ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಕಥಾಸಂಗ್ರಹ-೪ ನೆಯ ಭಾಗ ಹೇಳಿದ ಮೇಲೆ ನಾನು ಪರಿಗ್ರಹಿಸದೆ ಇರುವುದು ಹೇಗೆ ? ಮಹಾತ್ಮರಾದ ನಿಮ್ಮೆಲ್ಲರ ಆಜ್ಞಾನುಸಾರವಾಗಿ ಈ ಸೀತೆಯನ್ನು ಪುನಃ ಪ್ರರಿಗ್ರಹಿಸುವೆನು. ನಾನು ನಿಮ್ಮನ್ನು ಬೇಡಿಕೊಳ್ಳುವ ಎರಡು ವರಗಳು ಯಾವುವೆಂದರೆ..ನನ್ನ ನಿಮಿತ್ತವಾಗಿ ಈ ಯುದ್ಧರಂ ಗದಲ್ಲಿ ಪ್ರಾಣಗಳನ್ನು ತೊರೆದ ಕಪಿಗಳೆಲ್ಲಾ ಮಲಗಿದ್ದವರೇಳುವ ಹಾಗೆ ಜೀವಿಸಿ ಏಳ ಬೇಕು. ಮತ್ತು ಈ ಕಪಿನಾಯಕರು ಭೂಲೋಕದಲ್ಲಿ ಯಾವ ಸ್ಥಳದಲ್ಲಿ ವಾಸಮಾಡಿ ದಾದ್ರೂ ಅಲ್ಲೆಲ್ಲಾ ವಿವಿಧ ತರುಲತೆಗಳು ನಿರಂತರವೂ ಸಂಪೂರ್ಣವಾಗಿ ಫಲಭರಿತಗಳಾ ಗಿದ್ದುಕೊಂಡು ಈಕಪಿಪರಿವಾರಕ್ಕೆಲ್ಲಾ ಪರಮಾನಂದವನ್ನುಂಟುಮಾಡುತ್ತಿರಬೇಕೆ೦ ಬುವೇ ಎಂದು ಹೇಳಿದನು. ಅವರು ಅದೇ ರೀತಿಯಾಗಿ ವರವನ್ನು ಕೊಡಲು ತತ್ ಕ್ಷ ಣದಲ್ಲಿಯೇ ಸತ್ತು ಬಿದ್ದಿದ್ದ ಸಮಸ್ತ ಕಪಿಗಳೂ ಜೀವದೊಡನೆ ಕೂಡಿ ಎದ್ದು ಬಂದು ಶ್ರೀರಾಮನಿಗೆ ನಮಸ್ಕರಿಸಿದವು. ಆಗ ಈಶ್ವರನು ರಾಮನನ್ನು ನೋಡಿ-ಎಲೈ ರಾಮನೇ! ಇಲ್ಲಿ ನೋಡು. ನಿನ್ನ ತಂದೆಯಾದ ದಶರಥನು ಪ್ರಿಯ ಪುತ್ರನಾದ ನಿನ್ನನ್ನು ನೋಡುವ ಉದ್ದೇಶದಿಂದ ವಿಮಾನಾರೂಢನಾಗಿ ನಿನ್ನ ಬಳಿಗೆ ಬಂದಿದ್ದಾನೆ ಎಂದು ತೋರಿಸಲು ಆಗ ದಶರಥನು ಶೀಘ್ರವಾಗಿ ವಿಮಾನವನ್ನು ಕೆಳಗಿಳಿಸಿ ನಮಸ್ಕರಿಸುತ್ತಿರುವ ಸೀತಾ ರಾಮಲಕ್ಷ್ಮಣರನ್ನು ತೆಗೆದಾಲಿಂಗಿಸಿಕೊಂಡು ಮುದ್ದಾಡಿ ಆ ಮೇಲೆ ರಾಮನನ್ನು ಕುರಿತು- ಎಲೈ ಪ್ರಿಯನಂದನನೇ ! ಸತ್ಯವಂತನಾದ ನೀನು ಹದಿನಾಲ್ಕು ಸಂವತ್ಸರಗ ಳಿಂದಲೂ ವನವಾಸವನ್ನು ಮಾಡಿ ನನ್ನನ್ನು ಸತ್ಯ ಪ್ರತಿಜ್ಞನನ್ನಾಗಿ ಮಾಡಿದಿ ಇನ್ನು ಮೇಲೆ ನೀನು ಶೀಘ್ರವಾಗಿ ಅಯೋಧ್ಯಾನಗರಕ್ಕೆ ಹೋಗಿ ಪಟ್ಟಾಭಿಷಿಕ್ತನಾಗಿ ಅಮಿತ ವಿಕ್ರಮರಾದ ತಮ್ಮಂದಿರೊಡನೆ ಕೂಡಿ ರಾಜ್ಯ ಪರಿಪಾಲನೆಯನ್ನು ಮಾಡಿಕೊಂಡು ಸುಖವಾಗಿರು ಎಂದು ಆಶೀರ್ವಾದವನ್ನು ಮಾಡಿ ಅವರನ್ನು ಕಳುಹಿಸಿ ತಾನು ಇಂದ್ರಾದಿ ದೇವತೆಗಳೊಡನೆ ಕೂಡಿ ಅಲ್ಲಿಂದ ಹೊರಟುಹೋದನು. ಆಗ ಮಾತಲಿಯ ನಿಜಾಮಿಯಾದ ದೇವೇಂದ್ರನೊಡನೆ ರಾಮನ ವಿಕ್ರಮಾತಿಶಯವನ್ನು ಹೊಗಳುತ್ತ ಹೋದನು. ಆಗ ಅಮ೦ದಾನಂದಸಂದೋಹತುಂದಿಲನಾದ ರಘುನಂದನನು ಸೀತಾ ಲಕ್ಷ್ಮಣರೊಡನೆ ಕೂಡಿ ಸುಗ್ರೀವ ವಿಭೀಷಣಾದಿ ಕಪಿರಾಕ್ಷಸ ಸೇನಾಸಮೇತನಾಗಿ ತನ್ನ ಪಾಳಯಕ್ಕೆ ಬಂದು ಸಂತೋಷದಿಂದಿರುತ್ತಿದ್ದನು. 10. RAMA'S CORONATION. ೧೦. ರಾಮನ ಪಟ್ಟಾಭಿಷೇಕವು. ಅನಂತರದಲ್ಲಿ ಲಂಕಾರಾಜನಾದ ವಿಭೀಷಣನು ಸೀತಾಲಕ್ಷ್ಮಣ ಸಮೇತನಾಗಿ ಸಂತೋಷದಿಂದ ಕುಳಿತಿರುವ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಕೈ ಮುಗಿದು ನಿಂತು ಕೊಂಡು-ಜೀಯಾ, ಸರ್ವಪಾಣಿದಯಾಕರನೇ ! ಆಶ್ರಿತನಾದ. ನನ್ನಲ್ಲಿ ಕೃಪೆಮಾಡಿ ಲಂಕಾನಗರಕ್ಕೆ ಬಿಜಯ ಮಾಡಿ ಅಲ್ಪಶಕ್ತನಾದ ನಾನು ಮಾಡುವ W &