ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಕಥಾಸಂಗ್ರಹ-೫ ನೆಯ ಭಾಗ ದ್ವರ್ತಮಾನ ವಿಷಯಗಳನ್ನೂ ಸ್ವರ್ಗಮರ್ತ್ಯಪಾತಾಳಾದಿ ಸಕಲಲೋಕಂಗಳಲ್ಲಿಯ ನಡೆಯುವ ವಿಷಯಗಳನ್ನೂ ಚೆನ್ನಾಗಿ ತಿಳಿದಂಥ ಮಹಾಜ್ಞಾನನಿಧಿಯು ಎಂದು ತಿಳಿದು ನಿನ್ನನ್ನು ಕುರಿತು ಒಂದು ಸಂಗತಿಯನ್ನು ಬಿನ್ನವಿಸಿಕೊಳ್ಳುತ್ತೇನೆ. ಅದೇ ನೆಂದರೆ- ಮಾಯಾವಿಯಾದ ವಿಷ್ಣುವು ಹಂದಿಯ ರೂಪವನ್ನು ಧರಿಸಿ ಬಂದು ನನ್ನ ತಮ್ಮ ನನ್ನು ಕೊಂದುಹಾಕಿದನು. ಆ ಮಹಾ ದುಃಖಪರಿಹಾರಾರ್ಥವಾಗಿ ನಾನು ಆತ ನನ್ನು ಕೊಂದುಹಾಕಬೇಕು ಎಂದು ನನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡು ಈ ವರೆಗೂ ಎಷ್ಟು ವಿಧವಾಗಿ ಎಲ್ಲೆಲ್ಲಿ ಹುಡುಕಿದಾಗೂ ಸಿಕ್ಕಲಿಲ್ಲ. ಈಗ ನಾನು ಸರೋಜಸಂಭವನ ವರಬಲದಿಂದ ಮರಣವಿಲ್ಲದವನಾಗಿದ್ದೇನೆ. ಅದು ಕಾರಣ ಮಹಾ ತ್ಯನಾದ ನೀನು ಶರಣಾಗತನಾದ ನನ್ನ ಮೇಲೆ ದಯೆಯಿಟ್ಟು ಆ ಕಪಟಿಯಾದ ವಿಷ್ಣುವು ಎಲ್ಲಿರುವನೆಂಬುದನ್ನು ಜ್ಞಾನದೃಷ್ಟಿಯಿಂದ ನೋಡಿ ತಿಳಿದು ಹೇಳಿದರೆ ನಿನ್ನ ದಯೆಯಿಂದ ಆತನನ್ನು ಕೊಂದು ನನ್ನ ಒಡಿಗೆಯನ್ನು ತೀರಿಸಿಕೊಂಡು ಸಂತೋಷದಿಂದಿರುವೆನು ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ಕಪಟಶಿವಯೋಗಿರೂಪಧಾರಿಯಾದ ವಿಷ್ಣುವು ಕೂಡಲೆ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ಗಳಿಗೆಯ ವರೆಗೂ ಧ್ಯಾನಿಸುವವನಹಾಗಿದ್ದು ಆ ಮೇಲೆ ನಿಧಾನವಾಗಿ ಕಣ್ಣುಗಳನ್ನು ತೆರೆದು ಆ ಹಿರಣ್ಯಕಶಿಪುವನ್ನು ನೋಡಿ ನಸು ನಗುತ್ತ-ಎಲೈ ದೈತ್ಯರಾಜನೇ ! ನೀನು