ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 231 ದರೂ ಹೇಳಿ ಕೊಡಕೂಡದು ಎಂದು ಎಲ್ಲರಿಗೂ ಕಟ್ಟು ಮಾಡಿಸಿ ತಾನೇ ತಾನಾಗಿ ಸರ್ವರಿಂದಲೂ ಓಲೈಸಲ್ಪಡುತ್ತ ಅಖಂಡೈಶ್ವರ್ಯಸಂಪನ್ನನಾಗಿದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ಸಭೆಯಲ್ಲಿ ಕುಳಿತು ಸರ್ವಲೋಕಪ್ರಜಾ ಸೇವ್ಯಮಾನನಾಗಿ ಹಿರಣ್ಯಕಶಿಪುವು ಮಹಾ ವ್ಯಸನಾಕ್ರಾಂತನಾಗಿ ನೀಚನಾದ ವಿಷ್ಣುವು ಮಹಾವೀರನಾದ ನನ್ನ ತಮ್ಮನನ್ನು ಕೊಂದನಲ್ಲಾ ಎಂದು ಹೇಳಿ ಅಂಥ ವಿಷ್ಣುವನ್ನು ಕೊಂದುಹಾಕದೆ ನಾನು ಬದುಕಿರುವುದೂ ಈ ಸಕಲ ಲೋಕದವರಿಂದ ಸೇವೆ ಮಾಡಿಸಿಕೊಳ್ಳುವುದೂ ಈ ನನ್ನ ತ್ರಿಲೋಕಾಧಿಪತ್ಯವೂ ವ್ಯರ್ಥವೆಂದು ಯೋಚಿಸಿ ಆ ನೀಚನಾದ ವಿಷ್ಣು ವು ಎಲ್ಲಿದ್ದರೂ ಅವನನ್ನು ಹಿಡಿದು ಕೊಂದುಹಾಕಬೇಕೆಂದು ನಿರ್ಧರಿಸಿ ತನ್ನ ಚತುರಂಗಬಲದೊಡನೆ ಕೂಡಿ ಹೊರಟನು. ಆಗ ಆತನ ಮಹಾ ಸೇನೆಯ ರಭಸಕ್ಕೆ ಹದಿನಾಲ್ಕು ಲೋಕಗಳೂ ಅಲ್ಲೋಲಕಲ್ಲೋಲಗಳಾಗಿ ಬೆದರಿ ಕಳವ ಳಿಸಿ ಕ್ಷೀರಸಮುದ್ರ ತೀರಕ್ಕೆ ಓಡಿಹೋಗಿ ಮಹಾವಿಷ್ಣುವಿನೊಡನೆ ದೂರನ್ನು ಹೇಳಿಕೊಂ ಡುವು. ಆಗ ಆತನು ಆ ದುಷ್ಟ ನಾದ ಹಿರಣ್ಯಕಶಿಪುವನ್ನು ತಿರುಗಿ ಅವನ ಪಟ್ಟಣಕ್ಕೆ ಹೋಗುವಂತೆ ಮಾಡುವೆನು. ನೀವು ಭಯಪಡಬೇಡಿರಿ. ನಿಮ್ಮ ನಿಮ್ಮ ಲೋಕಗಳಿಗೆ ಹೋಗಿ ಸ್ವಸ್ಥವಾಗಿ ಇರಿ ಎಂದು ಹೇಳಿ ನಂಬಿಕೆಯನ್ನು ಕೊಟ್ಟು ಕಳುಹಿಸಿ ಆ ಮೇಲೆ ತಾನು ಹಿರಣ್ಯಕಶಿಪುವು ಬರುವ ಮಾರ್ಗದಲ್ಲಿ ಮಾಯೆಯಿಂದ ಒಂದು ಋಷ್ಯಾಶ್ರಮ ವನ್ನು ಕಲ್ಪಿಸಿ ತಾನು