ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

278 ಕಥಾಸಂಗ್ರಹ-೫ ನೆಯ ಭಾಗ ರಹಸ್ಯಗಳನ್ನೂ ಉಪದೇಶಿಸಿ ಅವರಿಗೆ ಇಷ್ಟಾರ್ಥಗಳು ಸಿದ್ದಿ ಸುವಂತೆ ಆಶೀರ್ವಾದ ವನ್ನು ಮಾಡುತ್ತ ಅವರ ಶ್ರೇಯಸ್ಸನ್ನೇ ಪ್ರಾರ್ಥಿಸಿಕೊಂಡಿರುವೆವು ಎಂದು ಹೇಳಲು ಅವರು ಆ ಮಾತನ್ನು ಕೇಳಿ ಬಹು ಸಂತೋಷವುಳ್ಳವರಾಗಿ ಆತನಿಗೆ ಒಂದು ಮಠ ವನ್ನು ಕಟ್ಟಿಸಿ ಅಲ್ಲಿರಿಸಿ ಪ್ರಾತಃಕಾಲದಲ್ಲೂ ಸಾಯಂಕಾಲದಲ್ಲೂ ಆತನ ಬಳಿಗೆ ಹೋಗಿ ವಂದಿಸಿ ಬರುತ್ತಿದ್ದರು. ಆ ಮೇಲೆ ಆ ಕಪಟ ಬೌದ್ಧ ವೇಷಧಾರಿಯಾದ ಹರಿಯು ತಾನು ಚತುರೋಪಾಯದಿಂದ ಮಾಡಿದ ಬುದ್ಧ ಮತತತ್ವವನ್ನು ಅವರಿಗೆ ಬೋಧಿಸುತ್ತ ಲೌಕಿಕಯುಕ್ತಿಯಿಂದ ಈ ಶಾಸ್ತ್ರವೇ ಸತ್ಯವಾದುದು. ಇತರವಾದ ವೇದಶಾಸ್ತ್ರಗಳೆಲ್ಲಾ ಅಸತ್ಯವಾದುವುಗಳು ಎಂದು ಅವರು ಸಂಪೂರ್ಣವಾಗಿ ನಂಬುವ ಹಾಗೆ ಮಾಡಲು ಅವರು ಆ ಮಾತುಗಳಿಂದ ಮೋಹಿತರಾಗಿ ವೇದೋಕಕರ್ಮಗಳ ನ್ನೆಲ್ಲಾ ಬಿಟ್ಟು ಸೌಗತಧರ್ಮವನ್ನು ಕೈಕೊಂಡು ತಮ್ಮ ಮನಸ್ಸಿಗೆ ಬಂದ ಹಾಗೆ ನಡೆ ಯುವುದಕ್ಕೆ ಆರಂಭಿಸಿದರು ಆ ಮೇಲೆ ಈಶ್ವರನು ದೇವತೆಗಳಿಗೆ ಕೆಮವನ್ನುಂಟುಮಾಡುವುದಕ್ಕೆ ಇದು ಸಮಯವೆಂದು ಆ ರಕ್ಕಸರೊಡನೆ ಯುದ್ಯೋನ್ಮುಖನಾಗಿ ಭೂಮಿಯ ರಥವು, ಅದಕ್ಕೆ ಸೂರ್ಯಚಂದ್ರರೇ ಗಾಲಿಗಳು, ಚತುರ್ವೇದಗಳೇ ಕುದುರೆಗಳು, ಚತುರ್ಮು ಖಬ್ರಹ್ಮನೇ ಸಾರಥಿಯು, ಮೇರು ಪರ್ವತವೇ ಧನುಸ್ಸು, ಅದಕ್ಕೆ ಆದಿಶೇಷನೇ ಹೆದೆಯು, ವಿಷ್ಣುವೇ ಬಾಣವು, ಈ ರೀತಿಯಾಗಿ ಸಿದ್ಧ ಮಾಡಿಕೊಂಡು ಆ ಪುರತ್ರಯ ಗಳು ಸೇರುವ ಕಾಲವನ್ನು ನಿರೀಕ್ಷಿಸಿಕೊಂಡಿದ್ದು ಕಡೆಗೆ ರಾಕ್ಷಸ ಸಮೇತಗಳಾದ ಆ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ದೇವತೆಗಳಿಗೆ ಕ್ಷೇಮವನ್ನು೦ಟುಮಾಡಿದನು ತರುವಾಯ ಲೋಕದಲ್ಲಿ ಬಹು ಜನರು ಆಗ ವಿಷ್ಣು ಕಲ್ಪಿತ ಶಾಸ್ತ್ರಧರ್ಮವನ್ನು ಅನು ಸರಿಸಿ ನಡೆದುಕೊಳ್ಳುತ್ತ ಬೌದ್ದ ರೆನ್ನಿಸಿಕೊಂಡಿದ್ದಾರೆ. 9, THE TENTH OR HORSE INCARNATION. ೯, ಕಲ್ಕವತಾರದ ಕಥೆ. ಕಲಿಯುಗದ ಅಂತ್ಯದಲ್ಲಿ ಭೂಲೋಕದೊಳಗೆ ಮೈಚ್ಛ ಕಿರಾತ ಶಕ ಚೀಣ ರೆಂಬುವರೇ ಮೊದಲಾದ ದುಷ್ಟ ಜನರು ಪ್ರಭುಗಳಾಗಿ ಪ್ರಬಲಿಸಿ ವೇದಮಾರ್ಗವನ್ನೂ ಬ್ರಾಹ್ಮಣ್ಯವನ್ನೂ ಯಜ್ಞಾದಿ ಸತ್ಕರ್ಮಗಳನ್ನೂ ಕೆಡಿಸಿ ಚಾತಿಸಂಕರಗಳನ್ನು ಏಟು ಮಾಡುತ್ತ ಭೂಮಂಡಲವನ್ನೆಲ್ಲಾ ಆಕ್ರಮಿಸಿಕೊಳ್ಳುತ್ತ ಬರುತ್ತಿರಲು ಕೆಲ ಕಾಲದ ಮೇಲೆ ತಾಮ್ರಪರ್ಣಿ ಎಂಬೊಂದು ನದೀ ತೀರದ ಅಗ್ರಹಾರನಿವಾಸಿಯಾದ ಒಬ್ಬ ಬ್ರಾಹ್ಮಣನಿಗೆ ಮಹಾವಿಷ್ಣು ವು ಕುಮಾರಭಾವದಿಂದ ಅಶ್ವಮುಖನಾಗಿ ಅವತರಿಸಿ ಕಿಯೆಂಬ ಹೆಸರುಳ್ಳವನಾಗಿ ಕುದುರೆಯ ಮೇಲೆ ಏರಿಕೊಂಡು ಅಸಹಾಯ ಶೂರ ನಾಗಿ ಹೊರಟು ತನ್ನ ಕೈ ಕತ್ತಿಯಿಂದ ವೇದಮಾರ್ಗನಿಂದಕರಾಗಿ ದುಷ್ಟ ರಾದ ಜನರ ನ್ನೆಲ್ಲಾ ಕಡಿದು ಕೊಂದು ಶಿಷ್ಟ ರನ್ನೆಲ್ಲಾ ಸಂರಕ್ಷಿಸಿ ಧರ್ಮಸಂಸ್ಥಾಪನೆಯನ್ನು ಮಾಡಿ ಭೂಲೋಕವನ್ನು ಸಂರಕ್ಷಿಸುವನು.