ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 239 M ಗುರುವು ನನಗೆ ಹೇಳಿಕೊಡುವುದೇನು ? ದಡ್ಡನಾದ ಇವನಿಂದ ನಾನು ಕಲಿತುಕೊಳ್ಳು ವುದೇನು ? ನನಗೆ ತಂದೆಯ ತಾಯಿಯ ಗುರುವೂ ಬಂಧುವೂ ಮಿತ್ರನೂ ಸಕಲೈ ಶ್ವರ್ಯವೂ ಸರ್ವೋಪನಿಷನ್ನಿ ತಂಬಿನೀಸೀಮಂತರತ್ನ ಪ್ರಾಯನಾದ ಶ್ರೀಹರಿಯೇ ಆಗಿ ರುವಲ್ಲಿ ನನಗೆ ಅನ್ಯರ ದ್ವೇಷದಿಂದಲೂ ಸ್ನೇಹದಿಂದಲೂ ಪ್ರಯೋಜನವೇನು ? ಅದು ಕಾರಣ ನಾನು ಯಾರು ಏನನ್ನು ಹೇಳಿದಾಗ ಕೇಳುವುದಿಲ್ಲ. ನನಗೆ ಒಬ್ಬರ ಲಕ್ಷ್ಯವೂ ಇಲ್ಲ ಎಂದು ನಿರ್ದಾಕ್ಷಿಣ್ಯದಿಂದ ಹೇಳಿಬಿಟ್ಟನು. ಆ ಮಾತುಗಳನ್ನು ಕೇಳಿದ ಕೂಡಲೆ ಹಿರಣ್ಯಕಶಿಪುವು ಮಹೋಗ್ರ ಕೋಪ ಕಂಪಿತಾಧರನಾಗಿ ಕಟಕಟನೆ ಹಡಿದು ಆರ್ಭಟಿಸಿ ಕಟುಕರನ್ನು ಕರಿಸಿ ಈ ಪಾಪಿಷ್ಠನಾದ ಹುಡುಗನನ್ನು ಶೀಘ್ರವಾಗಿ ಸ್ಮಶಾನಕ್ಕೆ ತೆಗೆದು ಕೊಂಡು ಹೋಗಿ ಕಡಿದು ಹಾಕಿ ಬನ್ನಿರೆಂದು ಅಪ್ಪಣೆಯನ್ನು ಕೊಡಲು ಆ ಕೂಡಲೆ ಕಟುಕರು ಆ ಪ್ರಹಾ ದನನ್ನು ಹಿಡಿದುಕೊಂಡು ಸ್ಮಶಾನಕ್ಕೆ ತೆಗೆದು ಕೊಂಡು ಹೋಗಿ ಅಲ್ಲೂ ಎಡೆಬಿಡದೆ ಹರಿನಾಮ ಕೀರ್ತನೆಯನ್ನು ಮಾಡುತ್ತಿರುವ ಪ್ರಹ್ಲಾದನನ್ನು ಹಿಡಿದು ಸಕಲ ವಿಧವಾದ ಆಯು ಧಗಳಿಂದಲೂ ಕಡಿದು ತಿವಿದು ಕೆತ್ತಿ ಕೆತ್ತಿದಾಗ ಆ ಆಯುಧಗಳೆಲ್ಲಾ ಮುರಿದು ತುಂಡು ತುಂಡಾಗಿ ಹೋದುವಲ್ಲದೆ ಅವನ ಶರೀರಕ್ಕೆ ಸ್ವಲ್ಪವೂ ಗಾಯವಾದರೂ ನೋವಾದರೂ ಆಗದೆ ಅವನು ಸಂತೋಷದಿಂದ ಹರಿಸ್ತೋತ್ರವನ್ನು ಮಾಡುತ್ತ ಇರು ವುದನ್ನು ನೋಡಿ ಅವರೆಲ್ಲರೂ ಆಶ್ಚರ್ಯಾನ್ನಿತರಾಗಿ ಹಿರಣ್ಯಕಶಿಪುವಿನ ಬಳಿಗೆ ಒಂದು ನಡೆದ ಸಂಗತಿಯನ್ನೆಲ್ಲಾ ಯಥಾಪ್ರಕಾರವಾಗಿ ತಿಳಿಸಿ ಈತನನ್ನು ಕೊಲ್ಲುವುದಕ್ಕೆ ಖಂಡಿತವಾಗಿ ನಮ್ಮಿಂದಾಗುವುದಿಲ್ಲವೆಂದು ಹೇಳಿದರು. ಆಗ ಹಿರಣ್ಯಕಶಿಪುವು ಭಯಾ ಶ ರ್ಯಯುಕ್ತನಾಗಿ-ನನಗೆ ಹಗೆಯಾದ ಹರಿಯೇ ಈ ಮಗನ ರೂಪದಿಂದ ಹುಟ್ಟಿ ರಬೇಕು. ಏಕೆಂದರೆ ಅವನು ಮಹಾಮಾಯಾವಿಯು ಈಗ ಇವನನ್ನು ಕೊಂದುಹಾಕಿ ಬಿಟ್ಟರೆ ಆ ವಂಚಕನಾದ ಹರಿಯನ್ನೇ ಕೊಂದುಹಾಕಿದ ಹಾಗೆ ಆಗುವುದು. ಇದ ರಲ್ಲಿ ಯಾವ ಸಂದೇಹವೂ ಇಲ್ಲ ಎಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ದೂತರನ್ನು ಕರಿಸಿ-ಇವನ ಕೈ ಕಾಲುಗಳನ್ನು ಕಟ್ಟಿ ಸಮುದ್ರ ಮಧ್ಯದಲ್ಲಿ ಹಾಕಿಬಿಡಿರಿ ಎಂದು ನೇಮಿಸಿದನು. ಅವರು ಅದೇ ಮೇರೆಗೆ ಅವನನ್ನು ಹಿಡಿದು ನೂಲು ಹಗ್ಗ ಗಳಿಂದ ಕೈ ಕಾಲುಗಳನ್ನು ಕಟ್ಟಿ ಬಿಗಿದು ಹೊತ್ತು ಕೊಂಡು ಹೋಗಿ ಸಮುದ್ರದಲ್ಲಿ ಹಾಕಿದರು. ಆ ಕೂಡಲೆ ಸಮುದ್ರರಾಜನು ಪ್ರತ್ಯಕ್ಷನಾಗಿ ಬಂದು ಪರಮಭಾಗವತ ಶಿರೋಮಣಿ ಯಾದ ಪ್ರಹ್ಲಾದನಿಗೆ ನಮಸ್ಕರಿಸಿ ಅನರ್ಥ್ಯವಾದ ರತ್ನಾಭರಣಗಳಿಂದ ಮನೋಹ ರವಾಗಿ ಅಲಂಕರಿಸಿ ತಾನೇ ಎತ್ತಿಕೊಂಡು ಬಂದು ದಡದಲ್ಲಿರುವ ರಾಕ್ಷಸದೂ ತರ ವಶಕ್ಕೆ ಕೊಟ್ಟು ಅದೃಶ್ಯನಾದನು. ಆ ಮೇಲೆ ಆ ರಾಜದೂತರು ಆ ಪ್ರಹ್ಲಾ ದನ ಮಾಹಾತ್ಯೆಗೆ ಬೆಚ್ಚಿ ಬೆರಗಾಗಿ-ಇವನು ಸಾಮಾನ್ಯ ಪ್ರರುಷನಲ್ಲದೇವಾಂಶ ಸಂಭೂತನಾದ ಪುರುಷನಾಗಿರುವನು. ಇದು ನಿಶಯವು ಎಂದು ಯೋಚಿಸಿಕೊಂಡು ಪ್ರಹ್ಲಾದನನ್ನು ಕರೆದುಕೊಂಡು ಹಿರಣ್ಯಕಶಿಪುವಿನ ಬಳಿಗೆ ಬಂದು ನಡೆದ ಸಂಗತಿಯ ನ್ನೆಲ್ಲಾ ವ್ಯತ್ಯಾಸವಿಲ್ಲದಂತೆ ಹೇಳಿದರು. ಹಿರಣ್ಯಕಶಿಪುವು ಆ ಮಾತುಗಳನ್ನು ಕೇಳಿ