ಜಡೆಯನ್ನು ಧರಿಸಿಕೊಂಡು ಕಂಠದಲ್ಲಿ ರುದ್ರಾಕ್ಷಿ ಮಾಲಿಕೆ ಗಳನ್ನೂ ತಲೆಗೆ ರುದ್ರಾಕ್ಷಿ ಗಳಿಂದ ಮಾಡಿದ ಕುಲಾವಿಯನ್ನೂ ಕೈಗಳಿಗೆ ರುದ್ರಾಕ್ಷಿ ಗಳಿಂದ ಮಾಡಿದ ಕಂಕಣಗಳನ್ನೂ ಧರಿಸಿಕೊಂಡು ಬಲಗೈಯ ಅನಾಮಿಕಾಂಗಳಿಗೆ ದರ್ಭೆಯ ಹುಲ್ಲಿನಿಂದ ಮಾಡಿದ ಪವಿತಾಂಗುಳೇಯಕವನ್ನು ಇಟ್ಟುಕೊಂಡು ಒಂದು ಕೌಪೀನವನ್ನು ಮಾತ್ರ ಧರಿಸಿ ಆಶ್ರಮದಲ್ಲಿರುವ ಒಂದು ನಿರ್ಮಲೊದಕಯುಕ್ತವಾದ ಕೊಳದ ದಡದಲ್ಲಿ ದೊಡ್ಡದಾದ ಹುಲಿಯ ಚರ್ಮವನ್ನು ಹಾಸಿ ಅದರ ಮೇಲೆ ಕುಳಿತು ಕೊಂಡು ಆ ಕೊಳದ ಪಾವಟಿಗೆಯ ಕಲ್ಲಿನ ಮೇಲೆ ಮಳಲಿನಿಂದ ಒಂದು ದೊಡ್ಡ ಲಿಂಗವನ್ನು ಮಾಡಿ ಆ ಲಿಂಗವನ್ನು ತುಂಬೆ ಹೂವುಗಳಿಂದಲೂ ಕಣಿಗಲೆ ಹೂವುಗಳಿಂ ದಲೂ ಉಮ್ಮತದ ಹೂವುಗಳಿಂದಲೂ ಬಿಲ್ವಪತ್ರಗಳಿಂದಲೂ ಗಂಧಾಕ್ಷತೆಗಳಿಂದಲೂ ಚೆನ್ನಾಗಿ ಪೂಜೆಮಾಡಿ ಶಿವಧ್ಯಾನವನ್ನು ಮಾಡುತ್ತ ಪಾಶುಪತಮತಸ್ಥನಾದ ಮಹಾ ಮುನಿಯಂತೆ ಬಾಹ್ಯ ವ್ಯಾಪಾರವನ್ನು ಮರೆತು ಚಿತ್ತೈಕಾಗ್ರತೆಯಿಂದ ಕುಳಿತು ಕೊಂಡಿ ದ್ದನು. ಅನಂತರದಲ್ಲಿ ಹಿರಣ್ಯಕಶಿಪುವು ತನ್ನ ಚತುರಂಗಬಲ ಸಮೇತನಾಗಿ ದಾರಿ ಯಲ್ಲಿ ಬರುತ್ತೆ ಈ ಕಪಟ ಶಿವಯೋಗಿಯನ್ನು ಕಂಡು-ಇವನಾರೋ ಮಹಾತ್ಮ ನಾದ ಶಿವಯೋಗಿಯಾಗಿ ಕಾಣುತ್ತಾನೆ ಎಂದು ಯೋಚಿಸಿ ತಾನು ಹತ್ತಿಕೊಂಡಿದ್ದ ಅಂದಣದಿಂದಿಳಿದು ಶೀಘ್ರವಾಗಿ ಆ ಕಪಟ ಶಿವಯೋಗಿಯ ಬಳಿಗೆ ಬಂದು ವಿಶೇಷ. ವಾದ ಭಯಭಕ್ತಿಯಿಂದ ಸಾಷಾಂಗ ಪ್ರಣಾಮವನ್ನು ಮಾಡಿ ಎದ್ದು ಕೈಮುಗಿದು ನಿಂತು ಕೊಂಡು-ಎಲೈ ಮಹಾನುಭಾವನೇ ! ಸರ್ವಜ್ಞನಾದ ನೀನು ಭೂತಭವಿಷ್ಯ