ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೆ ಮಹಾರಾಯ, ೨೨೯ ಕೆಲವರು ಪ್ರಾಣಭೀತಿಯುಂಟು ಎನ್ನುತಿದ್ದರು. ಕೆಲವರು ದೊ ಈ ಜೀವಕ್ಕೆ ಭಯವಿಲ್ಲ ಎನ್ನುತಿದ ರು. ಇನ್ನು ಕೆಲವರು ಯಾ ವುದೂ ಖಂಡಿತವಾಗಿ ತೋರದೆ ಹೀಗೂ ಹಾಗೂ ಸಂಶಯ ಪಡುತಿದ್ದರು. ಒಬ್ಬೊಬ್ಬರುಮಾತ್ರ ಇದು ಆಭಿಚಾರಿಕ, ಶಾಬ ರಪ್ರಯೋಗವಾಗಬೇಕೆಂದು ಕಾಣುತ್ತೆ ಎಂದರು. ಪಶುಪತಿ ಸಾಂಬಶಾಸ್ತ್ರಿಯು ಹೀಗೆಯೇ ವಿಚಾರಮಾಡುತ್ತಾ ಬಂದನು. ಕೊನೆಗೆವಂತ್ರ ಮೂರ್ತಿ ತಲಚೇರಿ ಈಡಯ್ಯನವರು ಎಂದು ಇದಾರೆ ಅವರಿಗೆ ವೈದ್ಯಶಾಸ್ತ್ರ, ಮಂತ್ರಶಾಸ್ತ್ರ, ಮಾದನಾ ಡುವುದು ಅದಕ್ಕೆ ತಡೆ ಕಟ್ಟುವುದು, ಇದೆಲ್ಲಾ ಗೊತ್ತಿದೆ. ಅವರು ಕೊಲ್ಲಾಪುರದ ಮಹಾಲಕ್ಷ್ಮಿ ಉಪಾಸಕರು, ಅವರಲ್ಲಿ ವಿಚಾರಿಸಿದರೆ ಅನುಕೂಲಿಸಬಹುದೆಂದು ಗೊತ್ತಾಯಿತು. ಈ ಶೇಷಯ್ಯನು ಒಳ್ಳೆ ಆಸ್ತಿವಂತನಾಗಿದ್ದನು. ಯಾವ ವಿಧದಲ್ಲಿಯೂ ಮತ್ತೊಬ್ಬರ ಸಹಾಯವನ್ನು ಅಪೇಕ್ಷಿಸುತಿರ ಲಿಲ್ಲ. ಅರಮನೆಯಿಂದ ಸಂಬಳವೂ ನಡೆಯುತಿತ್ತು. ಈತನು ಹಣೆತುಂಬ ಕುಂಕುನುವನ್ನು ಇಟ್ಟುಕೊಳ್ಳುತಿದ್ದನು. ಈತ ನ ಆ ಕವಲಾ ತೀರುವಾಗ್ಗೆ ಹಗಲು ಚಾನಹೊತ್ತು ಆಗು ತಿತ್ತು. ತರುವಾಯ ಹೊರಗಿನ ಹಜಾರದಲ್ಲಿ ಬಂದು ಕೂತು ಕೊಂಡು ಬೇಕಾದವರಿಗೆ ಔಷಧಿ ಕೊಡುವುದು ಬೇಕಾದವರಿಗೆ ಮಂತ್ರ ಹಾಕುವುದು ಈ ಪ್ರಕಾರ ಮಾಡುತಿದ್ದನು. ಯಾರನು ನೆಗೂ ಹೋಗುತಿರಲಿಲ್ಲ. ಯಾರಿಂದಲೂ ಹಣ ತೆಗೆದುಕೊ ಳ್ಳುತಿರಲಿಲ್ಲ. ಸಾಯಂಕಾಲದ ಪೂರ್ಣ ಬಹಳ ಅದ್ಯತಾಸವಾ ಗಿ ಜರಗುತಿತ್ತು. ಆ ಕಾಲದಲ್ಲಿ ದೇವರ ನಿವೇದನಕ್ಕಾಗಿಯೂ