ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

252 ಕಥಾಸಂಗ್ರಹ-೫ ನೆಯ ಭಾಗ ಮಹಾವಿಷ್ಣುವು ಪ್ರತ್ಯಕ್ಷನಾಗಿ ಬಂದು ನನ್ನನ್ನು ಕೇಳಿದರೆ ಈ ಅಶಾಶ್ವತವಾದ ತ್ರಿಲೋಕಾಧಿಪತ್ಯವು ಒಂದು ಮಾತ್ರವೇ ಅಲ್ಲ. ನನ್ನ ಪತ್ನಿಪುತ್ರ ಪ್ರಾಣಗಳನ್ನಾ ದರೂ ಸಂತೋಷದಿಂದ ಆತನ ಪಾದಗಳಿಗೆ ಒಪ್ಪಿಸಿಬಿಡುವೆನು. ಇದಕ್ಕಿಂತಲೂ ಸಂತೋಷಕರವಾದ ಕಾರ್ಯವು ಯಾವುದೂ ಇಲ್ಲವೆಂದು ನಾನು ನಿಶ್ಚಯವಾಗಿ ನಂಬಿದ್ದೇನೆ ಎಂದು ಹೇಳಿ ತಿರಿಗಿ ವಾಮನನ್ನು ಕುರಿತು- ಎಲೈ ಮಹಾ ತೇಜಸ್ವಿ ಯಾದ ಬ್ರಹ್ಮಚಾರಿಯೇ ! ಈಗ ಮಹಾತ್ಮನಾದ ನೀನು ಈ ನನ್ನ ಯಾಗಶಾಲೆಗೆ ಯಾವ ಅಪೇಕ್ಷೆಯಿಂದ ಬಂದಿರುವಿ ? ನನ್ನ ಪ್ರಾಣಗಳೇ ಮೊದಲಾದ ಸಮಸ್ತವಸ್ತು ಗಳೂ ನಿನ್ನ ಅಧೀನವಾಗಿರುವುವು. ನಿನಗೆ ಬೇಕಾದುದನ್ನು ಸಂತೋಷದಿಂದ ಕೇಳ ಬಹುದು ಎಂದನು. ಆಗ ವಾಮನನನು-ಎಲೈ ಸುಗುಣಮಣಿಗಣಭೂಷಿತನಾದ ದೈತ್ಯಚಕ್ರೇಶ್ವರನೇ ! ಬ್ರಹ್ಮಚರ್ಯಾಶ್ರಮದಲ್ಲಿದ್ದುಕೊಂಡು ಸದಾಕಾಲದಲ್ಲೂ ಬ್ರಹ್ಮನಲ್ಲಿ ಅನುರಕ್ತತೆಯುಳ್ಳವನಾದ ನನಗೆ ನಿನ್ನ ಸಕಲವಿಧವಸ್ತುಗಳಿಂದ ಏನೂ ಪ್ರಯೋಜನವಿಲ್ಲ. ನಾನು ಇತರರ ಬಾಧೆಯಿಲ್ಲದಂತೆ ಸ್ವತಂತ್ರ ದಿಂದ ತಪಸ್ಸು ಮಾಡಿ ಕೊಂಡಿರುವುದಕ್ಕೋಸ್ಕರ ಈ ನನ್ನ ಪುಟ್ಟ ಹೆಜ್ಜೆಗಳಲ್ಲಿ ಮರು ಹೆಜ್ಜೆಗಳಷ್ಟು ಭೂಮಿ ಯನ್ನು ಮಾತ್ರ ನನಗೆ ಧಾರೆಯೆರೆದು ಕೊಟ್ಟರೆ ಸಾಕು. ಅದರಿಂದ ಸಂತೃಪ್ತನಾಗು ವೆನು ಎಂದು ಹೇಳಿದನು. ಆಗ ಬಲೀಂದ್ರನು ಪರಮಸಂತೋಷದಿಂದ ಕೂಡಿದವ ನಾಗಿ ತನ್ನ ಹೆಂಡತಿಯನ್ನು ಕರೆದು ಗಿಂಡಿಯಲ್ಲಿ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿ ತರಿಸಿ ತನ್ನ ಕೈಯಲ್ಲಿ ಶ್ರೀ ತುಲಸೀದಳವನ್ನು ಹಿಡಿದು ಕೊಂಡು ವಾಮ ನನ ಕೈಯ ಮೇಲೆ ತನ್ನ ಕೈಯನ್ನಿಟ್ಟು--ಇಗೋ, ನಿನ್ನ ಅಡಿಯಲ್ಲಿ ಮರಡಿ ಯಷ್ಟು ಭೂಮಿಯನ್ನು ಸತ್ಯವಾಗಿ ಕೊಟ್ಟಿದ್ದೇನೆ ಎಂದು ಹೇಳಿ, ನೀರನ್ನು ಬಿಡು ಎಂದು ತನ್ನ ಹೆಂಡತಿಗೆ ಹೇಳಲು ಆಕೆಯು ನೀರನ್ನು ಸುರಿಯುವುದಕ್ಕೆ ಪ್ರಯತ್ನಿಸಿ ದಾಗ ಶುಕ್ರಾಚಾರ್ಯನು ಆ ಗಿಂಡಿಯ ನೀರು ಬರುವ ದ್ವಾರದಲ್ಲಿ ಹೋಗಿ ಕುಳಿತು ಕೊಂಡುದರಿಂದ ನೀರು ಬೀಳದೆ ಹೋಯಿತು. ವಾಮನನು ಅದನ್ನು ಕಂಡು ಓಹೋ ! ಈ ಗಿಂಡಿಯ ನೀರು ಹೊರಗೆ ಬರುವ ಕನ್ನ ದಲ್ಲಿ ಏನೋ ಕಸವು ಸಿಕ್ಕಿ ಕೊಂಡಿ ರಬೇಕೆಂದು ಹೇಳಿ ಒಂದು ದರ್ಭೆಯನ್ನು ತೆಗೆದು ಕೊಂಡು ಅದರ ಕನ್ನ ದಲ್ಲಿ ಚುಚ್ಚಲು ಆ ದರ್ಭಾಗ್ರವು ಶುಕ್ರಾಚಾರ್ಯನ ಕಣ್ಣಿಗೆ ತಗುಲಿದುದರಿಂದ ಆತನದೊಂದು ಕಣ್ಣು ಕುರುಡಾಯಿತು. ಅನಂತರದಲ್ಲಿ ಆತನು ಹೊರಟು ಹೊರಗೆ ಬಂದನು. ನೀರು ಸರಿ ಯಾಗಿ ಬಿದ್ದಿತು. ಅನಂತರದಲ್ಲಿ ವಾಮನನು ತನ್ನ ಕುಬ್ಬ ರೂಪವನ್ನು ಬಿಟ್ಟು ಮಹತ್ತರವಾದ ತ್ರಿವಿಕ್ರಮ ರೂಪವನ್ನು ಧರಿಸಿ ಆಕಾಶಕ್ಕೂ ಭೂಮಿಗೂ ಒತ್ತು ಕೊಟ್ಟ ಹಾಗೆ ಬೆಳೆದು ಒಂದು ಅಡಿಯಿಂದ ಭೂಲೋಕವನ್ನೆಲ್ಲಾ ಅಳೆದು ಮತ್ತೊಂದಡಿಯಿಂದ ಊರ್ದ್ವಲೋ ಕವನ್ನೆಲ್ಲಾ ಅಳೆಯುವುದಕ್ಕೆ ತೊಡಗಿದಾಗ ಬ್ರಹ್ಮಾಂಡ ಕಟಾಹಕ್ಕೆ ಈತನ ಹೆಬ್ಬೆಟ್ಟಿನ ತುದಿಯುಗುರು ತಗುಲಿದುದರಿಂದ ನಿರ್ಮಲವಾದ ಗಗನ ಗಂಗೋದಕವು ಹೊರಟು ಬಂದಿತು. ಆಗ ಚತುರ್ಮುಖಬ್ರಹ್ಮನು ಶೀಘ್ರವಾಗಿ ಬಂದು ಆ ಉದಕವನ್ನೆಲ್ಲಾ ತನ್ನ ಕಮಂಡಲದಲ್ಲಿ ತುಂಬಿಕೊಂಡು ಸಮಸ್ತರಾದ ದೇವತೆಗಳ ಮೇಲೂ ಮುನಿಗಳ