ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಕಥಾಸಂಗ್ರಹ-೪ ನೆಯ ಭಾಗ ನಪ್ಪಣೆಯಿಂದ ಸಿದ್ಧ ಮಾಡಿಟ್ಟಿದ್ದ ಅಂಬರವನ್ನು ತಿವಿಯುತ್ತಿರುವ ಮಾ೦ಸಗಳ ಒಟ್ಟ ಲುಗಳನ್ನೂ ತುಗಿರಿಗಳನ್ನು ಹೋಲುತ್ತಿರುವ ರಕ್ಕೊದನಗಳ ರಾಶಿಗಳನ್ನೂ ಅವುಗಳ ಬಳಿಯಲ್ಲಿ ಕಿರುಗುಡ್ಡಗಳಂತೆ ಬಿದ್ದಿರುವ ಕಜ್ಜಾಯಗಳ ಬಣಬೆಗಳನ್ನೂ ತರಿದು ಕೆಡಹಿದ ಕುರಿಕೋಣಗಳ ಗುಂಪುಗಳೆಂಬ ಬೆಟ್ಟಗಳನ್ನೂ ಗರಿಗಳನ್ನೂ ಹರಿದು ತಂದು ಹಾಕಿದ ಹಕ್ಕಿಗಳ ರಾಶಿಗಳನ್ನೂ ಇರಿದು ಕೆಡಹಿದ ನಾನಾ ಮೃಗಗಳ ಗುಡ್ಡೆಗಳನ್ನೂ ಹುರಿದು ಒಗ್ಗರಣಿಸಿದ ವಿಾನುಗಳ ಕುಪ್ಪೆಗಳನ್ನೂ ವಿವಿಧವಾದ ಗುಂಬಗಳಲ್ಲಿ ತುಂಬಲ್ಪಟ್ಟಿ ರುವ ಹಾಲೊಸರ್ತುಪ್ಪ ಜೇನು ತುಪ್ಪಗಳನ್ನೂ ಓಲೆ ತೆಂಗು ಮೊದಲಾದ ಫಲಾವಳಿಗೆ ಇನ್ನೂ ನೋಡಿ ಅವುಗಳನ್ನೆಲ್ಲಾ ಬಾಚಿ ಬಾಯ್ದ ಡಿಸಿ ತಿಂದು ಕುಡಿದು ಕ್ಷಣ ಕಾಲದಲ್ಲಿ ಮುಗಿಸಿಬಿಟ್ಟನು. ಅದರಿಂದ ಅವನಿಗೆ ಅರ್ಧಗ್ರಾಸವಾಯಿತು. ತಿರುಗಿ ಅವನು ಹೊಟ್ಟೆ ತುಂಬಲಿಲ್ಲವೆಂದು ಕೂಗಿಕೊಳ್ಳುತ್ತಿರಲು ರಾವಣನ ಮಂತ್ರಿಗಳು ಆ ವರೆಗೂ ಯುದ್ಧರಂಗದಲ್ಲಿ ಸತ್ತು ಬಿದ್ದಿದ್ದ ಹೆಣಗಳನ್ನು ತುಸಿ ಅವನ ಮು೦ದ ಟ್ಟಿ ಸಲು ಸುಲಿದ ಬಾಳೆಹಣ್ಣುಗಳನ್ನು ನುಂಗುವಂತೆ ಅವುಗಳನ್ನೆಲ್ಲಾ ನುಂಗಿ ಹಸಿವು ಆಡಗಲಿಲ್ಲವೆಂದು ಬೊಬ್ಬಿಡುತ್ತ ಹೊರಟು ಊರಿನ ಜನರನ್ನೆಲ್ಲಾ ತಿನ್ನುತ್ತ ಬರುತ್ತಿ ರಲು ಆಗ ಪಟ್ಟಣದಲ್ಲೆಲ್ಲಾ ಹಾಹಾಕಾರವುಂಟಾಯಿತು. ರಾವಣನು ಅದರ ಸಂಗತಿ ಯನ್ನು ಕೇಳಿ ಶೀಘ್ರವಾಗಿ ಶುಕ್ರಾಚಾರ್ಯನನ್ನು ಕರಿಸಿ-ಕುಂಭಕರ್ಣನ ಹಸಿವಡಗುವಂತೆ ಮಾಡು ನಡೆ ಅ೦ದನು. ಆತನು ಆ ಕ್ಷಣದಲ್ಲಿಯೇ ಬಂದು ಕುಂಭ ಕರ್ಣನಿಗೆ ಮಂತ್ರಸಿದ್ದವಾದ ಗುಳಿಗೆಯನ್ನು ಕೊಡಲು ಅವನು ಅದನ್ನು ತಿಂದು ಹಸಿವಡ ಗಿ ತೃಪ್ತನಾಗಿ ಧರನೆ ತೇಗಿದನು, ಅನಂತರದಲ್ಲಿ ಮಂತ್ರಿಗಳು ಸೇವಕರಿಂದ ಶ್ರೀಗಂ ಧಶೈಲದ ಕೊಪ್ಪರಿಗೆಗಳನ್ನು ತರಿಸಿ ಅವನ ಮೈಗೆಲ್ಲಾ ಲೇಪನಗೊಳಿಸಿ ಅಡಕೆಗಳನ್ನು ತಂದು ಅವನ ಮುಂದೆ ರಾಶಿ ರಾಶಿಯಾಗಿ ಸುರಿದು ಬಿಳಿಯ ವೀಳಯದೆಲೆಗಳ ಪಿಂಡಿ ಗಳ ಮಧ್ಯದಲ್ಲಿ ಸುಣ್ಣದ ಮುದ್ದೆಗಳನ್ನಿಟ್ಟು ತಂದು ಅವನ ಮುಂದಿರಿಸಿದರು. ಅವನು ಅವುಗಳನ್ನೆಲ್ಲಾ ತೆಗೆದು ಬಾಯಿಯಲ್ಲಿ ಹಾಕಿಕೊಂಡು ಅಗಿದು ನುಂಗಿ ಸ್ವಸ್ಥತೆಯಿ೦ ದ ಕುಳಿತನು. ಆ ಮೇಲೆ ಕುಂಭಕರ್ಣನು ನಡೆದು ಬರುವ ಅಂಜನಾದ್ರಿಯಂತೆ ಅಣ್ಣನಾದ ರಾವ ಣನ ಓಲಗದ ಚಾವಡಿಗೆ ಬಂದು ಆತನಿಂದ ಸನ್ಮಾನಿತನಾಗಿ ಸಿಂಹಾಸನಾರ್ಧದಲ್ಲಿ ಕುಳಿ ತುಕೊಂಡು ರಾವಣನನ್ನು ನೋಡಿ-ಎಲೈ ಅಗ್ರ ಜನೇ ! ಇದೇಕೆ ನಿನ್ನ ಮೊಗವು ಕಳೆ ಗುಂದಿರುವುದು ? ಈ ದುಮ್ಮಾನವು ಯಾರಿಂದುಂಟಾಯಿತು ? ನಿನ್ನ ಓಲಗದ ಚಾವಡಿ ಯು ಬಯಲಾಗಿರುವುದಕ್ಕೆ ನಿಮಿತ್ತವೇನು ? ವಿಭೀಷಣ ಮಹೋದರ ಪ್ರಹಸ್ತಾ ತಿಕಾಯ ದೇವಾಂತಕ ನರಾಂತಕಾದಿ ವೀರರೆಲ್ಲಾ ಎಲ್ಲಿ ಹೋದರು ? ರುದ್ರನು ನಿನ್ನ ನೆನಹಿಗೆ ಒದಗನೋ ? ಕಮಲಯೋನಿಯು ನಿನ್ನ ಅರಮನೆಯ ಬಾಗಿಲಲ್ಲಿ ರನೋ ? ವಾಯುವು ಪ್ರತಿನಿತ್ಯದಲ್ಲೂ ಬಂದು ನಿನ್ನ ಓಲಗದ ಚಾವಡಿಯ ಕಸಗಳನ್ನು ಗುಡಿಸನೋ ? ಅಗ್ನಿ ಯು ವಿಧೇಯತೆಯಿಂದ ಬಂದು ನಿನ್ನ ಪಾಕಶಾಲೆಯಲ್ಲಿದ್ದುಕೊಂಡು ಅಡಿಗೆಯ ಕೆಲಸ ವನ್ನು ಮಾಡನೋ ? ಬೋಳೆಯರೋಜನು ಬಂದು ನಿನಗೆ ತಿಥಿವಾರಗಳನ್ನು ಹೇಳ ವ ಥ