ಹೇಳಿದಂತೆ ಆ ವಿಷ್ಣು ವು ಮಹಾಕಪಟಿಯೇ ಅಹುದು, ಆತನಿರುವ ಸ್ಥಳಗಳು ಮೂರು. ಅವು ಯಾವುವೆಂದರೆ ವೈಕುಂಠ ಕ್ಷೀರಸ ಮುದ್ರ ಸೂರ್ಯಮಂಡಲ ಇವುಗಳು. ಈಗ ನೀನು ವರಬಲದಿಂದ ಅವದ್ಧನಾಗಿರುವಿ ಎಂದು ತಿಳಿದು ವಿಶೇಷವಾಗಿ ನಿನ್ನ ಭಯದಿಂದ ಕೂಡಿದವನಾಗಿ ಈಗ ಆ ಮರು ಸ್ಥಳಗಳನ್ನೂ ಬಿಟ್ಟು ಬಂದು ನಿನ್ನ ಹೊಟ್ಟೆಯಲ್ಲೇ ಸೇರಿ ಕೊಂಡಿದ್ದಾನೆ ಅಂದನು. ಅದಕ್ಕೆ ಅಶ್ಚರ್ಯಯುಕ್ತ ನಾದ ಹಿರಣ್ಯಕಶಿಪುವು- ಎಲೈ ಮುನಿಪತಿಯೇ ! ಅವನು ನನ್ನ ಹೊಟ್ಟೆಯನ್ನು ಪ್ರವೇಶಿಸುವುದು ಹೇಗೆ ? ಈ ಮಾತು ಸುಳ್ಳಾಗಿ ತೋರುತ್ತಿರು ವುದಲ್ಲಾ ಎನ್ನಲು ಆ ಮೇಲೆ ಕಪಟಶಿವಯೋಗಿಯು ನಾನು ಎಂದಿಗಾದರೂ ಸುಳ್ಳು ಹೇಳತಕವನ, ಪಾರಮಾರ್ಥಿಕ ಜ್ಞಾನಿಯಾದ ನನಗೆ ಲೌಕಿಕರಲ್ಲಿ ನಿಕೃಷ್ಟ ರಿಗೆ ಯೋಗ್ಯವಾದ ಸುಳ್ಳಿನಿಂದ ಏನು ಪ್ರಯೋಜನವು ? ಇದೋ, ನಿನಗೆ ಪರೀಕ್ಷೆ ಯಿಂದ ತೋರಿಸಿಕೊಡುವೆನು ಎಂದು ಹೇಳಿ ಆ ಕ್ಷಣದಲ್ಲಿಯೇ ಅದೃಶ್ಯನಾಗಿ ಹಿರಣ್ಯ ಕಶಿಪುವಿನ ಹೊಟ್ಟೆಯನ್ನು ಹೊಕ್ಕು-ಎಲಾ, ಖಳನಾದ ರಕ್ಕಸನೇ ! ನಾನು ದುಷ್ಟನಾದ ನಿನ್ನನ್ನು ಕೊಂದುಹಾಕುವವರೆಗೂ ಮತ್ತೆಲ್ಲಿಯೂ ಇರದೆ ನಿನ್ನ ಹೊಟ್ಟೆಯಲ್ಲಿಯೇ ಇರುವೆನು. ನೀನು ಎಷ್ಟು ಪ್ರಯಾಸಪಟ್ಟು ಎಲ್ಲೆಲ್ಲಿ ಹುಡುಕಿ ದಾಗ್ಯೂ ನಾನು ನಿನಗೆ ಸಿಕ್ಕುವುದಿಲ್ಲವು. ನೀನು ನನ್ನನ್ನು ನೋಡಬೇಕಾದರೆ ನೀನೇ ನಿನ್ನ ಹೊಟ್ಟೆ ಯನ್ನು ಸೀಳಿಕೊಂಡು ನೋಡು. ಆಗ ನಾನು ನಿನಗೆ ಕಾಣಿಸಿ ಕೊಳ್ಳುವೆನುಮಹಾತ್ಮನಾದ ಶಿವಯೋಗಿಯು ಹೇಳಿದ ಮಾತು ಎಂದಿಗೂ ಸುಳ್ಳಾಗ ಲಾರದು. ನಿಜವೆಂದು ಸಂಪೂರ್ಣವಾಗಿ ನಂಬು ಎಂದು ಗರ್ಜಿಸಿ ಹೇಳಿದುದರಿಂದ