ಪುಟ:ಅನುಭವಸಾರವು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»

೨ ತಾನೆಯುಪಾದಾನವಾನಿಮಿತ್ತಾದಿಕನಿ | ಧಾನನಾಗುತ್ತೆ ರಚಿಸಿಕೆಡಿಪದ ಕೆಬೇ | ರೇನು ದೃಷ್ಟಾಂತವನೆಕೇಳು | ಒಂದುಪುಳು ತನ್ನನೂಲಿಂದೆವಲಯಾಕಾರ 1 ದಂದಮಂಮಾಡಿ ಕೆಡಿಸಿ ತಾನದನೆ ಮತ್ತೆಂದಿನಂತೆಸಗುತಿಹುದಂತೆ || ಮತ್ತೆ ನಖ ಕೇ ಶಾದಿಮೊತ್ತಂಗಳಿಗೆ ದೇವ | ದತ್ತನೇನೈಜವಾಗುವಾ ದಾನಂನಿ ಮಿತ್ತಕಾರಣನೆನಿಸುವಂತೆ ॥ ತನ್ನನವಗುಣಕೆ ಜೀವಂನಿಮಿತ್ತಾ ದಿಖೀ ! ಹಂನೋಡಲಾದತೆರದಿನೀ ಶಂತಾನ | ಭಿನ್ನ ದಿಂಮಾಳ್ಳನಖಿಳವನು | ಇಂತು ಸೃಜಿಸುವನೆನ 1 ಲೈಂತುಟವಿಕಾರತ್ತ ವಾಂತನೆನಲಿದಕೆ ಪರಿಹಾ ರಮಂಸದ ಪ್ಲಾಂತದಿಂದರಿಸುವೆನುಕೇಳು ರವಿಯಾಗಸದೊಳಿಹುದು | ಬುವಿಯೊಳಿಹುದಾಕಾಂತ | ವಿವರೆಡೆಯೆ ಳುಜಲಿಸುವಪಾವಕನಸಂ । ಭವಮಂವಿಚಾರಿಸುವುದಿಲ್ಲಿ | చెవి ೧೦ ೧೧ ܩܢܘ m ೭ ತಾನೇ ಉಪಾದಾನಕಾರಣನೂ ನಿಮಿತ್ತ ಕಾರಣನೂ ಆಗಿ ಲೋಕಗಳನ್ನು ನಿಕ್ಕಿಸಿ ನಾಶಮಾಡುವ ವಿಷಯದಲ್ಲಿ ದೃಷ್ಟಾಂತವನ್ನು ಹೇಳುತ್ತೇನೆ, ಕೇಳು. - ಜೇಡರ ಹುಳು ತನ್ನಲ್ಲಿರುವ ನೂಲಿನಿಂದ ಬಳೆಯಂತೆ ಗುಂಡಾದ ಆಕಾರವನ್ನು ಮಾಡಿ, ಅದನ್ನು ಕೆಡಿಸಿ ತಿರಿಗಿ ಮೊದಲಿನಂತೆ ಹಾಗೆಯೇ ಮಾಡುತ್ತದೆ. ೯ ಮತ್ತು ಒಬ್ಬ ಮನುಷ್ಯನು ತನ್ನ ಉಗುರು, ಕೂದಲು ಮೊದಲಾದವುಗಳಿಗೆ ಸ್ವಾಭಾವಿಕವಾಗಿ ಉಪಾದಾನಕಾರಣನೂ ನಿಮಿತ್ತ ಕಾರಣನೂ ಎನಿಸಿಕೊಳ್ಳುವ ಹಾಗೂ; ಜೀವನು ತನ್ನ ಒಂಭತ್ತು ಗುಣಗಳಿಗೆ ನಿಮಿತ್ತಕಾರಣನೂ ಉಪಾದಾನಕಾರಣನೂ ಆಗಿರುವ ಹಾಗೂ, ಈಶ್ವರನು ಅಭೇದವಾಗಿ ಈ ಪ್ರಪಂಚವನ್ನು ಮಾಡುವನು. ೧೧ ಈ ಪ್ರಕಾರವಾಗಿ ಸೃಷ್ಟಿಸುತ್ತಾನೆಂದರೆ ನಿರ್ವಿಕಾರತ್ವವನ್ನು ಹೇಗೆ ಧರಿಸಿದನೆಂಬಾ ಕ್ಷೇಪಬಂದರೆ ದೃಷ್ಟಾಂತವೂರ್ವಕವಾಗಿ ಸಮಾಧಾನವನ್ನು ತಿಳಿಸುತ್ತೇನೆ, ಕೇಳು, ೧೨ ಸೂರನು ಆಕಾಶದಲ್ಲಿರುವನು, ಸೂಯ್ಯ ಕಾಂತಶಿಲೆಯು ಭೂಮಿಯಲ್ಲಿರುವದು. ಇವೆರಡರ ನಡುವೆ ಉರಿಯುವ ಬೆಂಕಿಯ ಉತ್ಪತ್ತಿಯನ್ನು ಇಲ್ಲಿ ವಿಚಾರವಾಡ ಬೇಕು.