರೆಹೊರೆಯ ನರ ಸಂಗಡ ಆಡಿಕೊಂಡಳು. ಅತ್ತ ಮೈ ಸರಿಂದ ಸವಾರ ಕುದುರೆಯವರೂ ಬಾರಿನವ ರೂ ಸಹಾ ದುಗುಗುಂಡು ಕತ್ತಿ ಭರ್ಜಿಗಳಸಮೇತ ಚಾಮು ರಾಜನಗರದ ಕಡೆಗೆ ಹೊರಟರು. ಇದಕ್ಕೂ ಕಾರಣ ಸಾಧಾರ ಣ ಜನರಿಗೆ ಗೊತ್ತಾಗಲಿಲ್ಲ. ತೊನ್ನೂರು ಕಣವೆ ಗೆಜ್ಜಲಹಟ್ಟಿ ಕಣವೆ, ಈ ಮಾರ್ಗವಾಗಿ ಕಣಿವೇಕೆಳಕ್ಕೆ ಹೋಗುವ ಜನರ ನ್ನು ಕಳ್ಳರು ಗರೋಡೇ ಮಾಡಿ ಸುಲಿಗೆಮಾಡಿ ಅನೇಕರನ್ನು ತಲೇ ಒಡೆಯುತಾಇದ್ದರು. ಇದರ ಬಂದೋಬಸ್ತಿಗಾಗಿ ಆ ದಾರಿಗಳಲ್ಲಿ ಬಾರಮಾಡಿದ ಬಂದೂಗನ್ನು ಹಿಡಿದು ಸಿಪಾಯಿ ಗಳ ಸವಾರರೂ ಗಸ್ತು ಮಾಡುವ ನಿರ್ವಾಡು ಇತ್ತು. ಈ ಕೆಲಸಕ್ಕಾಗಿ ಬಾರಿನವರೂ ಸವಾರರೂ ನಗರಕ್ಕೆ ಬಂದಿರಬ ಹುದೆಂದು ಜನರು ತಿಳಿದುಕೊಂಡರು. ಇತರವಿಧವಾದ ಪುಕಾ ರ ಲೇಶವೂ ಆಗಲಿಲ್ಲ. ಕಣವೇ ಕೆಳಕ್ಕೆ ವಿಜಯಯಾತ್ರೆಗಾಗಿ ಮೋಹಿಂ ಹೋಗಿದ್ದ ಜನರು ಯಾರೂ ಸಂಟವಾಡಿಗೆ ಹಿಂತಿ ರುಗಿಬರಲಿಲ್ಲ. ಎಂದಿನಂತೆ ಎಲ್ಲರೂ ಬರುತಾರ ಎಲ್ಲವೂ ಸರಿ ಯಾಗಿ ನಡೆದುಕೊಂಡು ಹೋಗುತ್ತೆ ಎಂದು ಆ ಗ್ರಾಮದವ ರೆಲ್ಲಾ ತಿಳಿದುಕೊಂಡು ನಿರ್ಧಿತರಾಗಿದ್ದರು, ಆಗ ನಡೆದ ಅದ್ಭುತವನ್ನು ಏನಹೇಳಲಿ ! ಸದಾಶಿವದೀ