ಪುಟ:ಅನುಭವಸಾರವು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ » ಎಂದುಕೊಂಡಾಡುತಾನಂದಮಯಭಕ್ತಿರಸ 1 ದಿಂದೆ ನರನಾಗಿ ಗುರುವ ಚಿತ್ತೈಸನು ಇಂದು ಬಿನ್ನೈಸಿದನು ಪುತ್ತಾ? ೩ ಗುರುವೆ ನಾನಾಯುಕ್ತಿವೆರಸನಿದ್ರೆಯನರಿವು 1 ತಿರುತಿರ್ಪ್ಪನಾತ್ಮನೆಂದಿ ರಾಸುಪ್ತಿಯೊಳು | ಕರಣಂಗಳುಂಟೆ ಅರಿವಿಂಗೆ! ೪ ಕರಣಸಂಚಾರವಿರುತಿರೆ ನಿದ್ರೆಯಲ್ಲಿ ವೆಂದಿರಿ ಮತ್ತಾಭಾವವನು ಚಿ ಇರಿವೊಡಲ್ಲಿ | ಕರಣಂಗಳಲ್ಲದಹುದೆಂತು| ಚಿತ್ತು ನಿದ್ರೆಯನರಿವುದೆತ್ತಣದು ಸಾಧನದ | ಮೊತ್ತ ವಿಲ್ಲಾಗಿನಗುಳೆ ಯಾನೆನಹುದೋ ರುಮಿಹುದಕ್ಕೆಗತಿಯುಂಟೇ! ೬ ಅಲ್ಲಿ ಕರಣಾಪೇಕ್ಷೆಯಿಲ್ಲದಾಚಿತ್ರರಿಯ 1 ಬಲ್ಲುದೆನೆ ಸುಪ್ರಿಯಳದಲ್ಲಿ ದಾಸ್ಕರಣ/ ವಿಲ್ಲ ವೆಂದೆಂಬ ವಿಧಿಬೇಡಾ ! ೬ ತಾನೆ ಅರಿವುದು ಮತ್ತೆ ತಾನೆ ಮರೆವುದು ಮಗುಳ1 ತಾನದಂ ನೆನೆವು ದೆನಲು ಬುದ್ಧಾದಿಗುಣಿ, ತಾನಾದನಾತ್ಮನೆನಬೇಕು! m ೨ ಎಂಬದಾಗಿ ಹೊಗಳುತ್ತಾ ಆನಂದದಿಂದ ತುಂಬಿದ ಭಕ್ತಿರಸಭಾರದಿಂದ ನನ್ನನಾ ದ ಶಿಷ್ಯನು, ಗುರುವೇ- ಚಿತ್ತವಿಡು ಎಂದು ವಿಜ್ಞಾಪಿಸಿದನು. ೩ ಎಲೈ ಗುರುವೇ, ಆತ್ಮನು ನಿದ್ರೆಯನ್ನು ತಿಳಿಯುತ್ತಾನೆಂದು ಅನೇಕ ಯುಕ್ತಿಗಳೊ ಡನೆ ಬೋಧಿಸಿದಿರಷ್ಟೆ, ಸುಷುಪ್ತಿಯಲ್ಲಿ ಅರಿವಿಗೆ ಕರಣಗಳಿವೆಯೇ? • ಕರಣಗಳ ವ್ಯಾಪಾರವಿದ್ದರೆ ನಿದ್ರೆಯಲ್ಲವೆಂದು ಹೇಳಿದಿರಿ. ಅಂಥಾ ಭ ವವನ್ನು ಅರಿ ವು ತಿಳಿಯಬೇಕಾದರೆ ಕರಣಗಳಿಲ್ಲದೆ ಹೇಗಾಗುವದು? ೫ ಇಂದ್ರಿಯಗಳ ಸಮೂಹವೇ ಇಲ್ಲದಿರುವಾಗ, ಆತ್ಮವು ನಿದ್ರೆಯನ್ನು ತಿಳಿಯುವದು ಹೇಗೆ ? ತಿರಿಗಿ ಆ ಸ್ಮರಣೆ ತೋರುತ್ತಿರುವದಕ್ಕೆ ಮಾರ್ಗವಿದೆಯೇ ? ೬ ನಿದ್ರೆಯಲ್ಲಿ ಇಂದ್ರಿಯಗಳ ಅಪೇಕ್ಷೆಯಿಲ್ಲದೆ ಆತ್ಮವು ತಿಳಿಯಬಹುದು ಎಂದರೆ ಸುಷುಷ್ಯವಸ್ಥೆ ತೊಲಗಿದ ಹೊರತು ಅನೆನಹು ಉಂಟಾಗುವದಿಲ್ಲವೆಂಬ ನಿಯಮ ಅಗತ್ಯವಿಲ್ಲ. - ಆತ್ಮವು ತಾನೇ ತಿಳಿಯುವದು ತಾನೇ ಮರೆಯಾಗುವದು ತಿರಿಗಿ ತಾನೇ ಅದನ್ನು ಸ್ಮರಿಸುವದು ಎಂದು ಹೇಳಿದರೆ ಆತ್ಮನು ತಾನೇ ಬುದ್ದಿ ಮುಂತಾದ ಗುಣಗಳುಳ್ಳವ ನಾದನೆಂದು ಹೇಳಬೇಕು.