ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 135 ಮುಖ್ಯರಾದ ಪ್ರಬಲ ಕಪಿನಾಯಕರು ಗಿರಿತರುಗಳನ್ನು ಸಂವರಿಸಿಕೊಂಡು ಬಂದು ನಿಂತರು. ಅನಂತರದಲ್ಲಿ ಕಪಿವೀರರು ಮೃತ್ಯು ದೇವತೆಯನ್ನು ಕೆಣಕುವಂತೆ ಗಿರಿತರುಗ ಳನ್ನು ಕಿತ್ತು ತಂದು ಆ ಕುಂಭಕರ್ಣನ ನೆತ್ತಿಯ ಮೇಲೊಟ್ಟುತ್ತಿದ್ದರು. ಕುಂಭ ಕರ್ಣನು ಮಂದಹಾಸದಿಂದ ಕೂಡಿ ತನ್ನು ಸಿರ್ಗಾಳಿಯಿಂದ ಆ ಕಪಿವೀರರನ್ನೂ ಅವರೆಸೆ ಯುವ ಗಿರಿತರುಗಳನ್ನು ಊದಿ ದಿಗಂತಕ್ಕೆ ಹಾರಿಸಿಬಿಟ್ಟನು. ನುಗ್ಗಿ ದಕಡೆಯಲ್ಲಿ ಕೋಟಿ ಸಂಖ್ಯೆ ಯ ವಾನರಗಳನ್ನು ಇಕ್ಕಿದನು. ನಾಲಿಗೆಯನ್ನು ಚಾಚಿ ಶತಕೋಟಿ ಸಂಖ್ಯೆಯ ವಾನರರನ್ನು ನೆಕ್ಕಿದನು. ಕೈಗಳಿ೦ದ ಬಾಚಿ ಬಾಚಿ ನ್ಯರ್ಬುದಸಂಖ್ಯೆಯ ಕೋತಿಗಳನ್ನು ಮುಕ್ಕಿದನು. ಮಹಾರ್ಬದಸಂಖ್ಯೆಯ ಕೋಡಗಗಳನ್ನು ನುಂಗಿ ದನು. ಹೇಳತಕ್ಕುದೇನು ? ಇದು ರಣರಂಗವಲ್ಲಿ, ಕುಂಭಕರ್ಣನ ಭೋಜನ ಶಾಲೆಯು, ಬಡಗೋತಿಗಳ ಪಾಡನ್ನು ಕೇಳುವವರಿಲ್ಲ, ಗಜನ ಮೋಹರವು ಮುಗಿ ದಿತು. ನೀಲನ ಬಲವು ನುಗ್ದಾಯಿತು. ಜಾಂಬವಂತನ ಒಡ್ಡು ಒಡೆದಿತು. ಅಂಗದನ ಪಡೆಯು ಕೆಡೆದಿತು. ಹನುಮಂತನ ಸೇನೆಯು ಮಾಯವಾಯಿತು. ನಳನ ದಂಡು ಬಂಡಾಯಿತು. ಪೊಣರ್ಕೆಗಂಜಿ ಗಿಜಿಬಿಜಿಗುಟ್ಟುತ್ತಿರುವ ಉಳಿದ ಕೋಡಗಗಳ ಬಗೆಯುಬ್ಬಸವನ್ನು ಏನು ಹೇಳಲಿ ! ಕುದ್ದ ನಾದ ಯಮನ ಕೊಲೆಗೆಲಸವೋ ? ಕಾಲಾಂತಕ ರ್ಪದಿಯ ಕವರುವಿಕೆಯೋ ? ಮಹಾ ಭೈರವನ ಕಾಲಾಟವೋ ? ಕಲಿಕುಂ ಭಕರ್ಣನ ರಣ ಕೇಳಿಯೋ ? ದೇವೇಂದ್ರನ ಪಟ ಣದ ಸೂಳೆಗೇರಿಯು ಕಿಕ್ಕಿರಿದಿತು. ಯಮನ ಹೊಳಲಲ್ಲಿ ಹೊರಗೇರಿಯು ಕಟ್ಟಲ್ಪಟ್ಟಿತು. ಸಂಯಮ ನೀನಗರದ ಮಾರ್ಗಗ ಳೆರಡಾದುವು. ಸತ್ಯಲೋಕದ ಮಾರ್ಗವು ನುಗಾದಿತು. ಈ ಲೋಭಿಯಾದ ಸುಗ್ರಿ ವನು ಸಾಯಲಿ ! ತನ್ನಣ್ಣನನ್ನು ಕೊಂದು ಕೊಟ್ಟ ರಾಜಶ್ರೀಯ ಬಿಡಯಕ್ಕೆ ಆಶೆಪಟ್ಟು ನಮ್ಮೆಲ್ಲರನ್ನೂ ಕೆಡಿಸಿದನು. ಈ ರಾಮನು ಹೆಂಡಿರ ಮೋಹದಲ್ಲಿ ಮಣ್ಣು ಕೂಡಿಹೋ ಗಲಿ ! ಈ ಕೃಪಣರ ಹಂಗು ನಮಗೇಕೆ ಬೇಕು ? ನಮಗೇನು ಸಂಬಳವೋ ಸನ್ಮಾ ನವೋ ? ಕಾಡಿನಲ್ಲಿರುವ ಹಣಿಗುರೆಲೆಗಳನ್ನು ತಿಂದು ತೊರೆಕೆರೆಕಟ್ಟೆಗಳಲ್ಲಿರುವ ನೀರನ್ನು ಕುಡಿದು ಗಿರಿತರು ಗುಹೆಗಳಲ್ಲಿ ವಾಸಮಾಡಿಕೊಂಡಿರುವ ನಾವು ಈ ಲೋಭಿಗಳಾದ ರಾಮಸುಗ್ರೀವರಿಗೋಸ್ಕರ ಈ ರಕ್ಕಸದೆವ್ವದ ಕೈಯಲ್ಲಿ ಸಿಕ್ಕಿ ಅನ್ಯಾಯವಾಗಿ ಪ್ರಾಣ ವನ್ನು ಬಿಡಬೇಕೆಂಬ ತೆವುಲೇನು ಎಂದು ಕೊಳ್ಳುತ್ತ ಕಪಿಜಾಲವೆಲ್ಲಾ ಕಂಡಕಂಡೆ ಡೆಗಳಿಗೆ ಸರಿದಿತು. ಆಗ ಹನುಮಲಾಂಗದನಳ ಸುಷೇಣಗವಾಕಾ ದಿ ಸೇನಾಪತಿ ಗಳು ತಾವು ಭಯ ಕಂಪಿತರಾದಾಗ ಸುಗ್ರೀವನ ಮೇಲಣ ಅಭಿಮಾನದಿಂದ ಮತ್ತೆ ಗಿರಿತರುಗಳನ್ನು ಹೊತ್ತು ಕೊಂಡು ಬಂದು ದೂರದಲ್ಲಿ ನಿಂತು ಕುಂಭಕರ್ಣನ ಮೇಲೆ ಸೆದರು. ಮಂಜಿಗೆ ಮಲೆಯಂಚುವುದೇ ? ಅವುಗಳೆಲ್ಲಾ ಕುಂಭಕರ್ಣನ ಮೈಗೂದಲು ಗಳಿಗೆ ತಗುಲಿ ಪುಡಿಪುಡಿಯಾಗಿ ನೆಲದಲ್ಲಿ ಬೀಳುತ್ತಿದ್ದವು. ಸಿಡಿಲುಹೊಯ್ದರೆ ಸಿಗುರೇ ಳದ ಮಹಾಗಿರಿಯು ನುಗ್ಗೆ ಯ ದಡಿಯೇಟಿಗೆ ನೆಗ್ಗು ವುದೇ ಎನ್ನುತ್ತ ಕುಂಭಕರ್ಣನು ಹೋರುತ್ತಿರುವ ಕಪಿಪತಿಗಳನ್ನು ತನ್ನ ನೀಟಾದ ಗದಾದಂಡದಿಂದ ಹೊಯ್ದು ರಕ್ತ ವನ್ನು ಕಾರಿಸಿದನು.