ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 149 ದಿಂದಲೂ ಬಾಧೆಯಿಂದಲೂ ಮೃತಿಯಿಂದಲೂ ಕಪಿವೀರರೆಲ್ಲಾ ಭೂಮಿಯಲ್ಲಿ ಬಿದ್ದೂ ರಗಿದರು. ಅನಂತರದಲ್ಲಿ ರಾವಣಾತ್ತ ಜನಾದ ಇಂದ್ರಜಿತ್ತು ಅಮೋಘವಾದ ಬ್ರಹ್ಮಾಸ್ತ್ರ ವನ್ನು ಪ್ರಯೋಗಿಸಿ ಹನುಮಂತನನ್ನು ಕಟ್ಟಿದನು. ಜಾಂಬವಂತನನ್ನು ಬಿಗಿದನು. ಸುಗ್ರೀವನನ್ನು ಸುತ್ತಿ ಕೆಡಹಿದನು. ಉಳಿದ ಸಮಸ್ತ ಕಪಿಸೇನಾಪತಿಗಳನ್ನು ಹೊಡೆದು ಭೂಮಿಯಲ್ಲಿ ಮಲಗಿಸಿದನು. ಆ ಬಳಿಕ ರಾಮಲಕ್ಷ್ಮಣರ ಬಳಿಗೆ ಬಂದು ಹೆಂಡತಿ ಯನ್ನು ಕಳೆದು ಕೊಂಡ ಅಳಲಿನಿಂದ ಮರುಳಾಗಿ ತಮ್ಮನೊಡನೆ ಕಪಿಗಳ ಬಳಗವನ್ನು ಕೊಲ್ಲಿಸಿದ ಕಲಿಯು ನೀನೆಯೋ ಎಂದು ನೆನದುರುವಂತೆ ಸಿಂಹಗರ್ಜನೆಯನ್ನು ಮಾಡಿ ಅಸ್ತ್ರಗಳನ್ನು ಪ್ರಯೋಗಿಸಿ ರಾಮಲಕ್ಷ್ಮಣರನ್ನು ನೆಲದಲ್ಲಿ ಒರಗಿಸಿ ಜಯಭೇರಿ ಯನ್ನು ಹೊಡಿಸುತ್ತ ಉಳಿದ ರಾಕ್ಷಸ ಸೇನಾಸಮೇತನಾಗಿ ಹೊರಟು ಲಂಕಾನಗರಕ್ಕೆ ಬರುತ್ಯ ಮುಂಚಿತವಾಗಿ ತಂದೆಗೆ ಒಸಗೆಯನ್ನು ಹೇಳಿಕಳುಹಿಸಲು ರಾವಣನು ಆ ಮಾತುಗಳನ್ನು ಕೇಳಿ ಸಂತೋಷದಿಂದ ಹಿಗ್ಗಿ ದವನಾಗಿ ಮಂತ್ರಿ ಸೇನಾಪತಿ ಪುರೋ ಹಿತ ಪರಿಜನ ಪುರಜನರೊಡನೆ ಕೂಡಿ ಸಕಲವಾದ್ಯಗಳ ಜಯಧ್ವನಿಯನ್ನು ಮಾಡಿಸುತ್ತ ಅರಮನೆಯಿಂದ ಹೊರಟು ಮಗನೆದುರಿಗೆ ಬಂದು ಅವನನ್ನು ಬಾಚಿ ತಬ್ಬಿಕೊಂಡು ಎಲೈ ಮಗನೇ ! ನನ್ನ ಕುಲರತ್ನವೇ ! ರಾಕ್ಷಸಕುಲಾಂಬುಜಮಿತ್ರನೇ ! ಅಸುರವೈರಿ ವಾ ತಜಲದ ಜಂಝಾಮಾರುತನೇ ಎಂದು ಆನಂದಬಾಷ್ಪವನ್ನು ಸುರಿಸಿದನು, ಮತ್ತು ಮಗನ ಮೈದಡವಿ-ಎಲೈ ಕುಮಾರನೇ ! ನೀನು