ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಕಥಾಸಂಗ್ರಹ-೪ ನೆಯ ಭಾಗ ನೀಲನನ್ನು ತಿವಿದನು. ಹೀಗೆ ಯುದ್ಧ ವಾಗುತ್ತಿರಲು ಆ ಮೇಲೆ ರೋಷಕವಾಯಿ' ತಾಕ್ಷ ನಾದ ನಿಶಾಚರ ರಾಜನು ಶೀಘ್ರವಾಗಿ ತನ್ನ ರಥದಿಂದಿಳಿದು ಬಂದು ಶೂರನಾದ ನೀಲನನ್ನು ಒದೆದನು. ಆ ಪೆಟ್ಟಿಗೆ ರಾಮದೂತನ ಪ್ರಾಣಗಳು ಸ್ವಸ್ಥಾನವನ್ನು ಬಿಟ್ಟು ಚಲಿಸಲು ಅವನು ನೊಂದು ಮೆಲ್ಲನೆ ನೆಲದಲ್ಲಿ ಮಲಗಿದನು. ಆ ವೇಳೆಯಲ್ಲಿ ಧೂರ್ತನಾದ ರಾವಣನು ರಥದ ಮೇಲೆ ಹತ್ತಿಕೊಂಡು ರಾಮನ ಬಳಿಗೆ ಹೋಗು ವುದಕ್ಕೆ ಪ್ರಯತ್ನಿಸುತ್ತಿರಲು ಕೂಡಲೆ ಮಹಾ ವೀರನಾದ ನೀಲನು ಎಚ್ಚತ್ತು ತನ್ನ ಬಾಲವನ್ನು ಬೆಳಸಿ ರಥದ ಕುದುರೆಗಳ ಕಾಲುಗಳನ್ನೆಲ್ಲಾ ಬಿಗಿದು ಸೇದಿಕಟ್ಟಲು -- ಕುದುರೆಗಳು ಮುಗ್ಗರಿಸಿ ತಡವರಿಸಿದುವು. ಅದನ್ನು ಕಂಡು ರಾವಣನು ಸಾರಥಿಯ ಮೇಲೆ ಕೋಪಿಸಿಕೊಳ್ಳಲು ಅವನು ಕುದುರೆಗಳ ಕಡಿವಾಣಗಳನ್ನು ಸೇದಿ ಹಿಡಿದು ಚಾಟಿಯಿಂದ ಹೊಡೆದು ಎಷ್ಟು ವಿಧವಾದಿ ಅಬ್ಬರಿಸಿದಾಗ ಕುದುರೆಗಳು ಕಾಲುಗ ಳನ್ನು ಕಿತ್ತು ಮುಂದಕ್ಕೆ ಇಡಲಾರದಿರಲು ಕೂಡಲೆ ರಾ ವೆಣನು ಕೆಳಕ್ಕೆ ಬೊಗ್ಗಿ ನೋಡಿ ದುಷ್ಟ ಕಪಿಯು ಬಾಲದಿಂದ ಕಟ್ಟಿರುವುದನ್ನು ಕಂಡು ಈ ಕೋಡಗವು ಮಹಾ ದುಶ್ಲೇಷ್ಟೆಯುಳ್ಳುದೆಂದು ತನ್ನ ಕೈಯಲ್ಲಿದ್ದ ಕತ್ತಿಯಿಂದ ನೀಲನನ್ನು ಹೊಡೆ ದನು. ನೀಲನು ಆ ಪೆಟ್ಟನ್ನು ತಪ್ಪಿಸಿಕೊಂಡು ಆ ರಾವಣನ ಹೆಗಲಿನ ಮೇಲಕ್ಕೆ ನೆಗೆದು ಅವನ ಎಲ್ಲಾ ತಲೆಗಳ ಕಿರೀಟಗಳನ್ನು ಒಂದೊಂದಾಗಿ ತೆಗೆದು ತೆಗೆದು ನೆಲಕ್ಕೆ ಬೀಸಾಡಿ ರಥದ ಮಕಿಯ ಮರದ ಮೇಲಕ್ಕೆ ಹಾರಿ ತುದಿಗೆ ಹೋಗಿ ನೊಗ ದಲ್ಲಿ ಕಟ್ಟಿದ್ದ ಕುದುರೆಗಳ ಜತ್ತಿಗೆಗಳನ್ನು ಬಿಚ್ಚಿ ಹಾಕಿ ಕಿರೆಂದು ಕೂಗಿ ಕುದುರೆಗೆ ಇನ್ನೊಡಿಸಿ ಕೆನ್ನೆಗೆ ಹೊಡೆದು ಕಾಲಿನಿಂದೊದೆದು ಸಾರಥಿಯನ್ನು ಭೂಮಿಗೆ ಕೆಡಹಿ ಅಲ್ಲಿಂದ ರಾವಣನ ಬೆನ್ನಿಗೆ ಬಂದು ಅಮೋಘಾ ಸಮೂಹಪೂರಿತವಾದ ಬತ್ತಳಿಕೆ ಯನ್ನು ತೆಗೆದು ಬಿಸುಟು ಅವನ ಕೈಯಲ್ಲಿದ್ದ ಶಸ್ತ್ರವನ್ನು ಕಿತ್ತು ದೂರವಾಗಿ ಎಸೆದು ರಥ ಚಕ್ರಗಳನ್ನು ಕಳೆದು ದೂರವಾಗಿ ಹೋಗುವಂತೆ ಉರುಳಿಸಿ ಅಚ್ಚುಗಳನ್ನು ಮುರಿದು ರಾವಣನ ಮುಡುಹು ಮುಸುಡು ಎದೆ ಕೊರಳು ಕಂಕಳು ಮೊದಲಾದ ಸ್ಥಳಗಳಲ್ಲಿ ಹಾರಿಯಾಡುತ್ತ ಅವನನ್ನು ಕುರಿತು ಎಲಾ! ನೀನು ರಾಘವೇಂದ್ರನೊಡನೆ ಕಾದುವ ಪಟುಭಟನೇ ? ಛೇ ! ಖಳರ ಕುಲಗುರುವೇ ! ಹೋಗೆಂದು ತನ್ನ ದೀರ್ಘ ವಾದ ತೋಳನ್ನೆತ್ತಿ ಮುಷ್ಟಿಯಿಂದ ರಾವಣನ ತಲೆಯ ಮೇಲೆ ಹೊಡೆದು ಮುಖದೆ ದುರಿಗೆ ಬಂದು ಬಾಯ್ತಿ ಸಿದಣಕಿಸಿದನು. ವಾಯುಮಾರ್ಗ ದಲ್ಲಿ ವಿಮಾನಾರೂಢರಾಗಿದ್ದುಕೊಂಡು ನೋಡುತ್ತಿದ್ದ ದೇವ ವಾರಾಂಗನೆಯರು ಈ ನೀಲನ ಬಲು ಚೆಲ್ಲಾಟವನ್ನು ಕಂಡು ಘೋಳೆ೦ದು ಬಗೆಯ ಕಡಲಲ್ಲಿ ಬಿದ್ದು ಕಪಿವೀರನಾದ ನೀಲನ ಕೆಲಸವು ಲೇಸು ಲೇಸು ಎಂದು ಕೈದೋರಿ ಕೊಂಡಾಡಿದರು. ಮತ್ತೆ ನೀಲನು ಅಳಿಲುಗಳು ಕೋಟೆ ತೆನೆಗಳ ಮೇಲೆ ಓಡಿಯಾಡು ವಂತೆ ರಾವಣನ ತಲೆಗಳ ಮೇಲೆ ಹತ್ತಿ ಓಡಿಯಾಡುತ್ತ ಅವನ ಮೊಗ ಕಿವಿ ಮೂಗು ಗಳನ್ನು ಪರಚುತ್ತ ಕೈಗೆ ಸಿಕ್ಕದೆ ಛೇ ! ಹೆಂಗಳಾ ! ಬೀಳೆಂದು ರಾವಣನನ್ನು ಒದೆದನು. ಆಗ ಶೂರಪಕ್ಷಪಾತಿಯಾದ ರಾವಣನು ನೀಲನ ಪರಾಕ್ರಮಕ್ಕೆ ಮೆಚ್ಚಿ