ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಅಧ್ಯಾ, ೨೨.] ಏಕಾದುಂಧರ. ಳೆಸುವವನು, ಆಗಿಡಕ್ಕೆ ಬೀಜದಿಂದ ಉತ್ಪತ್ತಿಯೆಂಬುದನ್ನೂ , ಕಾಲಪರಿಪಾ ಕದಿಂದ ಅದಕ್ಕೆ ನಾಶವೆಂಬುದನ್ನೂ ಚೆನ್ನಾಗಿ ನೋಡಿ ತಿಳಿಯಬಹುದು. ಆ ವೃಕ್ಷವನ್ನು ತಾನೇ ಬೆಳೆಸಿದವನಾದರೂ ಅದಕ್ಕಿಂತಲೂ ತಾನು ಬೇರೆ ಯೆಂಬುದನ್ನೂ ತಿಳಿಯಬಹುದಲ್ಲವೆ?ಅದರಂತೆಯೇ ತನ್ನ ದೇಹಕ್ಕೂ ಕೂಡ, ಪಂ ಚಭೂತಗಳ ಸಮುದಾಯವೆಂಬ ಬೀಜದಿಂದ ಉತ್ಪತ್ತಿಯೂ, ಕಾಲಪರಿಪಾ ಕದಿಂದ ನಾಶವೂ ಲಭಿಸುವುದೆಂದೂ, ಆ ವಿಕಾರಗಳನ್ನು ನೋಡ ತಕ್ಕವನುಮಾತ್ರ ತಾನೆಂದೂ ಗ್ರಹಿಸಬೇಕು. ಇದರಿಂದ ಆ ದೇಹಕ್ಕಿಂತ ಲೂ ತಾನು (ಆತ್ಮವು) ವಿಲಕ್ಷಣವಾಗಿ ಬೇರೆಯಾಗಿಯೇ ಇರುವನೆಂಬುದು ಸ್ಪಷ್ಟವಾಗುವುದು. ಹೀಗೆ ದೇಹಕ್ಕಿಂತಲೂ ಆತ್ಮವು ವಿಲಕ್ಷಣವೆಂಬುದನ್ನು ವಿವೇಚನೆಯಿಂದ ತಿಳಿಯಲಾರದವರು, ವಿಷಯಪ್ರವಣರಾಗಿ, ದೇಹವನ್ನೇ ಆತ್ಮವೆಂದು ರ್ಭಮಿಸಿ, ಸಂಸಾರಬದ್ಧರಾಗುವರು. ಸಂಸಾರರೂಪವಾದ ಶರೀರಪ್ರಾಪ್ತಿಯಲ್ಲಿಯೂ ಅವರವರ ಕಮ್ಮಾನುಸಾರವಾಗಿ ಉತ್ತಮ ಮಧ್ಯ ಮಾಧಮಜನ್ಮಗಳಂದು ಸಾತ್ವಿಕಕರಗಳನ್ನು ನಡೆಸಿದವರು ದೇವಶರೀ ರವನ್ನಾಗಲಿ, ಮಷಿಜನ್ನವನ್ನಾಗತಿ ಹೊಂದುವರು. ರಾಜಸಕಗಳಲ್ಲಿ ಬಿದ್ದವರು ದೈತ್ಯಜನ್ಯವನ್ನಾಗಲಿ, ಮನುಷ್ಯಜನ್ಯವಪ್ಪಾಗಲಿ ಹೊಂದು ವರು. ತಾಮಸ ಕಠ್ಯಗಳಲ್ಲಿ ನಿರತರಾದವರು, ಭೂತ, ಪಿಶಾಚ, ತಿರಗಾದಿ ಜನ್ಮಗಳನ್ನು ಹೊಂದುವರು. ಹೀಗೆ ಆಯಾಕರಾನುಸಾರವಾಗಿ ಮುಂದಿ ನ ಜನ್ಮಗಳನ್ನು ಹೊಂದುತ್ವ, ಸಂಸಾರಚಕ್ರದಲ್ಲಿ ಸುತ್ತುತ್ತಿರುವರು. ಗಮ ನಾಟಗಳಿಲ್ಲದೆ ನಿಶ್ಯನಾದ ಆತ್ಮವು ಸಂಸಾರದಲ್ಲಿ ಸುತ್ತುವನೆಂದರೆ ಹೇಗೆ” ಎಂದ. ಸೀನು ಶಂಕಿಸಬಹದು. ಆತ್ಮನ ಸಾಸಾರನೆಂಬುದೇ ನೋ ವಾಸ್ತವವೇ ! ಆದರೆ, ಮನುಷ್ಯನು ಮತ್ತೊಬ್ಬರು ಮಾಡುವ ಗಾವನರ್ತನಗಳನ್ನು ನೋಡುತ್ತಿರುವಾಗ, ತಾನೂ ಉತ್ಸಾಹದಿಂದ ತನ್ನ ಬುಟ್ಟಿಯಲ್ಲಿ ಹಾಡುವಂತೆಯೂ, ಕಣಿಯುವಂತೆಯೂ ಆಗುವುದುಂಟಲ್ಲವೆ ? ಅದರಂತೆಯೇ ಆತ್ಮನೂಕೂಡ, ತಾನು ನಿರ್ವ್ಯಾಪಾರನಾಗಿದ್ದರೂ, ಬುದ್ದಿ ಮೂಲಕಗಳಾದ ಚೇಷ್ಟಾಧರಗಳನ್ನು ನೋಡಿ, ಅವುಗಳನ್ನು ತಾನೇ ಆ ನುಕರಿಸುವಹಾಗೆ ಭಾವಿಸುವನು. ಕೂಳದನೀರು ಕಲಗಿದಾಗ ತೀರದಲ್ಲಿರ