ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 133 ಜಗಳವೇ ಸಾಧನವು ಎಂದು ನಾನು ನಿರ್ಧರಿಸಿರುವೆನು, ನೀನೂ ಅದೇ ರೀತಿಯಲ್ಲಿ ನಿಶ್ಚಯಿಸಿಕೊಂಡು ವಿರೋಧಿಗಳ ಪಡೆಯನ್ನು ಹೊಡೆದು ಕೆಡಹೆಂದು ವೀರೋಚಿತ ತಾಂಬೂಲವನ್ನು ಕೊಟ್ಟು ಅಪ್ಪಣೆಯನ್ನಿತ್ತನು. ಆಗ ಕುಂಭಕರ್ಣಾಸುರನು ತಾಂಬ ಲವನ್ನು ತೆಗೆದುಕೊಂಡು ಎದ್ದು ನಮಸ್ಕರಿಸಿ ರಾವಣನನ್ನು ಕುರಿತು- ಎಲೇ ಅಣ್ಣಾ! ನನ್ನ ಮಾತನ್ನು ಕೇಳು. ಒಪ್ಪುತ್ತಿರುವ ಕಪಿಬಲಾಂಬುಧಿಯನ್ನು ಕುಡಿದು ಬರಿದು ಮಾಡಿ ಆ ಕೋಡಗಗಳರಸನನ್ನು ಹಿಡಿದು ತಂದು ನಿನಗೊಪ್ಪಿಸುವೆನು. ಮರು ಲೋಕಗಳೂ ಮೆಚ್ಚಿ ಹೊಗಳುವಂತೆ ರಾಮನೊಡನೆ ಯುದ್ಧ ಮಾಡುವೆನು. ಮುಂದಾ ಗುವ ಜಯಾಪಜಯಗಳು ದೈವಾಧೀನವಾದುವುಗಳು, ಮತ್ತು ಅವು ನಿನ್ನ ಭಾಗ್ರಾ ನುಸಾರವಾದುವುಗಳು ಎಂದು ಹೇಳಿ ಲೋಕವನ್ನೆಲ್ಲಾ ತೀರಿಸುವುದಕ್ಕಾಗಿ ಹೊರಟ ಅಂಜನಾಚೆಲದಂತಿರುವ ತಮ್ಮನನ್ನು ನೋಡಿ ರಾವಣನು ಸಂತೋಷಸಂಭ್ರಮಯುಕ್ತ ನಾಗಿ ರತ್ನ ಖಚಿತವಾದ ವಿವಿಧಾಭರಣಗಳನ್ನು ತರಿಸಿ ತಾನೇ ತೊಡಿಸಿದನು. ಆ ಮೇಲೆ ಅ೦ಜನಗಿರಿಯು ಮಂದರಗಿರಿಯನ್ನು ಧರಿಸಿತೋ ಎಂಬಂತೆ ಕುಂಭಕರ್ಣನ ತಲೆಯಲ್ಲಿ ರತ್ನ ಕಿರೀಟವು ಝಗಝಗಿಸಿತು. ಕಾರ್ಮುಗಿಲೆಡೆಯಲ್ಲಿ ಇಂದ್ರಧನುಸ್ಸು ಮೂಡಿದಂತೆ ಖಳನ ಗಳದಲ್ಲಿ ಸಂಚರತ್ನ ಗಳ ಪದಕವು ಥಳಥಳಿಸಿತು. ಮೇರುಮಹೀಧರದ ಹಿಂದು ಮುಂದೆಸೆಗಳಲ್ಲಿ ಪರಿಶೋಭಿಸುವ ನೈದಿಲಾವರೆಗಳ ಗೆಳೆಯರಂತೆ ಸುರವಿರೋಧಿಯ ಕಿವಿಗಳಲ್ಲಿ ಮಾಣಿಕ್ಯ ವಜ್ರಗಳ ಕಡುಕುಗಳು