ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಕಥಾಸಂಗ್ರಹ-೪ ನೆಯ ಭಾಗೆ - ಬಿಸುಗದಿರನಟ್ಟಿ ದ ಕತ್ತಲೆಯ ಮೊತ್ತದಂತೆ ಮತ್ತೆ ಕಪಿಕಟಕವು ಸುಗಿದು ಮುರಿಯಲು ಕುಂಭಕರ್ಣನು ರಾಮನನ್ನು ಹುಡುಕುತ್ತ ಬರುತ್ತಿದ್ದನು. ಆಗ ಕಪಿ ಗಳ ಅರಸನಾದ ಸುಗ್ರೀವನು ಎಲ್ಲಿಗೆ ಹೋಗುತ್ತಿರುವಿಯೋ ? ಖಳನೇ ಇತ್ಯ ತಿರು ಗೆಲೋ ಎಂದು ಹೇಳುತ್ತ ಹೋಗಿ ಅವನ ಮುಂದೆಸೆಯಲ್ಲಿ ನಿಲ್ಲಲು ಆಗ ಜಾಂಬ ವಂತನು- ಹೆದರದಿರಿ, ಕಾಳಗದೊಳು ಮಡಿದವರಿಗೆ ಬಹು ಭೋಗ್ಯವಸ್ತು ಸಮಗ್ರ ವಾದ ಸ್ವರ್ಗವು ಸಿಕ್ಕುವುದು. ಪ್ರಾಣಭೀತಿಯಿಂದ ಕೊಳುಗುಳವನ್ನು ಬಿಟ್ಟೋಡಿದರೆ ನಿಮ್ಮ ಪ್ರಾಣಗಳು ಬ್ರಹ್ಮಕಲ್ಪದ ಪರ್ಯ೦ತರವೂ ಇರುವುವೇ ? ಹುಚ್ಚುತನವನ್ನು ಬಿಟ್ಟು ಹಿಮ್ಮೆಟ್ಟಿದೆ ಕಾದಿರಿ. ಸ್ವಾಮಿ ಕಾರ್ಯಹರಪ್ರಾಣರಾಗಿ ಧರ್ಮಕೀರ್ತಿಗಳನ್ನು ಗಳಿಸಿಕೊಳ್ಳಿರಿ ಎಂದು ಹೇಳುತ್ತಿರುವ ಮಾತುಗಳನ್ನು ಕೇಳಿ ತಿರುಗಿ ಕಪಿಸ್ತೋಮವು ಕೂಡಿ ಬಂದು ವಿಲಯಕಾಲದಲ್ಲಿ ಕಡಲುಬ್ಬಿ ಅಂಬರವನ್ನ ಡರುವಂತೆ ತರುಗಿರಿಗಳ ತಂಡದಿಂದ ಕುಂಭಕರ್ಣನನ್ನು ಹೂಳಲು ಮಹಾದ್ರಿಯು ಗುಂಗುರಿನ ಊರಿಕೆಗೆ ಮೈ “ಳುಕುವುದೇ ? ಮಂಜೇರಿದರೆ ನಡುವಗಲ ಮಾರ್ತಾಂಡ ಮಂಡಲವು ನಡುಗು ವುದೇ ? ಖಳನು ಮುನಿದು ಕಪಿವಾಹಿನಿಯನ್ನು ತೋರಿದನು. ಕೆದರಿದನು. ಬೀರಿದನು. ಕಚ್ಚಿದನು. ಕವರಿದನು. ಬಿಸುಟನು. ತುಳಿದನು. ಯಮಾಲಯಕ್ಕೆ ಹೋಗಿಸಿದನು. ಕಾಳೆಗಕ್ಕಳುಕದೆ ಕವಿಯುವವರನ್ನು ಬಡಿದು ಕಳವಳಕ್ಕೆ ಗುರಿಮಾಡಿದನು. ಹೊಂಚಿ ಹಳುಚುವ ಭಟರನ್ನು