ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 207 ರ್ದವಾಗಿ ಆರತಿಯನ್ನೆತ್ತಿ ಹಜಾರದಲ್ಲಿ ಮಂಚದ ಮೇಲೆ ಕುಳಿತಿರುವ ರಾಮಚಂದ್ರನ ಬಳಿಗೆ ಕರೆದು ಕೊಂಡು ಬಂದು ಅವನ ಬಲಗಡೆಯಲ್ಲಿ ಕುಳ್ಳಿರಿಸಿ ಅವರಿಬ್ಬರಿಗೂ ಸೊಡ ಶ್ರನ ಆರತಿಯನ್ನು ಎತ್ತಿದರು. ಅಷ್ಟರಲ್ಲಿಯೇ ವಸಿಷ್ಠ ಮಹರ್ಷಿಗಳು ಬಂದು ತಮ್ಮ ಕ್ರಿಮಂಡಲಿಯಿಂದ ವೇದ ಘೋಷಗಳನ್ನು ಮಾಡಿಸುತ್ತ ಸೀತಾರಾಮರನ್ನು ಓಲಗದ ಚಾವಡಿಗೆ ಕರೆದುಕೊಂಡು ಬಂದು ದಿವ್ಯ ಪೀಠಾಗ್ರದಲ್ಲಿ ಕುಳ್ಳಿರಿಸಿದರು. ತರುವಾಯ ವಸಿಷ್ಠರೇ ಮೋಲಾದ ಎಂಟು ಜನ ಮಹರ್ಷಿಗಳೂ ಅಷ್ಟವಸುಗಳೂ ಇಂದ್ರನನ್ನು ಹೇಗೋ ಹಾಗೆ ನಿರ್ಮಲವಾಗಿಯ ದಿವ್ಯ ಪರಿಮಳ ಯುಕ್ತವಾಗಿಯೂ ಇರುವ ಪವಿತೋದಕದಿಂದ ಸೀತಾರಾಮರಿಗೆ ಅಭಿಷೇಕವನ್ನು ಮಾಡಿದರು. ಆ ಮೇಲೆ ಮುನಿ ಪತಿಗಳೂ ಮಂತ್ರಿಗಳೂ ದಳವಾಯಿಗಳೂ ಜ್ಞಾನವೃದ್ದ ರೂ ವಯೋವೃದ್ದರೂ ಆದ ಪುರ ಜನರೂ ಇವರೇ ಮೊದಲಾದ ಸರ್ವಜನರೂ ಚತುಸ್ಸ ಮುದಕಗಳಿಂದಲೂ ಗಂಗಾ ದಿಮಹಾನದಿಗಳ ಪುಣೋದಕಗಳಿಂದಲೂ ಅಖಿಲೌಷಧೀರಸಗಳಿಂದಲೂ ಕ್ರಮವಾಗಿ ಆ ಭಿಷೇಕವನ್ನು ಮಾಡಿ ಹರಸಿದರು. ಪೂರ್ವಕಾಲದಲ್ಲಿ ಸರೋಜಸಂಭವನು ತಾನೇ ದಿವ್ಯ ರತ್ರ ಮಯವಾದ ಮಹಾಕಿರೀಟವನ್ನು ನಿರ್ಮಿಸಿ ರಘುವಂಶದ ರಾಜರಿಗೆ ಆದ್ಯನಾದ ವೈ. ವಸ್ವತಮನುವಿಗೆ ಕೊಟ್ಟಿದ್ದ ಅಸದೃಶವಾದ ಕಿರೀಟನ್ನು ಪುರೋಹಿತರಾದ ವಸಿಷ್ಠರು ಸಂತೋಷದಿಂದ ತೆಗೆದು ಕೊಂಡು ಬಂದು ರಾಮನ ಶಿರಸ್ಸಿಗೆ ಧರಿಸಿದರು. ಆಗ ಶತ್ರು ೯ನು ಶ್ವೇತಛತ್ರವನ್ನು ಹಿಡಿದು ನಿಂತನು. ಕಪಿರಾಕ್ಷಸರಾಜರಾದ ಸುಗ್ರೀವ ವಿಭೀಷ ಣರು ಶ್ವೇತ ಚಾಮರಗಳನ್ನು ಹಿಡಿದುಕೊಂಡು ಪಟ್ಟಾಭಿಷಿಕ್ತನಾದ ಶ್ರೀರಾಮನ ಉಭಯ ಪಾರ್ಶ್ವಗಳಲ್ಲೂ ಬೀಸುತ್ತಿದ್ದರು. ಆಗ ವಾಯುವು ದೇವೇಂದ್ರನಿಂದ ಪ್ರೇರಿ ತನಾಗಿ ದಿವ್ಯವಾದ ಮುತ್ತುಗಳ ಕಂಠಮಾಲಿಕೆಯನ್ನು ತೆಗೆದುಕೊಂಡು ಬಂದು ಶ್ರೀರಾಮಚಂದ್ರನ ಕೊರಳಿಗೆ ಹಾಕಿದನು. ಆಗ ದೇವಲೋಕದಲ್ಲಿ ಸುರದುಂದುಭಿ ಗಳು ಮೊಳಗಿದುವು. ಗಂಧರ್ವಾದಿ ದೇವಗಾಯಕರು ದಿವ್ಯಗಾನವನ್ನು ಮಾಡಿ ಸಂತೋ ಷಿಸಿದರು. ಅಪ್ಪರಾಂಗನೆಯರು ನರ್ತಿಸಿ ನಲಿದಾಡಿದರು. ದೇವತೆಗಳು ಪೂಮಳೆಯನ್ನು ಕರೆದರು. ಶೈತ್ಯ ಸೌರಭ್ಯ ಮಾಂದ್ಯ ಯುಕ್ತವಾದ ವಾಯುವು ಬೀಸಿತು. ದಿಕ್ಕುಗಳೆಲ್ಲಾ ನಿರ್ಮಲವಾದುವು. ಸುಜನರ ಹೃದಯಗಳೆಲ್ಲವೂ ಪ್ರಸನ್ನತೆಯನ್ನು ಹೊಂದಿ ಆನಂದ ಯುಕ್ತಗಳಾದುವು. ಪುಣ್ಯಕರ್ಮಲತೆಯು ಕುಡಿವಡೆದು ಹಬ್ಬಿತು. ಸತ್ಯವು ನಿಶ್ಚಂಚಲತೆಯನ್ನೊಳಗೊಂಡಿತು. ದೇಶವೆಲ್ಲವೂ ನಿರ್ಭಯದಿಂದೊಡಗೂಡಿತು. ವೇ ದಶಾಸ್ತ್ರಗಳ ಪ್ರಚಾರವು ಅಭಿವೃದ್ದಿಗೆ ಬಂದಿತು. ವಿಶೇಷವರ್ಣನೆಯಿ೦ದೇನು ? ರಘುಕುಲದ ಕೀರ್ತಿಚಂದ್ರನು ಪ್ರಸಿದ್ದ ಚಂದ್ರನನ್ನು ಹೊಯ್ದ ಪ್ಪಳಿಸಿ ಕಯಕ್ಕೆ ಗುರಿಮಾಡಿದನು. ಸರ್ವಲೋಕವೂ ಆನಂದಾಂಬುಧಿಯೊಳಗೆ ಮುಳುಗಿತು. ಅನಂ ತರದಲ್ಲಿ ಶ್ರೀರಾಮಚಂದ್ರನು ಚತುರ್ವಣ್ರದವರಿಗೂ ದೀನಾನಾಥವಿಷನ್ನರಿಗೂ ಕುರುಡ ಕುಂಟರೇ ಮೊದಲಾದ ಅ೦ಗಹೀನರಿಗೂ ಅಪರಿಮಿತವಾದ ಧನಕನಕವಾ ಭರಣಾದಿಗಳನ್ನು ಕೊಟ್ಟು ದಣಿಸಿದನು. ಆಗ ಸಂತೋಷಯುಕ್ತನಾದ ಶ್ರೀರಾಮ ಚ೦ದ್ರನು ತಮ್ಮನಾದ ಲಕ್ಷ್ಮಣನನ್ನು ನೋಡಿ-ಎಲೈ ಪ್ರಿಯಸಹೋದರನೇ ! ನೀನು