ಒಪ್ಪಿದುವು. ಸಮುದ್ರಮಥನಕಾಲದಲ್ಲಿ ಮಂದರಗಿರಿಗೆ ಸುತ್ತಿದ ವಾಸುಕಿಯನ್ನು ಪಳಿಯುತ್ತಿರುವ ಕಾಲ್ಕಡಗಗಳು ರಕ್ಕಸನ ಕಾಲುಗಳಲ್ಲಿ ಮೆರೆದುವು. ಬಾಳದಲ್ಲಿ ಹೊಳೆಯುವ ಸಂಜೆಗೆಂಪಿನಂತೆ ಮೊಬ್ಬಿಗ ನುಡಿಯಲ್ಲಿ ಚಂದ್ರಗಾವಿಯ ವಸ್ತ್ರವು ಶೋಭಿಸಿತು. ಆ ಬಳಿಕ ರಾವಣಾನುಜನು ಸಕಲ ವಾದ್ಯಗಳ ರಭಸದೊಡನೆ ಕೂಡಿ ರಾಜಾ ಲಯವನ್ನು ಬಿಟ್ಟು ಹೊರಡಲು ತತ್ ಕ್ಷಣದಲ್ಲೇ ಅವನ ಮಹಾರಥವು ಬಂದು ಸಿದ್ದ ವಾಗಿ ನಿಂತಿತು. ಅದಕ್ಕೆ ಕಬ್ಬಿಣದ ಹೊರಜೆಗಳೂ ಉಕ್ಕಿನ ಅಚು ಗಳೂ ಲೋಹದ ಗಾಲಿಗಳೂ ಅದ್ಭುತವಾದ ಧ್ವಜಪತಾಕೆಗಳೂ ಒಪ್ಪುತ್ತಿದ್ದುವು. ಅದರ ಸಂಗತಿ ಯನ್ನೆಲ್ಲಾ ವಿವರಿಸಿ ಹೇಳುವುದಕ್ಕೆ ಚತುರ್ಮುಖನೇ ಸಮರ್ಥನು. ಆ ರಥವನ್ನು ಎಳೆ ಯುವುದಕ್ಕಾಗಿ ಹದಿನೆಂಟು ಸಾವಿರ ಮಹಾಗಜಗಳು ಕಟ್ಟಲ್ಪಟ್ಟಿದ್ದುವು. ಇಷ್ಟು ಹವ ಣಿಂದ ಬಂದು ನಿಂತಿರುವ ರಥವನ್ನು ನೋಡಿ ಕುಂಭಕರ್ಣನು ಸಂತೋಷಿಸಿ ಈ ರಥವ ನೈರಿದರೆ ಭೂಮಿಯು ನಡುಗಿ ನಗರದಲ್ಲಿ ವಿವಿಧವಾದ ಅಪಾಯಗಳುಂಟಾದಾವೆಂದು ತಾನು ರಥದೊಡನೆ ಕಾಲಿಂದ ನಡೆದು ಬರುತ್ತ ಪಟ್ಟಣದ ಏಳುಸುತ್ತಿನ ಕೋಟೆಯನ್ನು ದಾಟಿಬಂದು ಆ ರಥವನ್ನೇರಲು ಅದರ ತೊಂಭತ್ತಾರು ಗಾಲಿಗಳೂ ಚೀತ್ಕರಿಸು ತಿದ್ದುವು ಆಗ ಆ ಖಳನೊಡನೆ ಎರಡು ಕೋಟಿ ಬಹ್ಮ ರಾಕ್ಷಸರ ಬಳಗವೂ 'ಹತ್ತು ಕೋಟಿ ಶಾಕಿಸೀಡಾಕಿನಿಯರ ತಿಂತಿಣಿಯ ಅಸಂಖ್ಯಾತ ರಾಕ್ಷಸರ ಸಾಲೂ ಆನೆಗಳ ಹೊರಳಿಯ ತೇರುಗಳ ತೆರಳೆಯ ಕುದುರೆಗಳ ಜಂಗುಳಿಯ ಕಾಲಾಳುಗಳ ಸಂದ ಣಿಯ ನೆಲವದುರುವಂತೆ ನುಗ್ಗಿ ಬಂದಿತು. ಆಗ ಆ ರಥದ ಉಭಯಪಾರ್ಶ್ವಗಳಲ್ಲೂ