ಹಿಡಿದು ಹಿಡಿದು ಬಾಯೊಳಗಡಸಿದನು. ಆಗ ಕುಂಭಕರ್ಣನಿಂದ ನುಂಗಲ್ಪಟ್ಟ ಕಪಿಭಟರು ಅವನ ನವದ್ವಾರಮಾರ್ಗಗಳಿಂದಲೂ ಚಿಗಿಚಿಗಿದು ಹೊರಟು ಬರುತ್ತಿದ್ದರು. ಹಲ್ಲುಗಳಲ್ಲಿ ಸಿಕ್ಕಿ ಅಜಿಗಿಜಿಯಾದ ಸುಭಟರೂ ಹೆಜ್ಜೆ ಮೊಳಕಾಲ್ಕಿ ಳಕೈ ಮೊದಲಾದುವುಗಳ ಪೆಟ್ಟು ಗಳಿಂದ ಮೃತರಾದ ವೀರರೂ ಇಷ್ಟಾ ದರೆಂಬ ಸಂಖ್ಯೆಯು ಗೊತ್ತಿಲ್ಲ, ಏನು ಹೇಳುವುದು ? ಕುರಿಹಿಂಡಿನೊಳಗೆ ಮುನಿದಾಡುವ ತೋಳನೋ ? ಕರಿ ಘಟೆಗಳೊಡನೆ ಕಾದಾಡುವ ಮೃಗರಾಜನೋ ? ಹುಲ್ಲೆಗುಂಪಿನೊಳಗಣ ಹೆಬ್ಬುಲಿ ಯೋ ? ಸರ್ಪಗಳ ಬಳಗದಲ್ಲಿ ನುಗ್ಗಿದ ಗರುಡನೋ ಎಂಬಂತೆ ಖಳನು ತೋರಿದ ಕಡೆಗೆ ನುಗ್ಗಿ ಕಪಿಗಳ ತಂಡವನ್ನು ಬಡಿದು ದಿಂಡು ಗೆಡಹಿ ರಾಮನನ್ನು ಅರಸುತ್ತ ಮುಂದುವರಿದು ಬಂದು ಹೆಂಡತಿಯನ್ನು ಕಳೆದುಕೊಂಡು ನಿರ್ಲಜ್ಜೆಯಿಂದ ಕಪಿ ಗಳನ್ನು ಕೊಲ್ಲಿ ಸುತ್ತಿರುವ ಮಾನಹೀನನಾದ ರಾಮನೆಂಬವನು ನೀನೆಯೋ ಎಂದು ರಾಮನನ್ನು ಹಿಡಿಯುವುದಕ್ಕೆ ಬರುತ್ತಿರಲು ಹಾ ಕೆಲಸ ಕೆಟ್ಟಿತು. ಗತಿಯೇನೆಂದು ಕಳವಳದಿಂದ ಕೂಗುತ್ತಿರುವ ದೇವತೆಗಳ ಧ್ವನಿಯನ್ನು ಕೇಳಿ ಮಾರುತಿಯು ಕೋಪ ದಿಂದ ಕಿಡಿಗೆದರುತ್ತ ಓಡಿ ಬಂದು ಬೊಬ್ಬಿರಿದು ಖಳನು ತಿನುಕುವಂತೆ ತಿವಿದನು. ಕಾ೦ತವಬ್ರಹತಿಯಿಂದ ತಲೆಗೊಡಹುವ ಕುಲಗಿರಿಯಂತೆ ಒಲಿದೊಲೆದು ಕಣ್ಣಿಗೆ ಕವಿಯುವ ಕತ್ತಲೆಯಿಂದ ಕಳವಳಿಸಿ ಕೋಪೋದ್ರಿಕ್ತನಾದ ಕುಂಭಕರ್ಣನು ತನ್ನ ಶೂಲಾಯುಧದಿಂದ ಚಟುಲವಿಕ್ರಮನಾದ ವಾಯುಪುತ್ರನನ್ನು ತಿವಿಯಲು ಆಗ ಸಮರ ಸಮರ್ಥನಾದ ಅನಿಲಸಂಭವನು ಶೂಲವನ್ನು ಕೆಡೆನೂಕಿ ಬಾಯಿಯಲ್ಲಿ ಕೆನ್ನಿ