ಪುಟ:Duurada Nakshhatra.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಳೆ ಕತೆ ಕಾದಂಬರಿಗಳು ಕಡಿಮೆಗೆ ಸಿಗುತ್ವೆ, ಒಂದಿಷ್ಟು ತಂದು ಹಾಕಿದರಾಯ್ತು.”

“ಅಷ್ಟಲ್ಲ ಸಾರ್, ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ಮೂರಾಣಿ ಪುಸ್ತಕಗಳೂ ನಮ್ಮಲ್ಲಿಲ್ಲ. ವಿಜ್ಞಾನಕ್ಕೆ ಸಂಬಂಧಿಸಿ 'ಬಾಲಪ್ರಪಂಚ' ದಂಥ ಪುಸ್ತಕಗಳನ್ನೂ ನಾವು ಕೊಂಡ್ಕೋಬೇಕು.”

“ಇದೆಲ್ಲಾ ಹುಡುಗರಿಗೆ ರುಚಿಸುತ್ತೆ ಅಂತೀರಾ ?

“ಹುಡುಗರು ಅಂತಲ್ಲ ಸಾರ್-ನಾವೂ ಓದಿ ನೋಡ್ಬಹುದು.”

“ನಾವು ಓದೋದು! ಹ ಹ್ಹ! ಚೆನ್ನಾಗಿ ಹೇಳಿದ್ರಿ.”

“ಯಾಕ್ಕೂಡದು? ಮನುಷ್ಯ, ಸಾಮಾನ್ಯವಾಗಿ ಜೀವಮಾನವೆಲ್ಲ ವಿದ್ಯಾರ್ಥಿಯೇ ಅಲ್ಲವೇ ?"

“ಅದು ಬರೇ ಸಿದ್ದಾಂತ. ?? .

ಮಾತಿಗೆ ಮಾತು ಬೆಳೆದು ಗೇಣಿ ಅಕ್ಕಿಗೆ ನಷ್ಟವೊದಗಿತು. ವಾಚನಾಲಯಕ್ಕೆ ಮಿಾಸಲಿರುವ ಹಣವನ್ನು ಉಪಯೋಗಿಸುವ ವಿಚಾರ ಅಲ್ಲಿಗೇ ಉಳಿಯಿತು

.ಶಾಲೆಯಲ್ಲಿದ್ದ ಕಾಲ್ಚೆಂಡು ಹಳೆಯದು. ಅದಕ್ಕೆ ತೂತುಗಳು 'ಬಿದ್ದಾಗಲೆಲ್ಲ ಹತ್ತಿರದ ಸೈಕಲು ಅಂಗಡಿಯವನು 'ಪಂಚೇರು' ತೆಗೆದು ಕೊಡುತಿದ್ದ, ಈಗ ಆ 'ಪಂಚೇರು'ಗಳೆಲ್ಲ ಹೊಸ ಪಂಚೇರುಗಳೊಡನೆ ಮುಖ ತೋರಿಸಿದ್ದುವು.

ಹುಡುಗರ ಪರವಾಗಿ ಜಯದೇವ ಮುಖ್ಯೋಪಾಧ್ಯಾಯರೊಡನೆ ಮಾತನಾಡಿದ.

“ನಮ್ಮ ಫುಟ್ಬಾಲ್ಗೆ ಪೆನ್ಶನ್ ಕೊಡೋಕಾಲ ಬಂತು ಸಾರ್.”

ಆ ಪದಪ್ರಯೋಗ ವೆಂಕಟರಾಯರಿಗೆ ರುಚಿಸಲಿಲ್ಲ. ತಾವೂ ಹಳಬರಾಗುತಿದ್ದುದನ್ನು ಪೆನ್ಶನ್ ಎನ್ನುವ ಪದ ನೆನಪಿಗೆ ತಂದುಕೊಟ್ಟಿತು.

“ಈಗೇನ್ಬೇಕು ಜಯದೇವ್ ?

“ಹುಡುಗರು ಹೊಸ ಫುಟ್ಬಾಲು ಕೇಳ್ತೀದಾರೆ. ಈಗ ಒಂದು ವಾರದಿಂದ ಅವರು ಚೆಂಡಾಟ ಆಡಿಯೇ ಇಲ್ಲ.”

ವೆಂಕಟರಾಯರು ಸುಮ್ಮನಿದ್ದರು. ಕೊನೆಗೆ ಅಂದರು;