ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 121 ಸುವರ್ಣಶಿಖರವೊಂದನ್ನು ಮಾತ್ರ ಕಿತ್ತು ತೆಗೆದು ಕೊಂಡು ಹೊರಟು ನಡೆಯುವ ಗಿರಿ ಯೋಪಾದಿಯಲ್ಲಿ ಬಂದು ನಳನ ಕೈಗೆ ಕೊಡಲು ಅದರಿಂದ ಉಳಿದಿದ್ದ ನಾಲ್ಕತ್ತು ಯೋಜನಗಳ ಸೇತು ಕಾರ್ಯವು ನಡೆದು ಸಂಪೂರ್ಣವಾಗಿ ಶತಯೋಜನಗಳ ವರೆಗೂ ಸೇತುವು ಕಟ್ಟಲ್ಪಟ್ಟು ಸಿದ್ಧವಾಯಿತು. ಆಗ ನಳನು ಶ್ರೀರಾಮನ ಸನ್ನಿಧಿಗೆ ಬಂದು ಎಲೈ ಕರುಣಾಜಲನಿಧಿಯೇ! ಸೇತು ಕಾರ್ಯವೆಲ್ಲಾ ಮುಗಿಯಿತು. ಪರೀಕ್ಷಾರ್ಥವಾಗಿ ದಯೆಮಾಡಿಸಬಹುದೆಂದು ಭಯಭರಿತ ಭಕ್ತಿಯಿಂದ ಬಿನ್ನವಿಸಿದನು, ಆಗ ಶ್ರೀರಾಮನು ಸಂತುಷ್ಟಾ೦ತರ೦ಗನಾಗಿ ವಾನರ ಚಕ್ರೇಶ್ವರನಾದ ಸುಗ್ರೀ ವನ ಹಸ್ತವನ್ನು ಹಿಡಿದು ಸಿಂಹಪೀಠದಿಂದಿಳಿದು ಸುರರು ಜಯ ಜಯ ಎನ್ನುತ್ತಿರಲು ಸುರಮುನಿಗಳು ಸ್ತುತಿಸುತ್ತಿರಲು ವಿದ್ಯಾಧರರು ಹೊಗಳುತ್ತಿರಲು ಸೂತಮಾಗಧರು ಬಿರುದನ್ನು ಹೇಳುತ್ತಿರಲು ಹನುಮಂತನು ಧೀರುರೇ ! ಪಾಯವಧಾರು ಎಂದು ಆರ್ಭಟಿಸುತ್ತಿರಲು ಸೇತುವಿನ ಬಳಿಗೆ ಬಂದು ನಿಂತು ಮೃತ್ಯುವು ದುಷ್ಟನಾದ ರಾವ ಣನನ್ನು ಎಳೆದುಕೊಂಡು ಹೋಗುವುದಕ್ಕೋಸ್ಕರ ನೀಡಿದ ಹಸ್ತ ವೋ ? ವಾನರ ಮಹಾ ವೀರರ ಅತುಲಪರಾಕ್ರಮ ವರ್ಣನೆಯಿಂದ ಕೂಡಿದ ಮಹಾಶಿಲಾಶಾಸನವೋ ? ರಾಘ ವನ ಕೀರ್ತಿನಿತಂಬಿನಿಯ ಬೈತಲೆಯೋ ? ರಾವಣರಾಂಚರನ ವಿಜಯಾರ್ಥವಾಗಿ ಹೊರಟಿರುವ ಶ್ರೀರಾಮನಿಗೆ ಕಾಲವೆಂಬ ಅಗಸನು ಒಪ್ಪ೦ದದಿಂದ ಹಾಸಿದ ನಿರ್ಮಲ ವಾದ ನಡೆಮಡಿಯೋ ? ದುರಹಂಕಾರ ದೂಷಿತರಾದ ನಕ್ತಂಚರರನ್ನು ನಿರ್ಮೂಲಮಾ ಡುವುದಕ್ಕೋಸ್ಕರ ತ್ರಿಜಗತ್ಪತಿಯಾದ ಭಗವಂತನು ಶ್ರೀರಾಮನಿಗೆ ಕೊಟ್ಟ ಮಹಾ ಖಡ್ಡ ಫಲಕವೋ ಎಂಬ ಹಾಗೆ ಪರಿಶೋಭಿಸುತ್ತಿರುವ ನಳನಿರ್ಮಿತವಾದ ಮಹಾ ಸೇತುವನ್ನು ನೋಡಿ ಆಶ್ಚರ್ಯಪಟ್ಟು ನಳನನ್ನು ಆಲಿಂಗಿಸಿಕೊಂಡು ಬಹಳವಾಗಿ ಮೆಚ್ಚಿ ಆ ನಳನಿಗೆ ಮು೦ದಣ ಇಂದ್ರ ಪದವಿಯನ್ನಿತ್ತು ಮನ್ನಿಸಿದನು. ಆ ಮೇಲೆ ರಘುಕುಲ ತಿಲಕನು ಲಂಕಾಪ್ರಯಾಣಕ್ಕೆ ಸನ್ನದ್ದನಾಗಲು ಆಗ ಕಪಿಬಲದ ಮುಂದಣಾರೈಕೆಯು ನೀಲನಿಗೂ ಹಿಂಗಡೆಯ ರಕ್ಷ ಣೆಯು ಸುಷೇಣನಿಗೂ ಮೇಲಾರೈಕೆಯು ನಳಶತಬಲಿ ಗವಾಕರಿಗೂ ಹಗೆಗಳು ಬಾರದಂತೆ ಎಚ್ಚರದಿಂದ ನೋಡುತ್ತಿರುವಿಕೆಯು ವಿಭೀಷಣ ನಿಗೂ ಶೂರಕ ಪಿಪರಿವಾರಪರೀತನಾದ ಶ್ರೀರಾಮನು ಗೋಧೂಳೀಲಗೃದಲ್ಲಿ ಲಂಕಾ ನಗರದ ಬಳಿಗೆ ಬಂದು ಪಾಳಯವನ್ನು ಬಿಡಿಸಿದನು. THE SLAUGHTER OF KUMBHAKARNA. ೭, ಕುಂಭಕರ್ಣ ಸಂಹಾರ. ಇತ್ತ ಲಂಕಾನಗರದಲ್ಲಿ ನಿಶಾಚರ ಚಕ್ರೇಶ್ವರನಾದ ರಾವಣನು ಲೋಕೋತ್ತರ ವಾದ ತನ್ನ ಓಲಗದ ಚಾವಡಿಯಲ್ಲಿ ರತ್ನ ಸಿಂಹಾಸನದ ಮೇಲೆ ಕುಳಿತು ಒಡೋಲಗ ವನ್ನು ಕೊಡುತ್ತಿರಲು ಆ ಸಮಯದಲ್ಲಿ ಬೇಹಿನವರು ಬಂದು ಅಡ್ಡಬಿದ್ದು- ಬೇಯಾ,