ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಾವತಾರದ ಕಥೆ 275 ಸಲು ಆಗ ಗೋಪಾಲಕರೆಲ್ಲರೂ ಈ ಕೃಷ್ಣನು ಮಹಾತ್ಮನೆಂದು ತಿಳಿದು ಭಯಭಕ್ತಿ Bಂದ ನಡೆದು ಕೊಳ್ಳುತ್ತಿದ್ದರು. ಅನಂತರದಲ್ಲಿ ಶರತ್ಕಾಲವು ಸಂಪ್ರಾಪ್ತವಾಗಲು ನಂದಗೋಪಾದಿ ಗೋಪಾಲಕ ರೆಲ್ಲರೂ ಕೂಡಿ ಈ ಶರತ್ಕಾಲದಲ್ಲಿ ಪ್ರತಿಸಂವತ್ಸರದಲ್ಲೂ ತಾವು ಮಾಡುತ್ತಿದ್ದ ಸದ್ದತಿಯ ಪ್ರಕಾರ ದೇವೇಂದ್ರನ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೂಡಿಸುತ್ತಿ ರು ಆಗ ಕೃಷ್ಣನು ಅವರ ಬಳಿಗೆ ಹೋಗಿ ಈ ರೀತಿಯಾಗಿ ಸಾಮಗ್ರಿಗಳನ್ನು ಏಕೆ ಕೂಡಿಸುತ್ತಿರುವಿರಿ ಎಂದು ಕೇಳಲು ಅದಕ್ಕೆ ಅವರು ಎಲೈ ಕೃಷ್ಣನೇ ! ಮಹಾತ್ಮ ನಾದ ದೇವೇಂದ್ರನು ಕಾಲಕಾಲಕ್ಕೆ ಮಳೆಗಳನ್ನು ಕರೆಯುವುದರಿಂದ ಕಾಡುಗಳಲ್ಲೂ ಗಿರಿಗಳಲ್ಲೂ ಬೇಕಾದ ಹಾಗೆ ಹುಲ್ಲು ನೀರುಗಳುಂಟಾಗಿ ನಮ್ಮ ದನಗಳು ಸೊಂಪಿನಿಂದ ಮೇಯು ಕುಡಿದು ವೃದ್ದಿ ಯಾಗುವುದರಿಂದಲ್ಲ ವೇ ನಾವು ಸುಖದಿಂದ ಬದುಕುವುದು? ಆದುದರಿಂದ ನಮಗೆ ಉಪಕಾರವನ್ನು ಮಾಡುತ್ತಿರುವ ದೇವೇಂದ್ರನನ್ನು ಆರಾಧಿಸು ತೇವೆ ಎಂದು ಹೇಳಿದರು. ಆ ಮಾತುಗಳನ್ನು ಕೇಳಿ ಕೃಷ್ಣನು ದೇವೇಂದ್ರನಿಂದ ನಮಗೇನು ಪ್ರಯೋಜನ ? ನಮ್ಮ ದನಗಳಿಗೆ ಹುಲ್ಲು ನೀರುಗಳನ್ನು ಕೊಡುತ್ತಿರು ವುದು ಈ ಗೋವರ್ಧನ ಪರ್ವತವು. ಅದು ಕಾರಣ ನಾವು ಈ ಪರ್ವತದ ಹಬ್ಬವನ್ನು ಮಾಡಬೇಕು ಎನ್ನಲು ಅವರೆಲ್ಲರೂ ಕೃಷ್ಣನ ಮಾತುಗಳಿಗೆ ಒಪ್ಪಿಕೊಂಡು ಆ ಗೋವ ರ್ಧನ ಪರ್ವತಕ್ಕೆ ಹಬ್ಬ ಮಾಡಿದುದರಿಂದ ದೇವೇಂದ್ರನು ಬಹಳವಾಗಿ ಕೋಪಿನಿ ಕೊಂಡು ಗೊಲ್ಲರ ಹಳ್ಳಿಗಳೆಲ್ಲಾ ತೇಲಿಹೋಗುವ ಹಾಗೆ ವಿಪರೀತವಾದ ಮಳೆಯನ್ನು ಕರೆಯುವುದಕ್ಕೆ ಆರಂಭಿಸಿದನು. ಆಗ ಕೃಷ್ಣನು ಗೋವರ್ಧನಗಿರಿಯನ್ನು ಮೇಲೆತ್ತಿ ಕೊಡೆಯಂತೆ ಹಿಡಿದು ಸ್ವಲ್ಪವೂ ಅಪಾಯವಿಲ್ಲದಂತೆ ಗೋವುಗಳನ್ನೂ ಗೊಲ್ಲರನ್ನೂ ಕಾಪಾಡಿದನು. ಅನಂತರ ಮಧುರಾನಗರದಲ್ಲಿ ರಾಜ್ಯಭಾರಮಾಡುತ್ತಿದ್ದ ಕಂಸಾಸುರನು ನಾರದಮಹಾಮುನಿಯ ಮುಖವಚನದಿಂದ ತನ್ನನ್ನು ಕೊಲ್ಲುವ ದೇವಕಿಯ ಎಂಟ ನೆಯ ಮಗನಾದ ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿರುವುದಾಗಿಯೂ ತಾನು ಕಳು ಹಿಸಿದ್ದ ಪೂತನಿಯೇ ಮೊದಲಾದ ರಾಕ್ಷಸರನ್ನು ಆತನೇ ಕೊಂದುಹಾಕಿದನೆಂಬುದಾ ಗಿಯ ಕೇಳಿ ಬಹಳ ಚಿಂತಾಕ್ರಾಂತನಾಗಿ ಹಗೆಯನ್ನು ಹೆಚ್ಚಾಗಿ ಬೆಳಿಸಬಾರದು, ಬಾಲ್ಯದಲ್ಲಿಯೇ ಕೊಂದು ಹಾಕಬೇಕೆಂದೆಣಿಸಿ ಅಕರನೆಂಬ ದೈತ್ಯನನ್ನು ಬೃಂದಾವ ನಕ್ಕೆ ಕಳುಹಿಸಿ ರಾಮಕೃಷ್ಣರನ್ನು ಮಧುರಾಪುರಕ್ಕೆ ಕರಿಸಿಕೊಂಡು ಕುವಲಯಾಪೀ ಡವೆಂಬ ಮಹಾಗಜವನ್ನೂ ಮುಪ್ಪಿ ಕಚಾಣೂರರೆಂಬ ಜಟ್ಟಿಗಳನ್ನೂ ಕರೆದು ಅವರನ್ನು ಕೊಂದುಹಾಕುವ ಹಾಗೆ ಹೇಳಿ ಕಳುಹಿಸಲು ಆಗ ರಾಮಕೃಷ್ಣರಿಬ್ಬರೂ ಮಲ್ಲ ಯುದ್ದಕ್ಕೆ ತೊಡಗಿ ಆ ಆನೆಯನ್ನೂ ಇಬ್ಬರು ಒಟ್ಟಿಗಳನ್ನೂ ಕೊಂದುಹಾಕಿದರು.

  • ಆ ಮೇಲೆ ಕೃಷ್ಣನು ಸಿಂಹಾಸನದ ಮೇಲೆ ಕುಳಿತಿರುವ ಕಂಸನ ಬಳಿಗೆ ಹೋಗಿ ಅವನ ಜುಟ್ಟು ಹಿಡಿದೆಳೆದು ಕೆಳಗೆ ಕೆಡುಕಿಕೊಂಡು ತನ್ನ ಕಾಲಿನಿಂದ ಒದೆದು ತುಳಿದ ಕೊಂದುಹಾಕಿ ಯಥಾಪ್ರಕಾರವಾಗಿ ಅವನ ತಂದೆಯಾದ ಉಗ್ರಸೇನನಿಗೆ ಯಾದವ