ಮೊದಲು ನನ್ನೊಡನೆ ಆಡಿದ ಪ್ರತಿ ಜೋಕ್ತಿಗಳನ್ನು ಮರೆಯದೆ ವಿರೋಧಿವೀರರ ತಲೆಗಳನ್ನು ಚೆಂಡಾಡಿ ವಿಜಯಶೀಲನಾಗಿ ಬಂದೆಯಾ ಎಂದು ಪರಮಾನಂದಭರಿತನಾಗಿ ಮಗನೊಡನೆ ಕೂಡಿ ಪುರಪ್ರವೇಶವನ್ನು ಮಾಡಲು ಆಗ ಇಂದ್ರಜಿತ್ತಿನ ಮೇಲೆ ಪರನಾರಿಯರು ಪೂಮಳೆಗರೆದರು. ಬತ್ತದ ಅರಳು ಗಳು ಎರಚಲ್ಪಟ್ಟವು. ಅರಮನೆಯ ಬಾಗಿಲಲ್ಲಿ ದೈತ್ಯಸುಮಂಗಲೆಯರು ಮುಕ್ತಾ ರತ್ನಗಳ ಆರತಿಗಳನ್ನು ತಂದು ನೀರಾಜಿಸಿದರು. ಅನಂತರದಲ್ಲಿ ರಾವಣನು ತನ್ನ ಮಗ ನಿಗೆ ದಿವ್ಯತೈಲಾಭ್ಯಂಗವನ್ನು ಮಾಡಿಸಿ ಪರಿಮಳೋದಕದಿಂದ ಸ್ನಾನಂಗೆಯ್ಲಿ ಅಮ ಲ್ಯಾಂಬರಾಭರಣಗಳನ್ನು ಧರಿಸಿ ಅವನೊಡನೆ ಮೃಷ್ಟಾನ್ನ ಭೋಜನವನ್ನು ಮಾಡಿ ಗಂಧ ಪುಷ್ಪ ತಾಂಬೂಲಗಳನ್ನು ಕೊಡಿಸಿ ಮನ್ನಿಸಿ ಅವನನ್ನು ಮನೆಗೆ ಕಳುಹಿಸಿ ತಾನು ತನ್ನ ಅಂತಃಪುರವನ್ನು ಪ್ರವೇಶಿಸಿ ಪಟ್ಟದರಸಿಯಾದ ಮಂಡೋದರಿಯೊಡನೆ ಮಗನ ವಿಜಯ ವಾರ್ತಾಪ್ರಸಂಗವನ್ನು ಮಾಡಿ ಸಂತೋಷಿಸಿ ಆ ರಾತ್ರಿಯಲ್ಲಿ ಸುಖದಿಂದ ನಿದ್ರಿಸಿದನು. ಇತ್ತ ರಣಭೂಮಿಯೆಲ್ಲವೂ ನಿಶ್ಯಬ್ದವಾಗಿರುವುದನ್ನು ಕಂಡು ವಿಭೀಷಣನು ದಾರುಣವ್ಯಥಾಸರಿತಪ್ತನಾಗಿ ಕಣ್ಣೀರುಗಳನ್ನು ಸುರಿಸುತ್ತ ಪಾಪಿಯ ಮಾಯಾ ಯುದ್ಧದಲ್ಲಿ ರಾಘವೇಶ್ವರನ ಕಪಿಭಲಾಂಬುಧಿಯು ಬತ್ತಿ ತಲಾ! ಸುಗ್ರೀವ ನೀಲ ಜಾಂಬವತ್ತು ಷೇಣ ನಳ ಹನುಮದಾದಿಗಳು ಏನಾಗಿರುವರೋ ? ರಾಮಲಕ್ಷ್ಮಣರು ಹೇಗಿರುವರೋ ಎಂದು ಹೊರಟು ರಣರಂಗದಲ್ಲಿ ಹುಡುಕುತ್ತ ಬರುತ್ತಿರಲು ಅಲ್ಲಿ ಹೆಣಗಳನ್ನು ತಿಂದು ನೊರೆ ನೆತ್ತರಗಳನ್ನು ಕುಡಿದು ಕುಣಿಯುತ್ತಿರುವ ಪಿಶಾಚಾದಿ